ಆಸರೆ ಕಳೆದುಕೊಂಡ ಮಕ್ಕಳ ಬದುಕಿಗೆ ಆಧಾರವಾದ ದಂಪತಿ


Team Udayavani, Nov 14, 2017, 10:03 AM IST

14-13.jpg

ಮಂಗಳೂರು: ಹೆತ್ತವರನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳಿಗೆ ತಾಯ್ತನದ ಪ್ರೀತಿಯನ್ನು ಧಾರೆ ಎರೆದು, ಶಿಕ್ಷಣ ಹಾಗೂ ಸಾಧನೆಯ ದಾರಿಯಲ್ಲಿ ಬೆಂಗಾವಲಾಗಿ ನಿಂತ ಮಂಗಳೂರಿನ ದಂಪತಿಯೊಬ್ಬರ ಹೃದಯವಂತಿಕೆಯ ಕತೆಯಿದು. “ನನಗಾರಿಲ್ಲ’ ಎಂದು ಬೇಸರಿಸಿ ಬೆಂಡಾದ ಎರಡು ಎಳೆಯ ಮನಸುಗಳು ಈ ದಂಪತಿಯ ಪರಿಶ್ರಮದ ಫಲವಾಗಿ ಪ್ರಸ್ತುತ ಸಾಧನೆಯ ಉತ್ತುಂಗದಲ್ಲಿದ್ದಾರೆ.

ಮಂಗಳೂರಿನ ಉರ್ವ ಕೆನರಾ ಶಾಲೆಯ ಮುಂಭಾಗದಲ್ಲಿರುವ ಅಭಿಮಾನ್‌ ಪ್ಯಾಲೇಸ್‌ ನಿವಾಸಿಗಳಾದ ದಿನೇಶ್‌ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಡಿ. ಶೆಟ್ಟಿ ಅವರೇ ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ಆಶ್ರಯದಾತರಾದ ಸಹೃದಯಿಗಳು. ದಿನೇಶ್‌ ದಂಪತಿ ಮಾಲಕತ್ವದ ಮೂಡಬಿದಿರೆ ಭೂಮಿಕಾ ಗ್ರಾನೈಟ್ಸ್‌ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಗಲಕೋಟೆಯ ಕಾರ್ಮಿಕ ದಂಪತಿ ಕಳೆದ ಸುಮಾರು 17 ವರ್ಷಗಳ ಹಿಂದೆ ಮಲೇರಿಯಾ ಜ್ವರಕ್ಕೆ ತುತ್ತಾಗಿ ನಿಧನಹೊಂದಿದರು. ಹೆತ್ತವರನ್ನು ಕಳೆದುಕೊಂಡು ದಿಕ್ಕು ತೋಚದಂತಾದ ಇಬ್ಬರು ಹೆಣ್ಣು ಮಕ್ಕಳಿಗೆ ಬದುಕಿನ ದಾರಿ ತೋರಿಸಿ 17 ವರ್ಷಗಳಿಂದ ಈ ದಂಪತಿ ತಮ್ಮದೇ ಮಕ್ಕಳೆಂಬಂತೆ ನೋಡಿಕೊಳ್ಳುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಬದುಕುವ ಛಲ ಹುಟ್ಟಿಸಿ, ಜೀವನ ರೂಪಿಸುವ ಕಲೆಯನ್ನೂ ಕರಗತ ಮಾಡಿಸಿದ್ದಾರೆ.

