ಕನಡಕುಮೇರು-ಪಾದೆಬಂಬಿಲ: ರಸ್ತೆ ಸಂಚಾರ ದುಸ್ತರ
ಈ ಮಣ್ಣಿನ ರಸ್ತೆ ಇದುವರೆಗೂ ಡಾಮರನ್ನೇ ಕಂಡಿಲ್ಲ: ವಾಹನ ಸವಾರರ ಪರದಾಟ
Team Udayavani, May 8, 2019, 5:50 AM IST
ಕನಡಕುಮೇರು-ಪಾದೆಬಂಬಿಲ ಮಣ್ಣಿನ ರಸ್ತೆ.
ಸವಣೂರು: ಗ್ರಾಮೀಣ ಭಾಗದ ಮೂಲ ಅವಶ್ಯಕತೆಗಳು ಸ್ವಾತಂತ್ರ್ಯ ಸಿಕ್ಕಿ ಹಲವು ದಶಕಗಳೂ ಸಂದರೂ ಈಡೇರಿಲ್ಲ ಎನ್ನುವುದಕ್ಕೆ ಬೆಳಂದೂರು ಜಿ.ಪಂ. ವ್ಯಾಪ್ತಿಯ ಸವಣೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಕನಡಕುಮೇರು – ಪಾದೆಬಂಬಿಲ ರಸ್ತೆಯೇ ಸಾಕ್ಷಿ. ಈ ರಸ್ತೆ ಇದುವರೆಗೂ ಡಾಮರು ಕಂಡಿಲ್ಲ.
60ಕ್ಕೂ ಮಿಕ್ಕಿ ಜನವಸತಿ
ಈ ರಸ್ತೆಯನ್ನು ಬಳಸಿಕೊಂಡು 60ಕ್ಕೂ ಹೆಚ್ಚು ಜನವಸತಿಯವರು ಹೋಗುತ್ತಿದ್ದಾರೆ. ಒಂದು ಭಜನ ಮಂದಿರವೂ ಇದೆ. ಆದರೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ಮನದಟ್ಟಾಗಲೇ ಇಲ್ಲ. ಸುತ್ತಮುತ್ತಲಿನ ಹಲವೆಡೆ ರಸ್ತೆಗಳು ಅಭಿವೃದ್ಧಿಯಾದರೂ ಈ ರಸ್ತೆಯ ಸ್ಥಿತಿ ಬದಲಾಗಲೇ ಇಲ್ಲ. ಈ ರಸ್ತೆಯು ಅಂಗಡಿಮೂಲೆ, ಪಂಚೋಡಿ, ಕುಂಬಮೂಲೆ, ಬರೆಮೇಲು, ಜಾರಿಗೆತ್ತಡಿ,ಪಾದೆಬಂಬಿಲ ದುರ್ಗಾ ಭಜನ ಮಂದಿರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೂ ಈ ಭಾಗದ ಜನತೆಯ ಮೂಲ ಆವಶ್ಯಕತೆ ಈಡೇರಿಸಲು ಆಡಳಿತ ಸಂಪೂರ್ಣ ವಿಫಲವಾಗಿದೆ.
ಜನಪ್ರತಿನಿಧಿಗಳು ಗಮನಹರಿಸಲಿ
ಈ ರಸ್ತೆಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮೀಣ ಭಾಗದ ಬೇಡಿಕೆ ಈಡೇರಿಸಿದ್ದೇವೆ ಎಂದು ಜನಪ್ರತಿನಿಧಿಗಳು ಅಲ್ಲಲ್ಲಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಯಾಗಿಲ್ಲ ಎನ್ನುವುದಕ್ಕೆ ನಮ್ಮ ಈ ರಸ್ತೆಯೇ ಪ್ರತ್ಯಕ್ಷ ಸಾಕ್ಷಿ. ಇನ್ನಾದರೂ ಈ ಕುರಿತು ಜನಪ್ರತಿನಿಧಿಗಳು ಗಮನಹರಿಸಲಿ ಎನ್ನುತ್ತಾರೆ ಸ್ಥಳೀಯ ವಿದ್ಯಾರ್ಥಿನಿ ವೀಣಾಶ್ರೀ ಎ.ಎಲ್.
ಮನವಿ ಮಾಡಿದ್ದೇವೆ
ಈ ರಸ್ತೆ ಸಮಸ್ಯೆ ಕುರಿತು ಖುದ್ದಾಗಿ ಶಾಸಕ ಎಸ್. ಅಂಗಾರ ಅವರಿಗೆ, ಜಿ.ಪಂ. ಸದಸ್ಯರಿಗೂ ಮನವಿ ಮಾಡಿದ್ದೇವೆ. ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಭರವಸೆ ನೀಡಿದ್ದಾರೆ
– ಸತೀಶ್ ಅಂಗಡಿಮೂಲೆ ಸದಸ್ಯರು, ಸವಣೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!