ಮಳೆ, ಸಂಭಾವ್ಯ ನೆರೆ ಪರಿಸ್ಥಿತಿ: ಅಗ್ನಿ ಶಾಮಕ ಸೇವಾ ಇಲಾಖೆ ಸನ್ನದ್ಧ


Team Udayavani, May 27, 2018, 2:32 PM IST

27-may-11.jpg

ಮಹಾನಗರ : ಮಳೆಗಾಲದಲ್ಲಿ ಸಂಭವಿಸುವ ಅನಾಹುತ ಮತ್ತು ದುರಂತಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅಗ್ನಿ ಶಾಮಕ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಂಗಳೂರಿನ ಅಗ್ನಿ ಶಾಮಕ ಠಾಣೆಗಳು ಈ ನಿಟ್ಟಿನಲ್ಲಿ ಸರ್ವಸನ್ನದ್ಧವಾಗಿವೆ.

ಜಿಲ್ಲೆಯಲ್ಲಿ ಒಟ್ಟು 7 ಅಗ್ನಿ ಶಾಮಕ ಠಾಣೆಗಳಿದ್ದು, ಒಟ್ಟು 150 ಅಧಿಕಾರಿ ಮತ್ತು ಸಿಬಂದಿ ವರ್ಗದವರು ಇದ್ದಾರೆ. ಪ್ರತಿ ತಾಲೂಕಿಗೆ ಒಂದರಂತೆ ಅಗ್ನಿ ಶಾಮಕ ಠಾಣೆ ಇದ್ದು, ಮಂಗಳೂರು ನಗರದಲ್ಲಿ ಎರಡು (ಪಾಂಡೇಶ್ವರ ಮತ್ತು ಕದ್ರಿ) ಹಾಗೂ ಮೂಡಬಿದಿರೆಯಲ್ಲಿ ಒಂದು ಠಾಣೆ ಇದೆ.

ಪ್ರತೀ ಠಾಣೆಯಲ್ಲಿ (ತಾಲೂಕಿಗೆ ಎರಡರಂತೆ) ಜಲ ವಾಹನಗಳಿವೆ. ಮಂಗಳೂರಿನಲ್ಲಿ ಮೂರು ಜಲ ವಾಹನಗಳಿವೆ. ನೀರನ್ನು ತೆಗೆದು ಹೊರ ಹಾಕಲು ಪೋರ್ಟಬಲ್‌ ಪಂಪ್‌ಗಳು, ನಗರದಲ್ಲಿ ರೆಸ್ಕೂé (ರಕ್ಷಣಾ) ವಾಹನ, ಒಂದೊಂದು ಬೋಟ್‌ಗಳು, ಹಗ್ಗ, ಲೈಫ್‌ ಬೋಯ್‌, ಲೈಫ್‌ ಜಾಕೆಟ್‌, ಆಸ್ಕಾ ಲೈಟ್‌ಗಳಿವೆ. 

ಜಿಲ್ಲಾಡಳಿತದೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಅಗ್ನಿ ಶಾಮಕ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಡಳಿ ತದಿಂದ ಬರುವ ಮಾಹಿತಿಯನ್ನು ಆಧರಿಸಿ ಆವಶ್ಯವಿರುವ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತದೆ.

ನೆರೆ ಬರುವ ಸಾಧ್ಯತೆ ಇದ್ದರೆ ನದಿ ದಡದ ಮತ್ತು ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಿಸಲು ವ್ಯವಸ್ಥೆ ಮಾಡಲಾಗಿದೆ. ಮನೆ, ಕಟ್ಟಡಗಳಲ್ಲಿ ನೀರು ತುಂಬಿದರೆ ಅದನ್ನು ಮೇಲೆತ್ತಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಮುಖ್ಯ ಅಗ್ನಿ ಶಾಮಕ ಅಧಿಕಾರಿ ಟಿ.ಎನ್‌. ಶಿವಶಂಕರ.

