ಜವನಗೊಂಡನಹಳ್ಳಿ ಜವರಾಯನ ಅಟ್ಟಹಾಸ: ಸರಣಿ ಅಪಘಾತದಲ್ಲಿ ಮೂವರು ಸಾವು!
Team Udayavani, Mar 22, 2021, 1:19 PM IST
ಚಿತ್ರದುರ್ಗ: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಟಾಟಾ ಸಫಾರಿ, ಕ್ಯಾಂಟರ್ ಮತ್ತು ಕಾರಿನ ನಡುವೆ ಢಿಕ್ಕಿಯಾಗಿದ್ದು, ಟಾಟಾ ಸಫಾರಿಯಲ್ಲಿದ್ದ ಹೊಸದುರ್ಗ ಮೂಲದ ನೇಮಿರಾಜ್ (58 ವ), ಪತ್ನಿ ನಂದಾ (53 ವ) ಮತ್ತು ಕ್ಯಾಂಟರ್ ಚಾಲಕ ಪುಣೆ ಮೂಲದ ರಂಗ (35 ವ) ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ತನ್ನ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಸಾವು!
ಹೊಸದುರ್ಗ ಮೂಲದ ನೇಮಿರಾಜ್, ನಂದಾ ದಂಪತಿ ಟಾಟಾ ಸಫಾರಿಯಲ್ಲಿ ಚಿತ್ರದುರ್ಗ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಕ್ಯಾಂಟರ್ ಬೆಂಗಳೂರು ಕಡೆಯಿಂದ ಪುಣೆಗೆ ತೆರಳುತ್ತಿತ್ತು.
ಜವನಗೊಂಡನಹಳ್ಳಿಯಲ್ಲಿ ತಿರುವು ಹಾಗೂ ಏರು ರಸ್ತೆ ಇರುವುದರಿಂದ ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಹೀಗಾಗಿ ಪದೇ ಪದೇ ಅಪಘಾತ ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ಜಾತ್ರೆಯಿಂದ ಬರುತ್ತಿದ್ದವನಿಗೆ ಎದುರಾಯಿತು ಮೃತ್ಯು: ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು
ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.