ಪ್ರತಿಭಾ ಖಣಿ ಇವರು
ಬಾಗಲಕೋಟೆಯ ಬಾದಾಮಿ ತಾಲೂಕಿನವರಾದ ತನುಜಾ ಮತ್ತು ಜ್ಯೋತಿ ಹೆತ್ತವರು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಆಟವಾಡಿಕೊಂಡೇ ಬೆಳೆದವರು. ಆದರೆ ಹಠಾತ್ತಾಗಿ ಬಂದೆರಗಿದ ಹೆತ್ತವರ ಸಾವು ಇಬ್ಬರು ಮಕ್ಕಳನ್ನು ಕಂಗೆಡಿಸಿತ್ತು. ಆದರೆ ಸಂಸ್ಥೆಯ ಮಾಲಕ ದಂಪತಿ ಈ ಮಕ್ಕಳನ್ನು ಸುಮ್ಮನೇ ಬಿಡಲಿಲ್ಲ. ತಮ್ಮದೇ ಮಕ್ಕಳಂತೆ ಪೋಷಿಸಿ, ಇಬ್ಬರನ್ನೂ ಸುಶಿಕ್ಷಿತರನ್ನಾಗಿ ಮಾಡಬೇಕೆಂದು ಶ್ರಮಿಸುತ್ತಿದ್ದಾರೆ. ದಿನೇಶ್‌-ವಿಜಯಲಕ್ಷ್ಮೀ ದಂಪತಿಯ ಪುತ್ರಿ ದಿಶಾಳೊಂದಿಗೆ ತಾವೂ ಸೇರಿಕೊಂಡು ಓದುತ್ತಾ, ಬರೆಯುತ್ತಾ ಅಕ್ಷರ ಜ್ಞಾನ ಸಂಪಾದಿಸಿದ್ದಾರೆ. 24 ವರ್ಷದ ಜ್ಯೋತಿ ಪೈಟಿಂಗ್‌ ತರಬೇತಿ ಕಲಿತುಕೊಂಡದ್ದಲ್ಲದೇ ತಾನು ಬಿಡಿಸಿದ ಚಿತ್ರಗಳನ್ನೇ ಮನೆಯ ಸೌಂದರ್ಯ ವೃದ್ಧಿಗೆ ಬಳಸಿಕೊಂಡಿದ್ದಾರೆ. ಎಕ್ಸಿಬಿಶನ್‌ಗಳಲ್ಲಿ ತನ್ನ ಪೈಟಿಂಗ್‌ಗಳನ್ನು ಪ್ರದರ್ಶನಕ್ಕಿಟ್ಟು ಭೇಷ್‌ ಎನಿಸಿಕೊಂಡಿದ್ದಾರೆ. ಎಂಬ್ರಾçಡರಿ, ಟೈಲರಿಂಗ್‌ನಲ್ಲಿಯೂ ಈಕೆ ಸಿದ್ಧಹಸ್ತಳು. ಮನೆಯಲ್ಲೇ ಓದು ಬರಹ ಕಲಿತು ಇದೀಗ ಖಾಸಗಿಯಾಗಿ ಎಸೆಸ್ಸೆಲ್ಸಿ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ತನುಜಾ 1ನೇ ತರಗತಿಯಲ್ಲಿ ಓದಿದ್ದು ಕೇವಲ ಮೂರು ತಿಂಗಳು. ಸುಮಾರು 10 ವರ್ಷಗಳ ಅನಂತರ ಖಾಸಗಿಯಾಗಿ ಎಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬರೆದು ಕ್ರಮವಾಗಿ ಶೇ. 46, ಶೇ. 79 ಅಂಕ ಗಳಿಸಿದರು. ಪ್ರಸ್ತುತ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ. ಬ್ಯೂಟಿಶಿಯನ್‌ ತರಬೇತಿ ಪಡೆದಿರುವ ತನುಜಾ, ಸಾಹಿತ್ಯ ರಚನೆ, ಕ್ರೀಡೆ, ಹಾಡುಗಾರಿಕೆ, ಹೊಸ ಹೊಸ ಅಡುಗೆಯಲ್ಲಿ ಎತ್ತಿದ ಕೈ. ಐಎಎಸ್‌ ಮಾಡಬೇಕೆಂಬ ಕನಸು ತನುಜಾಳದ್ದು. “ಈ ಮನೆಯಲ್ಲಿ ನಮಗೆ ಆಶ್ರಯ ನೀಡಿರುವುದಲ್ಲದೇ ಮನೆಯ ಮಕ್ಕಳಂತೇ ನೋಡಿಕೊಳ್ಳುತ್ತಿರುವುದು ನಮ್ಮ ಪಾಲಿನ ಅದೃಷ್ಟ. ಯಾವುದೇ ಸಮಸ್ಯೆ ಆಗದಂತೆ ನಮ್ಮನ್ನು ಬೆಳೆಸುತ್ತಿದ್ದಾರೆ. ಅವರ ಇಷ್ಟದಂತೆ ನಾವು ಬದುಕಿನಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದೇವೆ. ಅದನ್ನು ನನಸಾಗಿಸುವ ಛಲವೂ ಇದೆ’ ಎನ್ನುತ್ತಾರೆ ತನುಜಾ. 

