ಪಾಲಿಕೆಯಿಂದ ಎಲ್‌ಪಿಜಿ ಗ್ಯಾಸ್‌ ಚಾಲಿತ ಚಿತಾಗಾರ

ಪರಿಸರ ಸ್ನೇಹಿ-ಮಿತವ್ಯಯಿ ­ ಹೊಸಯಲ್ಲಾಪುರದಲ್ಲಿ ಪ್ರಾಯೋಗಿಕವಾಗಿ ಆರಂಭಕ್ಕೆ ಸಿದ್ಧತೆ

Team Udayavani, Jun 9, 2021, 6:14 PM IST

98654

ವರದಿ: ಬಸವರಾಜ ಹೂಗಾರ

ಹುಬ್ಬಳ್ಳಿ: ಕೋವಿಡ್‌ ಎಂಬ ಮಹಾಮಾರಿಯಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗ ತೊಡಗಿದ್ದು, ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕಡಿಮೆ ವೆಚ್ಚದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹೊಸಯಲ್ಲಾಪುರ ಸ್ಮಶಾನದಲ್ಲಿ ಎಲ್‌ಪಿಜಿ ಗ್ಯಾಸ್‌ ಚಾಲಿತ ನೂತನ ಚಿತಾಗಾರ ನಿರ್ಮಾಣಕ್ಕೆ ಮುಂದಾಗಿದೆ.

ಅವಳಿನಗರದಲ್ಲಿರುವ ಚಿತಾಗಾರಗಳಲ್ಲಿ ಕಟ್ಟಿಗೆ(ಸೌದೆ) ಆಧಾರಿತ ಚಿತಾಗಾರಗಳಿದ್ದು, ವಿದ್ಯುತ್‌ ಚಿತಾಗಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೆ ವಿದ್ಯುತ್‌ ಚಿತಾಗಾರಕ್ಕೆ ಹೆಚ್ಚು ವೆಚ್ಚ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್‌ಪಿಜಿ ಚಿತಾಗಾರವನ್ನು ಪ್ರಾಯೋಗಿಕವಾಗಿ ಆರಂಭಿಸಲು ಸಿದ್ಧತೆಗಳು ನಡೆದಿವೆ. ಸದ್ಯ ಪಂಜಾಬಿನ ಲೂಧಿಯಾನದಲ್ಲಿ ಈಗಾಗಲೇ ಎಲ್‌ಪಿಜಿ ಚಿತಾಗಾರ ಬಳಸಲಾಗುತ್ತಿದ್ದು, ಆಧುನಿಕ ವಿಧದ ಚಿತಾಗಾರದಲ್ಲಿ ಎರಡು ವಾಣಿಜ್ಯ (ಕಮರ್ಷಿಯಲ್‌) ಗ್ಯಾಸ್‌ ಸಿಲಿಂಡರ್‌ ಬಳಸಿ ಮೂರು ಶವಗಳ ಅಂತ್ಯಕ್ರಿಯೆ ನಡೆಸಬಹುದಾಗಿದೆ.

ವಿದ್ಯುತ್‌ ಚಿತಾಗಾರದಷ್ಟೇ ಸಮಯ ತೆಗೆದುಕೊಳ್ಳುವ ಎಲ್‌ಪಿಜಿ ಚಿತಾಗಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಗೆ ಹೊರ ಸೂಸಲಿದೆ. ಈಗ ಸದ್ಯ ರಾಜ್ಯದ ವಿವಿಧ ನಗರಗಳಲ್ಲಿ ಬಳಕೆಯಲ್ಲಿರುವ ವಿದ್ಯುತ್‌ ಚಿತಾಗಾರ ಹಾಗೂ ಇನ್ನುಳಿದ ಚಿತಾಗಾರಗಳ ದರ ಹೋಲಿಸಿದರೆ ಲೂಧಿಯಾನಾದ ಚಿತಾಗಾರದ ವೆಚ್ಚ ಅತ್ಯಂತ ಕಡಿಮೆ ಎನ್ನಬಹುದಾಗಿದೆ.

