ಶಿಕ್ಷಣ ವ್ಯವಸ್ಥೆಯಲ್ಲಿ ಪರಿಷ್ಕರಣೆ ಅಗತ್ಯ: ಮುರಳೀಧರನ್‌

ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವ

Team Udayavani, Feb 28, 2020, 1:14 AM IST

ego-59

ಉಳ್ಳಾಲ: ಕೆ.ಸಿ. ನಾೖಕ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಉಳ್ಳಾಲ: ಪ್ರಸಕ್ತ ಕಾಲದ ಆವಶ್ಯಕತೆ, ಸವಾಲುಗಳಿಗೆ ಅನುಗುಣವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಷ್ಕರಣೆ ಆಗಬೇಕಿದೆ. ಪ್ರಾಚೀನ ಭಾರತದ ಬುದ್ಧಿವಂತಿಕೆಯ ಪ್ರಯೋಗಗಳನ್ನು ಆಧುನಿಕ ಪ್ರಪಂಚದ ಸವಾಲುಗಳ ಜತೆ ಸಂಯೋಜನೆ ಮಾಡುವುದರಿಂದ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ವಿದೇಶಾಂಗ ಸಚಿವ ವಿ. ಮುರಳೀಧರನ್‌ ಹೇಳಿದರು.

ಅವರು ಮಂಗಳೂರು ವಿವಿ ಸಭಾಂಗಣದಲ್ಲಿ ಗುರುವಾರ ನಡೆದ ವಿ.ವಿ.ಯ 38ನೇ ಘಟಿಕೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪ.ಪೂ. ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಾಧಾರಿತ ಶಿಕ್ಷಣವನ್ನು ಪರಿಚಯಿ ಸುವುದರಿಂದ ಭವಿಷ್ಯದ ಉದ್ಯೋಗ ಆವಶ್ಯಕತೆಗಳಿಗೆ ಪೂರಕವಾಗಲಿದೆ. ದೇಶಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಶಿಕ್ಷಣ ನೀತಿ ಈ ಎಲ್ಲ ಅಂಶಗಳನ್ನು ಒಳ ಗೊಂಡಿದ್ದು, ಪ್ರೌಢ ಶಿಕ್ಷಣದಿಂದ ಹಿಡಿದು ಸಂಶೋಧನೆಯವರೆಗೆ ವಿದ್ಯಾರ್ಥಿಗಳಿಗೆ ಬಹು ಆಯ್ಕೆಗಳನ್ನು ಒದಗಿಸಲಿದೆ ಎಂದರು.

ಪದವಿ ಪ್ರದಾನ
ಶಿಕ್ಷಣ, ಸಾಮಾಜಿಕ ಸೇವೆ ಪರಿಗಣಿಸಿ ಉದ್ಯಮಿ ಕೆ.ಸಿ. ನಾೖಕ್‌ ಅವರಿಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಯಿತು. ಇಬ್ಬರಿಗೆ ಡಾಕ್ಟರ್‌ ಆಫ್‌ ಲಿಟರೇಚರ್‌ ಹಾಗೂ 105 ಮಂದಿಗೆ ಪಿಎಚ್‌ಡಿ ಪದವಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ 34 ಪದವೀಧ‌ರರಿಗೆ ಚಿನ್ನದ ಪದಕ ಹಾಗೂ 120 ಪದವೀಧರರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಘಟಕೋತ್ಸವಕ್ಕೆ ಚಾಲನೆ ನೀಡಿದರು. ಕುಲಸಚಿವ ಪ್ರೊ| ಎ.ಎಂ. ಖಾನ್‌ ಪ್ರಸ್ತಾವನೆಗೈದರು. ಕಲಾನಿಕಾಯದ ಡೀನ್‌ ಪ್ರೊ| ಪಿ.ಎಲ್‌. ಧರ್ಮ, ಶಿಕ್ಷಣ ನಿಕಾಯದ ಡೀನ್‌ ಪ್ರೊ| ಕಿಶೋರ್‌ ಕುಮಾರ್‌, ವಾಣಿಜ್ಯ ನಿಕಾಯದಲ್ಲಿ ಪ್ರೊ| ಶ್ರೀಧರ್‌. ವಿಜ್ಞಾನ ನಿಕಾಯದಲ್ಲಿ ಪ್ರೊ| ಶಿವಲಿಂಗಯ್ಯ ಪದವೀಧರರ ವಿವರ ನೀಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಮತ್ತು ಆಂಗ್ಲ ಅಧ್ಯಯನ ವಿಭಾಗದ ಡಾ| ರವಿಶಂಕರ್‌ ನಿರ್ವಹಿಸಿದರು.

ತರಕಾರಿ ವ್ಯಾಪಾರಿ ಪುತ್ರಿಗೆ ಚಿನ್ನದ ಪದಕ
ಬದಿಯಡ್ಕ ಮಾರ್ಪನಡ್ಕದ ತರಕಾರಿ ವ್ಯಾಪಾರಿ ಅಚ್ಯುತ ಮಣಿಯಾಣಿ ಪದ್ಮಾರ್‌ ಹಾಗೂ ಹೇಮಲತಾ ದಂಪತಿ ಪುತ್ರಿ ಶೋಭಿತಾ ಅವರಿಗೆ ಚಿನ್ನದ ಪದಕ ದೊರೆತಿದೆ. ಆನ್ವಯಿಕ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕ, ಒಂದು ನಗದು ಮತ್ತು ಒಂದು ಮೆರಿಟ್‌ ಸರ್ಟಿಫಿಕೆಟ್‌ನೊಂದಿಗೆ ಪಡೆದುಕೊಂಡಿದ್ದಾರೆ.

