ಕೋಟೆ ನಗರಿ ವರ್ತಕನ ವಾನರ ಪ್ರೇಮ
Team Udayavani, Jun 10, 2018, 5:20 PM IST
ಚಿತ್ರದುರ್ಗ: ತೋಟದಲ್ಲಿ ಹಣ್ಣು-ಕಾಯಿ ಕಿತ್ತು ಉಪಟಳ ನೀಡುವ ಕೋತಿಗಳನ್ನು ಹೊಡೆದೋಡಿಸುವವರೇ ಜಾಸ್ತಿ. ಅಂಥದ್ದರಲ್ಲಿ ಇಲ್ಲೊಬ್ಬರು ಪ್ರತಿ ಶನಿವಾರ ಕೋತಿಗಳಿಗೆ ಅನ್ನ, ಹಣ್ಣು, ಆಹಾರ ನೀಡಿ ವಾನರ ಪ್ರೇಮ ಮೆರೆಯುತ್ತಿದ್ದಾರೆ.
ನಗರದ ಬುರುಜನಹಟ್ಟಿಯ ವರ್ತಕ ಡಿ.ಬಿ. ನರಸಿಂಹಪ್ಪ ಮತ್ತು ಅವರ ಮಕ್ಕಳು ಕಳೆದ 45 ವರ್ಷಗಳಿಂದ ಕೋಟೆಯೊಳಗಿನ ಕೋತಿಗಳಿಗೆ ಪ್ರತಿ ಶನಿವಾರ ಮೊಸರನ್ನ, ಬಾಳೆಹಣ್ಣು ನೀಡುತ್ತ ಸದ್ದುಗದ್ದಲವಿಲ್ಲದೆ ವಾನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.
ಕೋಟೆಯೊಳಗಿರುವ ಅಕ್ಕ-ತಂಗಿ ಹೊಂಡದ ಸಮೀಪದ ಬಂಡೆಯ ಮೇಲೆ ಹೋಗಿ ಹನುಮಂತಪ್ಪ ಮತ್ತು ಮಕ್ಕಳು ಗೇರ್ ಗೇರ್ ಎಂದು ಕೂಗಿ ಕರೆದಾಗ ಬಂಡೆಗಳ ಮೇಲಿಂದ ಹತ್ತಾರು ಕೋತಿಗಳು ಬಂದು ಮೊಸರನ್ನ ಮತ್ತು ಬಾಳೆಹಣ್ಣಿನ ರುಚಿ ಸವಿಯುತ್ತವೆ. ಪ್ರತಿ ವರ್ಷ ಯುಗಾದಿ ಹಬ್ಬದಂದು ಕೋತಿಗಳಿಗೂ ಹೋಳಿಗೆ ಊಟ ನೀಡುವುದು ವಿಶೇಷ.
ಪ್ರತಿ ವಾರ ಕೋಟೆಗೆ ವಾಯುವಿಹಾರಕ್ಕೆ ಹೋಗುವಾಗ ಕೆಲವೊಮ್ಮೆ ಕೋತಿಗಳು ತಿನ್ನಲು ಆಹಾರವಿಲ್ಲದೆ ರೋದಿಸುತ್ತಿದ್ದುದನ್ನು ಗಮನಿಸಿದ ನರಸಿಂಹಪ್ಪ, ಏನಾದರೂ ಆಹಾರ ಕೊಡಬೇಕೆಂದು ಮನಸ್ಸು ಮಾಡಿದರು.
ಅಂದಿನಿಂದ ಇಲ್ಲಿಯವರೆಗೂ ಒಂದು ಶನಿವಾರವೂ ತಪ್ಪದೆ ಕೋತಿಗಳಿಗೆ ಮೊಸರನ್ನ, ಅಕ್ಕಿ- ಬೆಲ್ಲದ ಮಿಶ್ರಣದಿಂದ ಸಿದ್ಧಪಡಿಸುವ ಪೊಂಗಲ್ ನೀಡುತ್ತ ಬಂದಿದ್ದಾರೆ. ಮೊದಲು ನಮ್ಮ ತಂದೆ ಡಿ.ಬೊಮ್ಮಪ್ಪ ಕೋತಿಗಳಿಗೆ ಆಹಾರ ನೀಡುವುದನ್ನು ಆರಂಭಿಸಿದರು. ಅವರ ಪ್ರೇರಣೆಯಿಂದ ನಾನು ಕೋತಿಗಳಿಗೆ ಆಹಾರ ನೀಡಲು ಮುಂದಾದೆ.
ಈಗ ನನ್ನ ಮಕ್ಕಳಾದ ಬಿ.ಎನ್. ಚಂದ್ರಶೇಖರ್, ಬಿ.ಎನ್. ವೆಂಕಟೇಶ್, ಬಿ.ಎನ್. ರಂಗನಾಥ್ ಪ್ರತಿ ಶನಿವಾರ ವಾನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಹಿರಿಯರಿಂದ ಆರಂಭಗೊಂಡ ಈ ಪದ್ಧತಿಯನ್ನು ನಮ್ಮ ಕುಟುಂಬದಲ್ಲಿ ಮಕ್ಕಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಸಂತೋಷವಾಗಿದೆ ಎಂದು ಡಿ.ಬಿ. ನರಸಿಂಹಪ್ಪ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