ಅಮೆರಿಕದಿಂದ ನೌಕರಿ ಬಿಟ್ಟು ಬಂದ ತುಳುನಾಡಿನ ಹುಡುಗಿ!

ಬಬ್ರೂ ಚಿತ್ರದಲ್ಲಿ "ಗಾನಾ' ಬಜಾನ

Team Udayavani, Nov 3, 2019, 5:11 AM IST

nn-26

ಮಹಾನಗರ: ಸಿನೆಮಾದ ಮೇಲಿನ ಅತಿಯಾದ ಸೆಳೆತದಿಂದಾಗಿ ಅಮೆರಿಕ ಬಿಟ್ಟು ಸ್ವದೇಶಕ್ಕೆ ಮರಳಿದ ಕರಾವಳಿಯ ಕುವರಿ ಗಾನಾ ಭಟ್‌, ಸುಮನ್‌ ನಗರ್‌ಕರ್‌ ನಿರ್ಮಾಣದ “ಬಬ್ರೂ’ ಕನ್ನಡ ಚಲನಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ, ಚಂದನವನಕ್ಕೆ ಕರಾವಳಿಯ ಮತ್ತೋರ್ವ ಹುಡುಗಿ ಪರಿಚಿತರಾಗುತ್ತಿದ್ದಾರೆ.

ಸಂಪೂರ್ಣವಾಗಿ ಅಮೆರಿಕದಲ್ಲೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ “ಬಬ್ರೂ’ ನವೆಂಬರ್‌ ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಮಂಗಳೂರಿನ ಗಾನಾ ಭಟ್‌ ಕನ್ನಡಕ್ಕೆ ಹೊಸಬರು. ಮುಂದೆ ಕನ್ನಡದಲ್ಲೇ ಮುಂದುವರಿಯುವ ಆಸಕ್ತಿ ಹೊಂದಿರುವ ಗಾನಾಗೆ “ಬಬ್ರೂ’ವಿನಲ್ಲಿ ನಟಿಸಿದ ಬಳಿಕ ಅವಕಾಶಗಳೂ ಬರುತ್ತಿವೆಯಂತೆ.

ರಸ್ತೆ ಸಂಚಾರದ ಕಥೆ
“ಬಬ್ರೂ’ ಎಂಬುದು ಕಾರಿನ ಹೆಸರಾಗಿದ್ದು, ಇಬ್ಬರು ಭಾರತೀಯರ ರಸ್ತೆ ಸಂಚಾರದ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ. ಇದೊಂದು ಥ್ರಿಲ್ಲರ್‌ ಸಿನೆಮಾವಾಗಿದ್ದು, ಚಿತ್ರ ನೋಡಿದ ಮೇಲೆ ಒಳ ತಿರುಳು ಗೊತ್ತಾಗಲಿದೆ ಎನ್ನುತ್ತಾರೆ ಗಾನಾ. ಇದರಲ್ಲಿ ನಿರ್ಮಾಪಕಿ ಸುಮನ್‌ ನಗರ್‌ಕರ್‌ ಅವರು ಮಧ್ಯ ವಯಸ್ಕ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತೂಂದು ವಿಶೇಷ.

ಚಿತ್ರದಲ್ಲಿ ಗಾನಾ ಸಹಿತ ಬಹುತೇಕ ಅನಿವಾಸಿ ಭಾರತೀಯರೂ ನಟಿಸಿದ್ದಾರೆ. ಚಿತ್ರತಂಡದ ಸಹಕಾರದೊಂದಿಗೆ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೆವು ಎನ್ನುತ್ತಾರವರು.

ಎಂಜಿನಿಯರ್‌ ಹುಡುಗಿಗೆ ಸಿನೆಮಾದ್ದೇ ಕನಸು
ಮಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಗಾನಾ ಹಾರಿದ್ದು ಅಮೆರಿಕದತ್ತ. ಅಲ್ಲಿ ಯಾಹೂ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೈ ತುಂಬ ಸಂಬಳ ಪಡೆಯುತ್ತಿದ್ದವರು. ಆದರೆ ಎಳವೆಯಲ್ಲೇ ಸಿನೆಮಾದೆಡೆಗೆ ಇದ್ದ ಆಸಕ್ತಿ, ಗಾನಾರನ್ನು ಅಮೆರಿಕ ತ್ಯಜಿಸಿ ಭಾರತಕ್ಕೆ ಮರಳುವಂತೆ ಮಾಡಿತು. 2015ರಿಂದೀಚೆಗೆ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದ ಗಾನಾ, ಅಮೆರಿಕದಲ್ಲಿದ್ದಾಗಲೇ ಕೆಲವು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು. ನಾಗರಾಜ್‌ ಭಟ್‌ ನಿರ್ದೇಶನದ “ಟ್ಯಾಕ್ಸಿ 24×7′ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಎಲ್ಲ ಅವಕಾಶಗಳು ಅವರನ್ನು ಸಿನೆಮಾ ಲೋಕಕ್ಕೆ ಪರಿಚಯಿಸಿತು.

ಡ್ಯಾನ್ಸ್‌ ಬಿತ್ತರಕ್ಕೆ ಯೂಟ್ಯೂಬ್‌ ಚಾನೆಲ್‌
ಗಾನಾ ಅವರೊಬ್ಬ ಡ್ಯಾನ್ಸರ್‌ ಕೂಡ ಹೌದು. ತಮ್ಮದೇ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ತಮ್ಮ ವಿವಿಧ ಪ್ರಯೋಗಾತ್ಮಕ ನೃತ್ಯಗಳನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಚುರಪಡಿಸುತ್ತಿದ್ದರು. ಗಾನಾ ಸಿನಿ ಪಯಣಕ್ಕೆ ಇದು ಕೂಡ ಪ್ಲಸ್‌ ಪಾಯಿಂಟ್‌ ಆಗಿದೆ ಎನ್ನುತ್ತಾರೆ ಅವರು. ಪ್ರಸ್ತುತ ಬೆಂಗಳೂರಿನ ಯಾಹೂ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದುಕೊಂಡೇ ತಮ್ಮ ಸಿನೆಮಾ ಪಯಣವನ್ನು ಮುಂದುವರಿಸುತ್ತಿದ್ದಾರೆ.

ತುಳು ಸಿನೆಮಾಗಳಲ್ಲೂ ನಟಿಸುವಾಸೆ
ಗಾನಾ ಆಸಕ್ತಿಯ ಕ್ಷೇತ್ರ ಸಿನೆಮಾ. ಅದರಲ್ಲೂ ಕನ್ನಡ ಸಿನೆಮಾಗಳ ಕಡೆ ಹೆಚ್ಚಿನ ಒಲವು. ಅವಕಾಶಗಳು ಬರುತ್ತಿದ್ದರೂ ಉತ್ತಮ ಕಥೆಗಳಿಗಾಗಿ ಎದುರು ನೋಡುತ್ತಿದ್ದೇನೆ ಎನ್ನುವ ತುಳುನಾಡಿನ ಕುವರಿ ಗಾನಾಗೆ, ತುಳು ಚಿತ್ರಗಳಲ್ಲಿಯೂ ನಟಿಸುವಾಸೆಯಂತೆ. ಹೆಚ್ಚಿನ ಎಲ್ಲ ತುಳು ಸಿನೆಮಾಗಳು ಕಾಮಿಡಿ ಆಧಾರಿತವಾಗಿದ್ದು, ಇದು ನನಗೆ ಹೆಚ್ಚು ಖುಷಿ ಕೊಡುತ್ತದೆ. ತುಳುನಾಡಿನ ನನ್ನ ಜನಗಳ ಪ್ರೋತ್ಸಾಹವೂ ನನಗೆ ತುಂಬಾ ಸಿಗುತ್ತಿದೆ. ಹಾಗಾಗಿ ತುಳು ಸಿನೆಮಾದಲ್ಲಿ ನಟಿಸುವ ಅವಕಾಶ ಬಂದರೆ ಖಂಡಿತಾ ಒಪ್ಪಿಕೊಳ್ಳುವೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.

-   ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.