 ಘಟಕೋತ್ಸವ ಆರಂಭದಲ್ಲಿ ಮಂಗಳಾ ಆಡಿಟೋರಿಯಂ ಬಳಿ ಹುತಾತ್ಮ ಸೈನಿಕರ ನೆನಪಿಗಾಗಿ ನಿರ್ಮಿಸಿದ ಶಹೀದ್‌ ಸ್ಥಳ್‌(ಶಕ್ತಿ ಸ್ಥಳ)ವನ್ನು ವಿದೇಶಾಂಗ ಸಚಿವ ವಿ. ಮುರಳೀಧರನ್‌ ಅನಾವರಣ ಮಾಡಿದರು.

 ಮಂಗಳೂರು ವಿ.ವಿ. 2018- 19ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಹಾಜರಾದ 42,405 ವಿದ್ಯಾರ್ಥಿಗಳ ಪೈಕಿ 29,914 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 70.54 ಫಲಿತಾಂಶ ದಾಖಲಿಸಿದೆ. ಸ್ನಾತಕೋತ್ತರ ಪದವಿ ಪರೀಕ್ಷೆಗೆ ಹಾಜರಾದ 6,663 ವಿದ್ಯಾರ್ಥಿಗಳಲ್ಲಿ 6,217 ಮಂದಿ ತೇರ್ಗಡೆಯಾಗಿದ್ದಾರೆ. ಪದವಿ ಪರೀಕ್ಷೆಗೆ ಹಾಜರಾದ 35,602 ವಿದ್ಯಾರ್ಥಿಗಳಲ್ಲಿ 23,561 ಮಂದಿ ಉತ್ತೀರ್ಣರಾಗಿದ್ದಾರೆ.

 ಗಮನ ಸೆಳೆದ ಬಣ್ಣ ಬಣ್ಣದ ನಿಲುವಂಗಿ: ಈ ಬಾರಿ ಘಟಿಕೋತ್ಸವದಲ್ಲಿ ಸಂಪ್ರದಾಯದಂತೆ ಧರಿಸುತ್ತಿದ್ದ ನಿಲುವಂಗಿಯಾದ ಕಪ್ಪು ಬಣ್ಣದ ಗೌನ್‌ಗೆ ತಿಲಾಂಜಲಿ ನೀಡಿದ್ದು, ಮುಖ್ಯ ಅತಿಥಿ, ವಿ.ವಿ. ಅಧಿಕಾರಿಗಳು, ನಿಕಾಯದ ಡೀನ್‌ಗಳು ಮತ್ತು ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ಸದಸ್ಯರು ವಿವಿಧ ಬಣ್ಣಗಳ ಗೌನು ಧರಿಸಿದ್ದರು.

 ಕನ್ನಡ ಅಧ್ಯಯನ ವಿಭಾಗದಲ್ಲಿ ಪಲ್ಲವಿ ಎಸ್‌.ಎನ್‌. ಒಂದು ಚಿನ್ನದ ಪದಕ ಮತ್ತು ಐದು ನಗದು ಪುರಸ್ಕಾರ, ಇತಿಹಾಸ ವಿಭಾಗದಲ್ಲಿ ಸಣ್ಣ ರಾಘವೇಂದ್ರ ಒಂದು ಚಿನ್ನದ ಪದಕ ಮತ್ತು ಆರು ನಗದು ಪುರಸ್ಕಾರ, ಎಂಎಸ್ಸಿ ಭೌತಶಾಸ್ತ್ರದಲ್ಲಿ ಲಕ್ಷ್ಮೀ ಚಂದ್ರನ್‌ ಅವರು ಎರಡು ಚಿನ್ನದ ಪದಕ ಮತ್ತು ನಾಲ್ಕು ಪ್ರಶಸ್ತಿಗಳು ಮತ್ತು ಒಂದು ನಗದು ಪುರಸ್ಕಾರ, ಎಂಬಿಎ ವಿಭಾಗದಲ್ಲಿ ಸಿ.ಎಸ್‌. ರಶ್ಮಿ ಮತ್ತು ಬಿಕಾಂ ಪದವಿಯಲ್ಲಿ ಅರುಷಿ ಸಿ.ಎಸ್‌. ಅವರು ಎರಡು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಪಡೆದರು. ಅರ್ಥಶಾಸ್ತ್ರದಲ್ಲಿ ರಾಕೇಶ್‌ ಆರ್‌. ಅಮೀನ್‌, ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ಅಪೂರ್ವ ಶೆಟ್ಟಿ, ಗ್ರಂಥ ವಿಜ್ಞಾನದಲ್ಲಿ ತಶಿ ಲಮೋ ಅವರು ಒಂದು ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರಗಳನ್ನು ಪಡೆದರು.

 ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಪಶ್ವಿ‌ಮ ಆಫ್ರಿಕಾದ ಗಾಂಬಿಯಾ ದೇಶದಿಂದ ಮಂಗಳೂರು ವಿವಿಗೆ ಬಂದಿರುವ ಮೂಸಾ ಎಲ್‌.ಫಾಲ್‌ ಅವರು ಮಂಗಳೂರು ವಿವಿ ವ್ಯವಹಾರ ಆಡಳಿತ ವಿಭಾಗದಲ್ಲಿ ಮಂಡಿಸಿದ ಪ್ರಬಂಧ‌ಕ್ಕೆ ಪಿ.ಎಚ್‌.ಡಿ. ಪದವಿ ಪಡೆದಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.