ಯುವತಿ ಮುಖದ ಮೇಲೆ ಅರಳಿದ ಸಿಂಹದ ಚಿತ್ರ!

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ ಚೇತನಾ ಎಸ್‌. ಅವರ ಕೈಚಳಕ

Team Udayavani, Oct 30, 2020, 5:45 AM IST

ಯುವತಿ ಮುಖದ ಮೇಲೆ ಅರಳಿದ ಸಿಂಹದ ಚಿತ್ರ!

ಮಹಾನಗರ: ಯುವತಿಯೊಬ್ಬಳ ಮೊಗದಲ್ಲಿ ಸಿಂಹದ ಚಿತ್ರವನ್ನು ರಚಿಸುವ ಮುಖೇನ ಮಂಗಳೂರಿನ ಸೌಂದರ್ಯ ಕಲಾವಿದೆ ಚೇತನಾ ಎಸ್‌. ಅವರು ಇದೀಗ ಎಲ್ಲರ ಗಮನಸೆಳೆದಿದ್ದಾರೆ.

ಕೇವಲ ಐದು ಗಂಟೆಯಲ್ಲಿ ತನ್ನ ಕಲಾ ಚಾತುರ್ಯ ಮೆರೆದಿರುವ ಅವರು ತಮ್ಮ ಶಿಷ್ಯೆ ಶ್ರೇಯಾ ಎಂ. ಭಟ್‌ ಅವರ ಮುಖ ಹಾಗೂ ಕೂದಲನ್ನು ಉಪ ಯೋಗಿಸಿಕೊಂಡು ಚಿತ್ರಿಸಿರುವ ಸಿಂಹದ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇವರ ಈ ಆಕರ್ಷಕ ಚಿತ್ರಕಲೆಯನ್ನು ಛಾಯಾಚಿತ್ರಗ್ರಾಹಕ ವಿವೇಕ್‌ ಸಿಕ್ವೇರಾ ಸೆರೆ ಹಿಡಿದಿದ್ದು, ಅನೇಕರಿಂದ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.

ನಗರದ ಚೇತನಾ ಬ್ಯೂಟಿ ಲಾಂಜ್‌ ಆ್ಯಂಡ್‌ ಅಕಾಡೆಮಿಯ ಮುಖ್ಯಸ್ಥರಾಗಿರುವ ಚೇತನಾ ಅವರದ್ದು ಫೇಸ್‌ ಪೈಂಟಿಂಗ್‌ ಮೊದಲ ಪ್ರಯೋಗ. ಸಾಮಾನ್ಯವಾಗಿ ವಿದೇಶಗಳಲ್ಲಿ ಈ ರೀತಿಯ ಪೈಂಟಿಂಗ್‌ ಮಾಡಲಾಗುತ್ತದೆ. ಚೇತನಾ ಅವರು ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿದ್ದಾರೆ. ಅವರು ಬಿಎ (ಮನಃಶಾಸ್ತ್ರ) ಪದವೀಧರೆ. ಹವ್ಯಾಸವಾಗಿ ಬ್ಯೂಟಿಶಿಯನ್‌ ಕಲೆಯನ್ನು ಕಲಿತುಕೊಂಡಿದ್ದಾರೆ.

ಫೇಸ್‌ ಫೈಂಟಿಂಗ್‌ ಮುಖೇನ ಚಿತ್ರ ರಚನೆ
ಉದಯವಾಣಿ ಸುದಿನ ಜತೆ ಮಾತನಾಡಿದ ಅವರು, ಫೇಸ್‌ ಫೈಂಟಿಂಗ್‌ ಮುಖೇನ ಸಿಂಹದ ಚಿತ್ರವನ್ನು ರಚಿಸಬೇಕು ಎಂದು ಅನೇಕ ತಿಂಗಳುಗಳಿಂದ ಯೋಚಿಸುತ್ತಿದ್ದೆ. ಆದರೆ ನವರಾತ್ರಿ ಸಮಯಕ್ಕೆ ಕಾಲ ಕೂಡಿ ಬಂತು. ಶಿಷ್ಯೆ ಶ್ರೇಯಾ ಎಂ. ಭಟ್‌ ಅವರ ಮುಖದಲ್ಲಿ ಈ ಚಿತ್ರ ರಚಿಸಿದ್ದೇನೆ. ಆಕೆಯ ಕೂದಲನ್ನೇ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಿದ್ದೇನೆ. ಆಕೆಯ ಕಣ್ಣುಗಳನ್ನು ಮುಚ್ಚಿ, ಕಣ್ಣಿನ ಹುಬ್ಬುಗಳಿಗೆ ವ್ಯಾಕ್ಸ್‌ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ.ಇದಕ್ಕೆ ಐದು ಗಂಟೆ ಕಾಲ ತೆಗೆದುಕೊಂಡೆ. ನಾನು ಅಂದುಕೊಂಡದ್ದಕ್ಕಿಂತ ತುಂಬಾನೆ ಅಂದವಾಗಿ ಈ ಚಿತ್ರ ಮೂಡಿಬಂದಿದೆ ಎನ್ನುತ್ತಾರೆ.

ಹೆಲೋವಿನ್‌ ಡೇಗೆ ವಿಶೇಷ ಮೇಕಪ್‌
ಅಕ್ಟೋಬರ್‌ 31ರಂದು ಅಂತಾರಾಷ್ಟ್ರೀಯ ಹೆಲೋವಿನ್‌ ಡೇ ಆಚರಿಸಲಾಗುತ್ತದೆ. ಈ ದಿನವನ್ನು ಸಮಸ್ತ ಸಂತರ ಪೂರ್ವ ದಿನ ಎಂದು ಕರೆಯಲಾಗುತ್ತದೆ. ಈ ದಿನದ ಕುರಿತು ಸಂದೇಶ ಸಾರುವ ಸಲುವಾಗಿ ನಟಿ ಸ್ವಸ್ತಿಕಾ ಪೂಜಾರಿ ಅವರಿಗೆ ವಿಶೇಷವಾಗಿ ಮೇಕಪ್‌ ಮಾಡಲಾಗಿದೆ. ಚೇತನಾ ಅವರು ಸುಮಾರು ಮೂರು ಗಂಟೆಗಳಲ್ಲಿ ಈ ಮೇಕಪ್‌ ಮಾಡಿದ್ದು, ಹೆಲೋ ಗೋಲ್ಡನ್‌ ಕ್ರಾಪ್‌ ತಲೆಗೆ ಇಡಲಾಗಿದೆ. ಅಲ್ಲದೆ ತಲೆಯ ಮೇಲೆ 12 ಮೇಣದ ಬತ್ತಿ ಹಾಕಲಾಗಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.