ಮನೆ, ಕಟ್ಟಡ, ರಸ್ತೆ, ವಿದ್ಯುತ್‌ ಲೈನ್‌ಗಳ ಮೇಲೆ ಮರಗಳು ಬಿದ್ದರೆ, ಅವುಗಳನ್ನು ಮೇಲೆತ್ತಿ ಜನರನ್ನು ರಕ್ಷಿಸಲು ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಿವಿಧ ಅಗ್ನಿ ಶಾಮಕ ಠಾಣೆಗಳ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ಕಟ್ಟೆಚ್ಚ ರದಿಂದ ಇರುವಂತೆ ಹಾಗೂ ರಜಾ ದಿನಗಳ ಲ್ಲಿಯೂ ತುರ್ತು ಆವಶ್ಯಕತೆ ಇದ್ದರೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಎಲ್ಲ ಠಾಣೆಗಳಲ್ಲಿ ಸಾಕಷ್ಟು ಸಿಬಂದಿ ಇದ್ದರೂ, ತುರ್ತು ಸಂದರ್ಭಗಳಲ್ಲಿ ಅಗತ್ಯ ಬಿದ್ದರೆ ಅಕ್ಕ ಪಕ್ಕದ ಠಾಣೆಗಳ ಸಿಬಂದಿ ಜತೆ ಕೈಜೋಡಿಸಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಜನರೂ ಸಹಕಾರ ನೀಡುತ್ತಿದ್ದಾರೆ
ಇಲಾಖೆಗೆ ಜನರು ಮತ್ತು ಪೊಲೀಸರು ಮಾಹಿತಿ ನೀಡುತ್ತಾರೆ. ಅನಾಹುತ ನಡೆಯುವ ಸ್ಥಳಕ್ಕೆ ತೆರಳುವ ಅಧಿಕಾರಿಗಳು ಸಂದರ್ಭದ ಮಹತ್ವವನ್ನು ಅರಿತು ಅಗತ್ಯ ಬಿದ್ದರೆ ಸ್ಥಳೀಯ ಜನರ ಮತ್ತು ಸಂಘ ಸಂಸ್ಥೆಗಳ ಹಾಗೂ ಪೊಲೀಸರ ಸಹಕಾರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಏರಿಯಲ್‌ ಲ್ಯಾಡರ್‌ ಪ್ಲಾಟ್‌ಫೋರ್ಮ್
ಬಹು ಮಹಡಿ ಕಟ್ಟಡಗಳಲ್ಲಿ ಸಂಭವಿಸುವ ದುರಂತಗಳ ನಿರ್ವಹಣೆಗೆ ಸಂಬಂಧಿಸಿ ಏರಿಯಲ್‌ ಲ್ಯಾಡರ್‌ ಪ್ಲಾಟ್‌ಫೋರ್ಮ್ ಎಂಬ ಅತ್ಯಾಧುನಿಕ ಯಂತ್ರೋಪಕರಣವನ್ನು ಇಲಾಖೆ ಹೊಂದಿದೆ. ಇದರ ಮೂಲಕ 32 ಮೀಟರ್‌ ಎತ್ತರದಲ್ಲಿ ನಿಂತು ರಕ್ಷಣಾ ಕಾರ್ಯ ನಿರ್ವಹಿಸಲು
ಸಾಧ್ಯವಾಗುತ್ತದೆ

ತುರ್ತು ಸಂದರ್ಭಗಳಲ್ಲಿ ಈ ನಂಬರ್‌ಗೆ ಸಂಪರ್ಕಿಸಿರಿ
1. ಪಾಂಡೇಶ್ವರ ಅಗ್ನಿ ಶಾಮಕ ಠಾಣೆ: 08242423333
2.ಕದ್ರಿ ಅಗ್ನಿ ಶಾಮಕ ಠಾಣೆ: 08242211085/ 2213192
3. ಮೂಡಬಿದಿರೆ ಅಗ್ನಿ ಶಾಮಕ ಠಾಣೆ: 08258237021
4. ಬಂಟ್ವಾಳ ಅಗ್ನಿ ಶಾಮಕ ಠಾಣೆ: 08255230101
5.ಬೆಳ್ತಂಗಡಿ ಅಗ್ನಿ ಶಾಮಕ ಠಾಣೆ: 08256232621
6. ಪುತ್ತೂರು ಅಗ್ನಿ ಶಾಮಕ ಠಾಣೆ: 08251232101
7.ಸುಳ್ಯ ಅಗ್ನಿ ಶಾಮಕ ಠಾಣೆ: 08257230900

 ಎಚ್ಚರಿಕೆ ಸಂದೇಶ
ಮೂರು ತಿಂಗಳಿಂದ ಚಂಡ ಮಾರುತದ ಬಗ್ಗೆ ಜಿಲ್ಲಾಡಳಿತದಿಂದ ಆಗಿಂದಾಗ್ಗೆ ಎಚ್ಚರಿಕೆ ಸಂದೇಶ ಬರುತ್ತಿದೆ. ಅಂತಹ ಮಾಹಿತಿ ಬಂದಾಗ ವಿಶೇಷವಾಗಿ ಉಳ್ಳಾಲ, ಸೋಮೇಶ್ವರ ಬೀಚ್‌ಗಳಿಗೆ ಠಾಣೆಯ ಆಧಿಕಾರಿಗಳನ್ನು ಮತ್ತು ಸಿಬಂದಿಯನ್ನು ವಾಹನದೊಂದಿಗೆ ಕಳುಹಿಸಿ ಕೊಡಲಾಗುತ್ತಿದೆ. ಈಗಾಗಲೇ ಹಲವು ಬಾರಿ ನಮ್ಮ ಅಧಿಕಾರಿ ಮತ್ತು ಸಿಬಂದಿ ಅಲ್ಲಿಗೆ ಹೋಗಿ ಮುಂಜಾಗ್ರತಾ ಕ್ರಮ ಕೈಗೊಂಡು ಬಂದಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಒಂದು ಸಭೆ ನಡೆಸಿದೆ. ಸೋಮವಾರ ಇನ್ನೊಂದು ಸಭೆ ನಡೆಯಲಿದೆ.
ಶಿವ ಶಂಕರ ಟಿ.ಎನ್‌.
ಮುಖ್ಯ ಅಗ್ನಿ ಶಾಮಕ ಅಧಿಕಾರಿ,
ಮಂಗಳೂರು ವಿಭಾಗ 

ಹಿಲರಿ ಕ್ರಾಸ್ತಾ 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.