ಅಂಗಡಿ ಮುಚ್ಚಿಸಿದ ನಗರಸಭೆ ಸಿಬ್ಬಂದಿ
Team Udayavani, Apr 24, 2021, 6:38 PM IST
ಚಿತ್ರದುರ್ಗ: ಸರ್ಕಾರದ ಮಾರ್ಗಸೂಚಿ ಇದ್ದಾಗ್ಯೂಕಳೆದ ಎರಡು ದಿನಗಳಿಂದ ವ್ಯಾಪಾರ ವಹಿವಾಟುನಡೆಸುತ್ತಲೇ ಇದ್ದ ಅಂಗಡಿ ಮುಂಗಟ್ಟುಗಳನ್ನು ನಗರಸಭೆಅ ಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರಸಂಪೂರ್ಣ ಬಂದ್ ಮಾಡಿಸಿದರು.
ಬೆಳಗ್ಗೆಯೇ ಬೀದಿಗಿಳಿದ ನಗರಸಭೆ ಅ ಧಿಕಾರಿಗಳತಂಡ ಹಾಗೂ ಪೊಲೀಸರು ನಗರದ ಬಿ.ಡಿ. ರಸ್ತೆ, ಗಾಂ ಧಿವೃತ್ತ, ಮೆದೇಹಳ್ಳಿ ವೃತ್ತ, ದಾವಣಗೆರೆ ರಸ್ತೆ, ಹೊಳಲ್ಕೆರೆರಸ್ತೆ ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ಅಗತ್ಯವಲ್ಲದವಸ್ತುಗಳ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಅಂಗಡಿಮಾಲೀಕರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು.
ಲಕ್ಷ್ಮೀ ಬಜಾರ್ನಲ್ಲಿ 11 ಗಂಟೆಯಾದರೂಬಟ್ಟೆ ಅಂಗಡಿಗಳು, ಫ್ಯಾನ್ಸಿ, ಮೊಬೈಲ್ ಮತ್ತಿತರೆಅಂಗಡಿಗಳು ತೆರೆದಿರುವುದು ತಿಳಿಯುತ್ತಿದ್ದಂತೆ ಅಲ್ಲಿಗೆಧಾವಿಸಿದ ಪೊಲೀಸರು ಮತ್ತು ಅಧಿ ಕಾರಿಗಳ ತಂಡಪ್ರತಿ ಅಂಗಡಿಯನ್ನೂ ಮುಚ್ಚಿಸಿ ಅಲ್ಲಿದ್ದ ಕೆಲಸಗಾರರನ್ನುಮನೆಗೆ ಕಳಿಸಿದರು.ಕೋವಿಡ್ ಎರಡನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರ ದಿನಸಿ, ಹೋಟೆಲ್, ಮೆಡಿಕಲ್ಶಾಪ್ ಸೇರಿದಂತೆ ಅತೀ ಅಗತ್ಯದ ವಸ್ತುಗಳಿಗೆ ಮಾತ್ರವ್ಯಾಪಾರಕ್ಕೆ ಅನುವು ಮಾಡಿಕೊಟ್ಟು, ಉಳಿದೆಲ್ಲವನ್ನೂಬಂದ್ ಮಾಡಲು ಸೂಚಿಸಿದೆ.
ಆದರೂ, ತೆರೆದಿದ್ದಅಂಗಡಿಗಳನ್ನು ಮುಚ್ಚಿಸುವ ವೇಳೆ ಕೆಲವರು ವಾಗ್ವಾದನಡೆಸಿದರು.ಸರ್ಕಾರ ಅಧಿಕೃತ ಲಾಕ್ಡೌನ್ ಘೋಷಣೆಮಾಡದಿದ್ದರೂ, ಅ ಧಿಕಾರಿಗಳು, ಪೊಲೀಸರುಬೀದಿಗಿಳಿದು ಎಲ್ಲವನ್ನೂ ಬಂದ್ ಮಾಡಿಸುವ ವೇಳೆಲಾಕ್ಡೌನ್ ಮಾಡಿದಂತೆಯೇ ಆಗುತ್ತಿದೆ ಎಂದುಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಾಸ್ಕ್ ಹಾಕದವರಿಗೆ ದಂಡ: ನಗರದಲ್ಲಿ ಸಂಚರಿಸುವಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.ಇಲ್ಲದಿದ್ದರೆ ಪೊಲೀಸರು ಹಾಗೂ ನಗರಸಭೆ ಅಧಿ ಕಾರಿಗಳುದಂಡ ವಿಧಿ ಸಲಿದ್ದಾರೆ. ಕಳೆದ ನಾಲ್ಕು ದಿನದಿಂದ ಮಾಸ್ಕ್ಹಾಕದವರಿಗೆ ದಂಡ ವಿಧಿ ಸುತ್ತಿದ್ದು, ಶುಕ್ರವಾರ ನಗರಸಭೆಅ ಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿ 4ಸಾವಿರ ರೂ. ದಂಡದ ಮೊತ್ತ ಸಂಗ್ರಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು