ಚಾರ್ಮಾಡಿ ಘಾಟಿ ತಿರುವಿನಲ್ಲಿ ಸಿಲುಕಿದ ಖಾಸಗಿ ಬಸ್
Team Udayavani, May 21, 2018, 11:14 AM IST
ಬೆಳ್ತಂಗಡಿ : ಚಾರ್ಮಾಡಿ ಘಾಟಿ ತಿರುವಿನಲ್ಲಿ ಖಾಸಗಿ ಬಸ್ಸೊಂದು ಸಿಲುಕಿಕೊಂಡು ಕೆಲಕಾಲ ರಸ್ತೆ ಸಂಚಾರಕ್ಕೆ ಕೆಲಕಾಲ ತಡೆಯುಂಟು ಮಾಡಿದ ಘಟನೆ ನಡೆದಿದೆ.
ಬೆಳಗಿನ ಜಾವ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ, ತಿರುಗಿಸುತ್ತಿದ್ದ ವೇಳೆ ಬಸ್ ರಸ್ತೆಯಂಚಿಗೆ ಸಿಕ್ಕಿಹಾಕಿಕೊಂಡಿತು. ಆದ್ದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು. ಈ ವೇಳೆ ಸಂಚಾರ ಸಾಧ್ಯವಾಗದೆ. ಇತರೆ ವಾಹನಗಳ ಸವಾರರು ಮುಂದೆ ತೆರಳಲಾಗದೆ ಪರದಾಡುವಂತಾಯಿತು.