ನಿಷ್ಠಾವಂತ ಕಾರ್ಮಿಕರು
ತನುಜಾ ಮತ್ತು ಜ್ಯೋತಿಯ ಹೆತ್ತವರಿಗೆ ಐವರು ಮಕ್ಕಳು. ಓರ್ವ ಅಕ್ಕ ಮತ್ತು ಇಬ್ಬರು ಗಂಡು ಮಕ್ಕಳ ಪೈಕಿ ಓರ್ವರಿಗೆ ಮದುವೆಯಾಗಿದ್ದರೆ, ಇನ್ನೊಬ್ಬ ಹುಡುಗ ಊರಿನಲ್ಲೇ ಐಟಿಐ ಓದುತ್ತಿದ್ದಾನೆ. ಇವರ ಹೆತ್ತವರ ಕಾಯಕನಿಷ್ಠೆಗೆ ಮನಸೋತ ದಿನೇಶ್‌ ಶೆಟ್ಟಿ ದಂಪತಿ, ಕಾರ್ಮಿಕ ದಂಪತಿಯ ಸಾವಿನಿಂದ ನಿಷ್ಠಾವಂತ ಕಾರ್ಮಿಕರನ್ನು ಕಳೆದುಕೊಂಡ ದುಃಖದ ಜೊತೆಗೆ ಅವರ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾದರು. ಎಳವೆಯಲ್ಲೇ ಉತ್ತಮ ನಡವಳಿಕೆ ರೂಢಿಸಿಕೊಂಡ ಇಬ್ಬರು ಮಕ್ಕಳನ್ನು ತಮ್ಮದೇ ಮಕ್ಕಳಂತೆ ಸಾಕಿ ಸಲಹಿ ಬೆಳೆಸುವ ಸಂಕಲ್ಪ ತೊಟ್ಟರು. ಇದೀಗ 17 ವರ್ಷಗಳಿಂದ ಮಕ್ಕಳ ಬಾಳಲ್ಲಿ ಬೆಳಕಿನ ಸುಧೆ ಹರಿಸುತ್ತಿದ್ದಾರೆ. ಅಲ್ಲದೇ ಮಾನವೀಯತೆಯ ಅಂತಃಕರಣಕ್ಕೆ ಸಾಕ್ಷಿಯಾಗಿದ್ದಾರೆ.

ಎಲ್ಲಕ್ಕೂ ಸೈ
ಈ ಇಬ್ಬರು ಮಕ್ಕಳು ನಮ್ಮ ಮನೆಯ ದೀಪಗಳಿದ್ದಂತೆ. ನಮ್ಮದೇ ಮಕ್ಕಳಂತೆ ಅವರನ್ನು ಬೆಳೆಸಿದ್ದೇವೆ. ಮನೆಯಲ್ಲೇ ಅಕ್ಷರ ಕಲಿತು ಸಾಧನೆ ಮಾಡಿದ ಈ ಮಕ್ಕಳು ಎಲ್ಲ ರಂಗಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪೈಟಿಂಗ್‌, ಹಾಡುಗಾರಿಕೆ, ಕ್ರೀಡೆ, ಸಾಹಿತ್ಯ ಹೀಗೆ ಎಲ್ಲವೂ ಗೊತ್ತು. ಅವರಿಂದ ನಾವೂ ಕಲಿತದ್ದೆಷ್ಟೋ.
ವಿಜಯಲಕ್ಷ್ಮೀ ಶೆಟ್ಟಿ

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.