ಆರು ತಿಂಗಳಾದರೂ ಮುಗಿಯದ 200 ಮೀ. ರಸ್ತೆ ಕಾಮಗಾರಿ 


Team Udayavani, May 27, 2018, 2:48 PM IST

27-may-12.jpg

ಮೂಲ್ಕಿ : ಕೇವಲ 200 ಮೀಟರ್‌ ರಸ್ತೆ ಕಾಮಗಾರಿ ಆರಂಭ ವಾಗಿ ಸುಮಾರು ಆರು ತಿಂಗಳಾದರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪ್ರಯಾಣಿಕರು ನಿತ್ಯವೂ ಪರದಾಡಬೇಕಾದ ಸ್ಥಿತಿ ಕಾರ್ನಾಡು ಗೇರು ಕಟ್ಟೆಯಲ್ಲಿದೆ. ರಾಜ್ಯ ಹೆದ್ದಾರಿ ಇಲಾಖೆಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬೆಳ್ತಂಗಡಿ- ಮೂಡಬಿದಿರೆ- ಮೂಲ್ಕಿ ರಸ್ತೆಯ ಕಾರ್ನಾಡು ಗೇರುಕಟ್ಟೆಯಿಂದ ಗಾಂಧಿ ಮೈದಾನದವರೆಗಿನ 200 ಮೀಟರ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಆರಂಭದಿಂದ ನಿತ್ಯವೂ ಈ ರಸ್ತೆಯಲ್ಲಿ ಬರುವ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ.

ದೂರದೂರಿನವರಿಗೆ ಸಂಕಷ್ಟ
ಕಿನ್ನಿಗೋಳಿ ಮಾರ್ಗವಾಗಿ ಧರ್ಮಸ್ಥಳ, ಕಟೀಲು, ವೇಣೂರು ಮತ್ತು ಬಜ್ಪೆ ವಿಮಾನ ನಿಲ್ದಾಣದಂತಹ ಪ್ರಮುಖ ಸ್ಥಳಗಳಿಗೆ ಉಡುಪಿಯಿಂದ ಮೂಲ್ಕಿ ಮಾರ್ಗವಾಗಿ ಹೋಗಬೇಕಾದವರಿಗೆ ಈ ರಸ್ತೆಯನ್ನು ಉಪಯೋಗಿಸುವುದು ಅನಿವಾರ್ಯ ವಾಗಿದೆ. ಆದರೆ ವಿಳಂಬಗೊಂಡಿರುವ ಕಾಮಗಾರಿಯಿಂದಾಗಿ ದೂರ ದೂರಿನಿಂದ ಬರುವ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾಗಿದೆ.

ಇಲಾಖೆಗಳ ಸಹಕಾರ ಇಲ್ಲ
ಈ ಬಗ್ಗೆ ಹೆದ್ದಾರಿ ಇಲಾಖೆಯ ಉಸ್ತುವಾರಿ ಅಧಿಕಾರಿಗಳಿಗೆ ಕೇಳಿದರೆ ಅವರು ಗುತ್ತಿಗೆದಾರರತ್ತ ಬೆರಳು ತೋರಿಸುತ್ತಾರೆ. ಇನ್ನು ಗುತ್ತಿಗೆದಾರರಲ್ಲಿ ಕೇಳಿದರೆ ಕಾಮಗಾರಿ ವೇಳೆ ಮುಖ್ಯವಾಗಿ ಆಗಬೇಕಿರುವ ಮರ, ವಿದ್ಯುತ್‌ ಕಂಬಗಳ ತೆರವು ಪ್ರಕ್ರಿಯೆ ನಡೆಯದೇ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಇಲಾಖೆಗಳ ನಡುವೆ ಸಹಕಾರ ಇಲ್ಲದೇ ಇರುವುದೇ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇಲಾಖೆಯ ಮೂಲಗಳ ಪ್ರಕಾರ ಕಿನ್ನಿಗೋಳಿ ಮೂರು ಕಾವೇರಿಯಿಂದ ಮೂಲ್ಕಿಯ ಕಾರ್ನಾಡು ಜಂಕ್ಷನ್‌ ವರೆಗೆ 10 ಕಿ.ಮೀ. ರಸ್ತೆಯನ್ನು ಐದೂವರೆ ಮೀಟರ್‌ನಿಂದ 7 ಮೀಟರ್‌ಗೆ ದ್ವಿಪಥ ರಸ್ತೆ ನಿರ್ಮಾಣದ ಕೆಲಸದ ಗುತ್ತಿಗೆಯನ್ನು ಮಂಗಳೂರಿನ ಗುತ್ತಿಗೆದಾರರಿಗೆ ವಹಿಸಲಾ ಗಿದೆ. ಇದರಲ್ಲಿ ಹೆದ್ದಾರಿಯ ಇಕ್ಕೆಲಗಳ ಎರಡೂ ಬದಿಯಲ್ಲಿ ಒಂದು ಮೀಟರ್‌ ನಂತೆ ಡಾಮರೀಕರಣಗೊಳಿಸಿ ಅಗಲಗೊಳಿಸ ಲಾಗುವುದು. ಇದರಲ್ಲಿ ಈ ಇನ್ನೂರು ಮೀಟರ್‌ ಪ್ರದೇಶದಲ್ಲಿ ನೀರು ಹೋಗಲು ಚರಂಡಿ ನಿರ್ಮಿಸಲು ಜಾಗವಿಲ್ಲದಂತಾಗಿದೆ. ಕಾರಣ ರಸ್ತೆಯ ಎರಡೂ ಬದಿಯಲ್ಲಿ ಪಟ್ಟಾ ಮಾಲಕತ್ವದ ಜಮೀನು ಇದೆ. ಒಂದು ವೇಳೆ ಚರಂಡಿ ನಿರ್ಮಿಸದೇ ಇದ್ದರೆ ರಸ್ತೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಕೇವಲ 200 ಮೀಟರ್‌ ರಸ್ತೆ ಕಾಂಕ್ರೀಟ್‌ ಮಾಡಲಾಗುತ್ತಿದೆ.

