ಎರಡೂವರೆ ತಿಂಗಳಲ್ಲಿ 8.33 ಕೋ.ರೂ. ನಷ್ಟ
Team Udayavani, Jun 14, 2018, 6:00 AM IST
ಮಂಗಳೂರು: ಈ ಬಾರಿಯ ಮುಂಗಾರು ಋತುವಿನಲ್ಲಿ ಅತಿಹೆಚ್ಚು ಹೊಡೆತಕ್ಕೆ ಸಿಲುಕಿರುವ ಸಂಸ್ಥೆಯೆಂದರೆ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ). ಕಳೆದ ಎರಡೂ ವರೆ ತಿಂಗಳಲ್ಲಿ ಗಾಳಿ-ಮಳೆಯಿಂದ ಸುಮಾರು 6,400ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲ ಕ್ಕುರುಳಿದ್ದು, 8 ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಮೆಸ್ಕಾಂ ವ್ಯಾಪ್ತಿಗೆ ಬರು ತ್ತಿದ್ದು, ಈ ಭಾಗಗಳಲ್ಲಿ ನಿರೀಕ್ಷೆಗೂ ಮೀರಿದ ನಷ್ಟ ಮೆಸ್ಕಾಂಗೆ ಸಂಭವಿಸಿದೆ. ವಿದ್ಯುತ್ ಸಂಪರ್ಕವನ್ನು ಯಥಾಸ್ಥಿತಿಗೆ ತರಲು ಇಲಾಖೆ ಸಿಬಂದಿ ಹರಸಾಹಸ ಪಡುತ್ತಿದ್ದಾರೆ. ಮೆಸ್ಕಾಂ ಮಾಹಿತಿಯಂತೆ, ನಾಲ್ಕು ಜಿಲ್ಲೆಗಳಲ್ಲಿ ಕೇವಲ ಎರಡೂವರೆ ತಿಂಗಳಲ್ಲಿ 6,400ಕ್ಕೂ ಅಧಿಕ ವಿದ್ಯುತ್ ಕಂಬಗಳು, 500ಕ್ಕೂ ಅಧಿಕ ವಿದ್ಯುತ್ ಪರಿ ವರ್ತಕಗಳು ಹಾನಿಗೀಡಾಗಿ ಒಟ್ಟು 8.33 ಕೋಟಿ ರೂ.ವಿಗೂ ಅಧಿಕ ನಷ್ಟ ಅನುಭವಿಸಿದೆ. ದ.ಕ. ಜಿಲ್ಲೆಯಲ್ಲೇ ಅತಿಹೆಚ್ಚು 2.98 ಕೋಟಿ ರೂ. ನಷ್ಟವಾಗಿದೆ. ಗಾಳಿ ಮಳೆಯಿಂದಾಗಿ ಎ. 1ರಿಂದ ಜೂ. 11ರ ವರೆಗೆ ಉಡುಪಿ ಜಿಲ್ಲೆಯಲ್ಲಿ 2.14 ಕೋಟಿ ರೂ., ಶಿವಮೊಗ್ಗದಲ್ಲಿ 1.70 ಕೋಟಿ ರೂ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1.51ಕೋ. ರೂ. ನಷ್ಟ ಸಂಭವಿಸಿದೆ.
6,446 ಕಂಬಗಳಿಗೆ ಹಾನಿ
4 ಜಿಲ್ಲೆಗಳಲ್ಲಿ ಒಟ್ಟು 6,446 ವಿದ್ಯುತ್ ಕಂಬ ಗಳು ಹಾನಿಗೀಡಾಗಿದ್ದು, 5,590 ಕಂಬಗಳನ್ನು ಬದಲಾ ಯಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ಅತಿ ಹೆಚ್ಚು 2,109 ಕಂಬಗಳಿಗೆ ಹಾನಿಯಾಗಿದ್ದು ಎಲ್ಲ ಕಂಬಗಳನ್ನು ಮರು ಸ್ಥಾಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 1,896 ಕಂಬಗಳು ಹಾನಿಗೊಂಡಿದ್ದು ಇದರಲ್ಲಿ 1,195 ಕಂಬಗಳನ್ನು ಬದಲಾಯಿಸಲಾಗಿದೆ; 770 ಕಂಬಗಳು ಬದಲಾಸಲು ಬಾಕಿ ಇವೆ. ಶಿವಮೊಗ್ಗ ದಲ್ಲಿ ಹಾನಿಗೊಳಗಾದ ಎಲ್ಲ 1,315 ಕಂಬಗಳ ಬದಲಿಗೆ ಹೊಸದನ್ನು ಹಾಕಲಾಗಿದೆ. ಚಿಕ್ಕಮಗಳೂರಿ ನಲ್ಲಿ 1,126 ಕಂಬಗಳಿಗೆ ಹಾನಿಯಾಗಿದೆ. 977 ಬದ ಲಾಯಿಸಲಾಗಿದ್ದು 149 ಕಂಬಗಳು ಬದ ಲಾಯಿಸಲು ಬಾಕಿ ಇವೆ.
ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 474 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೀಡಾಗಿದ್ದು 397.97 ಕಿ.ಮೀ. ಮಾರ್ಗದಲ್ಲಿ ತಂತಿಗಳ ದುರಸ್ತಿ ಅಥವಾ ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು 162 ಕಿ.ಮೀ., ದಕ್ಷಿಣ ಜಿಲ್ಲೆಯಲ್ಲಿ 154 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೊಳಾಗಿದ್ದು ಎಲ್ಲ ವನ್ನೂ ಸರಿಪಡಿಸಲಾಗಿದೆ. ಉಡುಪಿ ಜಿಲ್ಲೆ ಯಲ್ಲಿ ಹಾನಿಗೊಳಗಾದ 40 ಕಿ.ಮೀ. ವಿದ್ಯುತ್ ಮಾರ್ಗದಲ್ಲಿ 34.97 ಕಿ.ಮೀ. ಸರಿಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾನಿಗೊಳಗಾದ 113 ಕಿ.ಮೀ. ವಿದ್ಯುತ್ ಮಾರ್ಗದಲ್ಲಿ 74 ಕಿ.ಮೀ. ದುರಸ್ತಿಗೊಳಿಸಲಾಗಿದೆ.
536 ಪರಿವರ್ತಕಗಳು ಹಾನಿ
ಮೆಸ್ಕಾಂನ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 536 ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್ಫಾರ್ಮರ್) ಹಾನಿಗೀಡಾಗಿದ್ದು, 524ನ್ನು ದುರಸ್ತಿ ಅಥವಾ ಬದಲಾಯಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು 260 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿದ್ದು ಮರುಸ್ಥಾಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಹಾನಿಗೊಳಗಾದ 240 ವಿದ್ಯುತ್ ಪರಿವರ್ತಕದಲ್ಲಿ 235ನ್ನು ಸರಿಪಡಿಸಲಾಗಿದೆ. ಶಿವಮೊಗ್ಗದಲ್ಲಿ ಹಾನಿಗೊಳಗಾದ 27 ಪರಿವರ್ತಕಗಳಲ್ಲಿ 24 ಹಾಗೂ ಜಿಕ್ಕಮಗಳೂರಿನಲ್ಲಿ 9 ಪರಿವರ್ತಕಗಳ ಪೈಕಿ 6ನ್ನು ಮರುಸ್ಥಾಪಿಸಲಾಗಿದೆ.
2 ತಿಂಗಳಿನಿಂದ ಮೆಸ್ಕಾಂ ಎಂಡಿ ಹುದ್ದೆ ಖಾಲಿ!
ಮಳೆಗಾಲದಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಹಕರಿಂದ ಹೆಚ್ಚಿನ ದೂರುಗಳು ಬರುತ್ತಿರುತ್ತವೆ. ಆದರೆ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಬೇಕಾಗಿರುವ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಎರಡು ತಿಂಗಳಿಂದ ಖಾಲಿಯಿದೆ. ಎಂಡಿ ಯಾಗಿದ್ದ ರಾಮಕೃಷ್ಣ ಅವರು ಎಪ್ರಿಲ್ ನಲ್ಲಿ ವರ್ಗಾವಣೆಗೊಂಡಿದ್ದು, ಹೊಸಬರ ಭರ್ತಿಯಾಗಿಲ್ಲ. ಪ್ರಸ್ತುತ ಪವರ್ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್(ಪಿಸಿಕೆಎಲ್)ನ ವ್ಯವ ಸ್ಥಾಪಕ ನಿರ್ದೇಶಕ ಟಿ.ಎಚ್.ಎಂ. ಕುಮಾರ್ ಮೆಸ್ಕಾಂನ ಪ್ರಭಾರ ಎಂಡಿ ಆಗಿದ್ದಾರೆ. ಇದಕ್ಕಾಗಿ ವಾರದಲ್ಲಿ 3 ದಿನ ಬೆಂಗಳೂರಿನಿಂದ ಮಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಮೆಸ್ಕಾಂಗೆ ಪೂರ್ಣಕಾಲಿಕ ವ್ಯವಸ್ಥಾಪಕ ನಿರ್ದೇಶಕರಿದ್ದರೆ ತುರ್ತು ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