ವಿದ್ಯುತ್‌ ಚಿತಾಗಾರ ಕೇವಲ 4.40 ಲಕ್ಷ ರೂ. ಗಳಾಗಲಿದ್ದು, ಅದು ಕೂಡಾ ಸಾರಿಗೆ ಒಳಗೊಂಡಂತೆ ವೆಚ್ಚ ತಗುಲಲಿದೆ. ಈ ವ್ಯವಸ್ಥೆ ಜಾರಿಗೆ ಬಂದಿದ್ದೇ ಆದಲ್ಲಿ ಅವಳಿನಗರದಲ್ಲಿರುವ ಚಿತಾಗಾರಗಳಲ್ಲಿ ಎಲ್‌ಪಿಜಿ ಆಧಾರಿತ ಚಿತಾಗಾರ ನಿರ್ಮಾಣಕ್ಕೆ ಪಾಲಿಕೆ ಮುಂದಾಗಬಹುದು. ಇದರಿಂದ ಅವಳಿನಗರದಲ್ಲಿ ಅಂತ್ಯಕ್ರಿಯೆಗೆ ಬಳಸುವ ಸಹಸ್ರಾರು ಕ್ವಿಂಟಲ್‌ನಷ್ಟು ಕಟ್ಟಿಗೆಗಳನ್ನು ಉಳಿಸಬಹುದಾಗಿದೆ. ಇದರಿಂದ ಮರಗಳ ಕಡಿತ ನಿಲ್ಲಿಸಬಹುದು.

ಪೈಪಡ್‌ ಎಲ್‌ಪಿಜಿ ಸಂಪರ್ಕಕ್ಕೆ ಚಿಂತನೆ: ಮೂರು ಶವಗಳ ಅಂತ್ಯಕ್ರಿಯೆ ನಡೆಸಲು 2 ವಾಣಿಜ್ಯ ಬಳಕೆ ಸಿಲಿಂಡರ್‌ ಬೇಕಾಗುತ್ತದೆ. ಈಗಾಗಲೇ ಅವಳಿನಗರದಲ್ಲಿ ಮನೆಗಳಿಗೆ ಗ್ಯಾಸ್‌ಲೈನ್‌ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಚಿತಾಗಾರಕ್ಕೂ ಸಹ ಪೈಪಡ್‌ ಎಲ್‌ಪಿಜಿ ಸಂಪರ್ಕ ಪಡೆಯುವ ಕುರಿತು ಚಿಂತನೆ ನಡೆಸಿ ಈಗಾಗಲೇ ಒಂದು ಹಂತದ ಚರ್ಚೆ ಸಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದರ ಬಳಕೆಗೆ ಅನುಗುಣವಾಗಿ ಗ್ಯಾಸ್‌ ಪೈಪ್‌ ಸಂಪರ್ಕಕ್ಕೆ ಮುಂದಾಗಲಿದೆ.

ಸದ್ಯ ಅವಳಿನಗರದಲ್ಲಿರುವ ಮುಕ್ತಿಧಾಮ (ಸ್ಮಶಾನಗಳ)ದಲ್ಲಿ ಶವ ಸಂಸ್ಕಾರಕ್ಕೆ ಸುಮಾರು 3500 ರಿಂದ 4500 ರೂ.ಗಳವರೆಗೆ ವೆಚ್ಚವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್‌ಪಿಜಿ ಆಧಾರಿತ ಚಿತಾಗಾರ ಬಂದಲ್ಲಿ ಅದರ ವೆಚ್ಚವೂ ಸಹ ಕಡಿಮೆಯಾಗಬಹುದಾಗಿದೆ. ಸದ್ಯ ಪ್ರಾಯೋಗಿಕ ಹಂತವಾಗಿ ಧಾರವಾಡ ಹೊಸಯಲ್ಲಾಪುರ ಸ್ಮಶಾನದಲ್ಲಿ ಎಲ್‌ಪಿಜಿ ಆಧಾರಿತ ಚಿತಾಗಾರ ನಿರ್ಮಾಣವಾಗಲಿದ್ದು ಅದರ ಸಾಧಕ ಭಾದಕಗಳನ್ನು ನೋಡಿಕೊಂಡು ಇನ್ನುಳಿದ ಸ್ಮಶಾನಗಳಲ್ಲಿ ಚಿತಾಗಾರ ನಿರ್ಮಾಣಕ್ಕೆ ಹು-ಧಾ ಮಹಾನಗರ ಪಾಲಿಕೆ ಮುಂದಾಗಲಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.