ಬಡತನಕ್ಕೆ ಸವಾಲೆಸೆದ ಶಶಾಂಕ್ಗೆ ರಾಜ್ಯದಲ್ಲಿ 4ನೇ ರ್ಯಾಂಕ್
Team Udayavani, May 2, 2018, 12:38 PM IST
ಪುತ್ತೂರು: ತಂದೆ ಲಿವರ್ ಕ್ಯಾನ್ಸರ್ಗೆ ಬಲಿಯಾದ ಮೇಲೆ ಕುಟುಂಬಕ್ಕೆ ತಾಯಿಯೇ ಆಧಾರ. ಬೀಡಿ ಕಟ್ಟಿ ಸಾಕಿ ಬೆಳೆಸಿದ ತಾಯಿಯ ಶ್ರಮಕ್ಕೆ ಮಗ ಪ್ರತಿಫಲ ನೀಡಿದ್ದಾನೆ. ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆಯುವ ಮೂಲಕ ತಾಯಿ ಶ್ರಮವನ್ನು ಸಾರ್ಥಕಗೊಳಿಸಿದ್ದಾನೆ.
ಬಂಟ್ವಾಳ ಸಜಿಪನಡುವಿನ ಶಶಿಕಲಾ ಮತ್ತು ದಿ| ರಾಘವ ದಂಪತಿ ಪುತ್ರ. ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿ. ತಂದೆಯ ಅಗಲಿಕೆ, ಬಡತನ ಶಶಾಂಕ್ಗೆ ಸವಾಲಾಗಿತ್ತು. ತಾಯಿಯ ಧೈರ್ಯದ ಮಾತು, ಸ್ಫೂರ್ತಿ ತುಂಬಿದವು. ಈ ಎಲ್ಲ ಬವಣೆ, ಶ್ರಮ, ನೋವು ಮಗನ ಸಾಧನೆ ಮುಂದೆ ಇಲ್ಲವಾಗಿದೆ. ಪಿಯುಸಿ ಪರೀಕ್ಷೆಯಲ್ಲಿ 592 ಅಂಕ ಪಡೆದಿರುವ ಶಶಾಂಕ್, ಸಿ.ಎ. ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಸಾಧನೆಗೆ ತಾಯಿಯ ಪ್ರೋತ್ಸಾಹ, ಗುರು, ವಿದ್ಯಾಲಯದ ಬೆಂಬಲ ಕಾರಣ ಎನ್ನುತ್ತಾರೆ ಶಶಾಂಕ್. ಸಹೋದರಿ ರಶ್ಮಿತಾ ಎಂ.ಎಸ್ಸಿ. ವಿದ್ಯಾರ್ಥಿನಿ.
ಶಶಾಂಕ್ ಅಂಕ- ಇಂಗ್ಲಿಷ್-94, ಕನ್ನಡ- 98, ಸಂಖ್ಯಾಶಾಸ್ತ್ರ-100, ಗಣಕವಿಜ್ಞಾನ- 100, ವ್ಯವಹಾರ ಅಧ್ಯಯನ- 100, ಲೆಕ್ಕಶಾಸ್ತ್ರ – 100. ಒಟ್ಟು 600ರಲ್ಲಿ 592 (ಶೇ. 98.6).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