ದಾರಿ ಕಾಣದಾದ ನಾಯಿ ಈಗ ಮೂರು ಮನೆಗೆ ಅತಿಥಿ !
Team Udayavani, Jun 14, 2018, 6:00 AM IST
ಮಂಗಳೂರು: ಈ ನಾಯಿಯ ಚಿತ್ರವನ್ನು ಮೊಬೈಲ್ನಲ್ಲಿ ನೋಡಿರಬಹುದು. ಏಕೆಂದರೆ “ಮನೆಯಿಂದ ಕಾಣೆಯಾದ ಈ ನಾಯಿಯ ಯಜಮಾನರು ಎಲ್ಲಿಯಾದರೂ ಇದ್ದರೆ ಸಂಪರ್ಕಿಸಿ’ ಎಂಬ ಮೆಸೇಜ್ ವಾಟ್ಸಾಪ್/ಫೇಸ್ಬುಕ್ನಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಸದ್ಯಕ್ಕೆ ನಾಯಿ ಮೂರನೇ ಮನೆ ಸೇರಿದೆ.
ಮೇ 29ಕ್ಕೆ ನಗರದಲ್ಲಿ ಭಾರೀ ಮಳೆ ಸುರಿದಾಗ ಯಾವುದೋ ಮನೆಯಿಂದ ನಾಯಿಯೊಂದು ದಾರಿ ಕಾಣದೆ ಮಲ್ಲಿಕಟ್ಟೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿತ್ತು. ಸಾಕು ನಾಯಿಯಂತೆ ಗೋಚರಿಸುತ್ತಿದ್ದ ಅದು ಅಂತಿಮವಾಗಿ ಸಾಯಿರಾಧಾ ವಾಹನ ಶೋರೂಂ ಪಕ್ಕದ ಅಂಗಡಿ/ಮನೆಯ ಬಳಿ ಕುಳಿತಿತ್ತು. ಒಂದೆರಡು ದಿನ ಸ್ಥಳೀಯರು ಆ ನಾಯಿಗೆ ಆಹಾರ ನೀಡಿ ಉಪಚರಿಸಿದರು. ಮರುದಿನ ನಾಯಿ ಶೋರೂಂ ಬಳಿ ಸ್ಥಳಾಂತರಗೊಂಡಿತು. ಕಾವಲುಗಾರ ಆಹಾರ ನೀಡಿದ ಮೇಲೆ ನಾಯಿ ಅಲ್ಲಿಂದ ಕದಲಲಿಲ್ಲ. ಸಂಸ್ಥೆಯ ಸಿಬಂದಿಯೂ ತಿಂಡಿ ನೀಡಿದರು. ಹೀಗೇ ಒಂದು ವಾರ ಕಳೆಯಿತು.
ವಾಟ್ಸಾಪ್ ಮೆಸೇಜ್
ನಾಯಿಯ ಅಸಹಾಯಕತೆ ಕಂಡ ಶೋರೂಂ ಸಿಬಂದಿ “ನಾಯಿ ಒಂದು ಬಂದಿದೆ. ಮನೆಯವರ ಹುಡುಕಾಟದಲ್ಲಿದೆ’ ಎಂಬ ಸಚಿತ್ರ ಸಂದೇಶವನ್ನು ವಾಟ್ಸಾಪ್ನಲ್ಲಿ ರವಾನಿಸಿದರು. ಆ ಮೆಸೇಜ್ ಬೇರೆ ಬೇರೆ ಗ್ರೂಪ್ಗ್ಳಲ್ಲಿ ಹರಿದಾಡಿತು. ಮರುದಿನ ಬೆಳಗ್ಗೆ ಹಲವು ಶ್ವಾನಪ್ರಿಯರು ಬಂದು ನಾಯಿ ಬಗ್ಗೆ ವಿಚಾರಿಸಿದರು. 10-15 ಮಂದಿ ಶೋರೂಂಗೆ ಬಂದು ನಾಯಿಯನ್ನು ವೀಕ್ಷಿಸಿದರು. ಅದರಲ್ಲಿ ಮಲ್ಲಿಕಟ್ಟೆಯ ಲೋಬೋ ಲೈನ್ ನಿವಾಸಿಯೊಬ್ಬರು, “ನಾಯಿಯನ್ನು ರಸ್ತೆ ಬದಿ ಬಿಡುವ ಬದಲು ಸಾಕುತ್ತೇನೆ’ ಎಂದು ಮನೆಗೆ ಕರೆದುಕೊಂಡು ಹೋದರು.
ಸಂಜೆಯಾಗುವಷ್ಟರಲ್ಲಿ ಓರ್ವರು ಲೋಬೋ ಲೈನ್ ನಿವಾಸಿಗೆ ಕರೆ ಮಾಡಿ, “ನಾಯಿಗೆ ಒಂದೆರಡು ದಿನ ನಾವೂ ಊಟ ನೀಡಿದ್ದೇವೆ. ನಾವೇ ನಾಯಿಯನ್ನು ಸಾಕುತ್ತೇವೆ’ ಎಂದು ಕರೆದೊಯ್ದರು. ಅಲ್ಲಿಗೆ ನಾಯಿ ಮತ್ತೂಂದು ಮನೆಗೆ ರವಾನೆಯಾಯಿತು.
ಕಥೆ ಇಲ್ಲಿಗೇ ಮುಗಿಯಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಈ ವಿಷಯ ಹರಿದಾಡಿದ್ದನ್ನು ಗಮನಿಸಿದ ಪಂಪ್ವೆಲ್ ಸಮೀಪದ ಮನೆಯವರು “ನಾಯಿ ನಮ್ಮದು’ ಎಂದು ಕರೆದೊಯ್ದಿದ್ದಾರೆ. ಇದರರ್ಥ, ಮೂರನೇ ಯಜಮಾನನ ಮನೆಗೆ. ಆದರಿನ್ನೂ ನಿಜವಾದ ಯಜಮಾನ ಯಾರೆಂಬುದು ಖಚಿತವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಬಸ್ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