ಅಧಿಕಾರಕ್ಕಾಗಿ ಕಾಂಗ್ರೆಸ್ನಲ್ಲ ಕಚ್ಚಾಟ: ಶ್ರೀರಾಮುಲು
Team Udayavani, Mar 2, 2022, 4:30 PM IST
ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆಯಲ್ಲಿಗುಂಪುಗಾರಿಕೆ ಜಾಸ್ತಿಯಾಗುತ್ತಿದೆ. ಮುಂದಿನಚುನಾವಣೆಯಲ್ಲಿ ಗೆದ್ದರೆ ಯಾರು ಕ್ಯಾಪ್ಟನ್ಆಗಬೇಕು ಎನ್ನುವುದು ಅವರ ಲೆಕ್ಕಾಚಾರ. ಆದರೆಅವರು ಗೆಲ್ಲಲ್ಲ, ಕ್ಯಾಪ್ಟನ್ ಕೂಡ ಆಗಲ್ಲ ಎಂದುಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.ನಾಯಕನಹಟ್ಟಿಯಲ್ಲಿ ಮಂಗಳವಾರಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇಕೆದಾಟು ಒಂದನೇ ಹಂತದ ಪಾದಯಾತ್ರೆಯಲ್ಲಿವಿಫಲರಾಗಿ ಈಗ ಎರಡನೆಯದನ್ನುಆರಂಭಿಸಿದ್ದಾರೆ.
ಯಾತ್ರೆಯುದ್ದಕ್ಕೂ ನಾನುಮುಂದೆ, ನೀನು ಮುಂದೆ ಎಂದು ಪೈಪೋಟಿಜೋರಾಗಿದೆ ಎಂದು ಲೇವಡಿ ಮಾಡಿದರು.ಮೇಕೆದಾಟು ಯೋಜನೆ ಬಗ್ಗೆ ಸದನದಲ್ಲಿಚರ್ಚೆ ಮಾಡಲು ಅವಕಾಶಇತ್ತು. ಆದರೆ ಕಾಂಗ್ರೆಸ್ನವರುಚರ್ಚೆಗೆ ಅವಕಾಶವನ್ನೇಕೊಡದೆ ಧರಣಿ ನಡೆಸಿದ್ದಾರೆಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರಅ ಧಿಕಾರದಲ್ಲಿದ್ದ ಅಷ್ಟೂ ದಿನ ಮೇಕೆದಾಟುಯೋಜನೆ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ.ಈಗ ಪಾದಯಾತ್ರೆ ಮಾಡುವ ಪರಿಸ್ಥಿತಿ ಯಾಕೆಬಂದಿದೆ ಎಂದಾದರೂ ಆಲೋಚನೆ ಮಾಡಲಿಎಂದರು.
ಬಿಜೆಪಿಗೇ ಬಹುಮತ: ಕಳೆದ ಚುನಾವಣೆಯಲ್ಲಿರಾಜ್ಯದ ಜನತೆ ಬಿಜೆಪಿಗೆ 104 ಸ್ಥಾನಕೊಟ್ಟಿದ್ದರು. ಬೇರೆ ಬೇರೆ ಸಾಧ್ಯತೆಗಳಲ್ಲಿಸರ್ಕಾರ ರಚನೆಯಾಗಿದೆ. ಆದರೆ ಮುಂದಿನಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣಬಹುಮತ ಬರುತ್ತದೆ. ಬಿಜೆಪಿ ನೇತೃತ್ವದಸರ್ಕಾರವೇ ಅ ಧಿಕಾರಕ್ಕೆ ಬರುತ್ತದೆ ಎಂದುವಿಶ್ವಾಸ ವ್ಯಕ್ತಪಡಿಸಿದರು.
ಉಕ್ರೇನ್ನಲ್ಲಿಸಿಲುಕಿರುವ ಮಕ್ಕಳನ್ನು ಸುರಕ್ಷಿತವಾಗಿಕರೆತರಲು ಮುಖ್ಯಮಂತ್ರಿಗಳು ಕೇಂದ್ರದಜೊತೆಗೆ ನಿರಂತರ ಸಂಪರ್ಕದಲ್ಲಿದ್ದು,ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಮಕ್ಕಳುಸಂಕಷ್ಟದಲ್ಲಿದ್ದಾರೆ, ಊಟ-ನೀರು ಸಿಗುತ್ತಿಲ್ಲಎಂದು ವಿಡಿಯೋ ಮಾಡಿ ಜಾಲತಾಣಗಳಲ್ಲಿಅಪಲೋಡ್ ಮಾಡುತ್ತಿದ್ದಾರೆ. ಆನ್ಲೈನ್ನಲ್ಲಿಸಂಪರ್ಕ ಮಾಡಿದವರನ್ನು ಕರೆತರುವ ಪ್ರಯತ್ನನಡೆಯುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