ಮುಕ್ತಾಯ ಹಂತವನ್ನೇ ಕಾಣುತ್ತಿಲ್ಲ 
ಟೆಂಡರ್‌ ಪ್ರಕಾರ ಗುತ್ತಿಗೆದಾರರು ಇದನ್ನು ಮಾತ್ರವಲ್ಲ ಅವ ರಿಗೆ ವಹಿಸಲಾದ 10 ಕಿ.ಮೀ. ನಲ್ಲಿ ಅವರಿಗೆ ವಹಿಸಲಾದ ಕಾಮಗಾರಿಯನ್ನು ಮೇ ತಿಂಗಳಾಂತ್ಯಕ್ಕೆ ಮುಗಿಸಿಕೊಡಬೇಕಿತ್ತು. ಈ ರಸ್ತೆ ಕಾಮಗಾರಿ ಆರಂಭಗೊಂಡ ಬಳಿಕ ಮೂಲ್ಕಿ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳು ಆರಂಭಗೊಂಡು ಮುಕ್ತಾಯವಾಗಿವೆ. ಆದರೆ ಈ ರಸ್ತೆ ಕಾಮಗಾರಿ ಮಾತ್ರ ಮುಕ್ತಾಯ ಹಂತವನ್ನೇ ಕಾಣುತ್ತಿಲ್ಲ.

ಮರು ಟೆಂಡರ್‌ಗೆ ಶಿಫಾರಸು
ಹಲವು ಸಮಸ್ಯೆಗಳು ಇರುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸ ಲಾಗುತ್ತಿಲ್ಲ. ಸದ್ಯ ಇಲ್ಲಿ 200 ಮೀಟರ್‌ ರಸ್ತೆಯನ್ನು ಮಾತ್ರ ಮುಗಿಸಿಕೊಡಲು ತಿಳಿಸಲಾಗಿದೆ. ಉಳಿದ ಕಾಮಗಾರಿ ಅವಧಿಯ ಒಳಗೆ ಮುಗಿಸಲಾರದೇ ಇದ್ದರೆ ಮರುಟೆಂಡರ್‌ ಕರೆದು ಬೇರೆಯವರಿಗೆ ವಹಿಸಿಕೊಡಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಸದ್ಯ ಮಳೆಗಾಲ ಆರಂಭವಾಗಲಿರುವುದರಿಂದ ಮಳೆಗಾಲ ಬಳಿಕ ಮತ್ತೆ ಕಾಮಗಾರಿ ಪ್ರಾರಂಭಿಸಲಾಗುವುದು.
– ಗಣೇಶ್‌ ಅರಳೀಕಟ್ಟೆ, ಕಾರ್ಯಪಾಲಕ ಎಂಜಿನಿಯರ್‌,
ಪಿಡಬ್ಲ್ಯೂಡಿ ರಾಜ್ಯ ಹೆದ್ದಾರಿ-70
ಬೆಳ್ತಂಗಡಿ- ಮೂಡಬಿದಿರೆ- ಮೂಲ್ಕಿ ವಿಭಾಗ

ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.