ಲಂಚ ಸ್ವೀಕಾರ: ಪುತ್ತೂರಿನ ಸರ್ವೇಯರ್ ಎಸಿಬಿ ಬಲೆಗೆ
Team Udayavani, Oct 5, 2019, 4:17 AM IST
ಉಪ್ಪಿನಂಗಡಿ: ಪುತ್ತೂರಿನ ಭೂಮಾಪಕ ಅಧಿಕಾರಿ ಶಿವಕುಮಾರ್ ಅವರು ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಿರೇಬಂಡಾಡಿ ಗ್ರಾಮದ ಹೆನ್ನಾಳ ನಿವಾಸಿ ಗೋಪಾಲ ಮುಗೇರ ಎಂಬವರು ಕುಟುಂಬದ ಜಾಗ ವನ್ನು ಅಳತೆ ಮಾಡಿ ಕೊ ಡಲು 2015ರ ಜನ ವರಿ 21ರಂದು ಅರ್ಜಿ ಸಲ್ಲಿಸಿದ್ದರು. ಅಳತೆ ಮಾಡಿಕೊಡಲು ಭೂಮಾಪಕರು 30,000 ರೂ. ನೀಡಬೇಕು ಬೇಡಿಕೆ ಇರಿಸಿದ್ದರು. ಇದರಂತೆ ಶುಕ್ರವಾರ ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ಹೊಟೇಲೊಂದರ ಎದುರು ಮುಂಗಡವಾಗಿ 5,000 ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಬಿ ಪ್ರಭಾರ ವರಿಷ್ಠಾಧಿಕಾರಿ ಸುಧೀರ್ ಎಂ. ಹೆಗ್ಡೆ , ತನಿಖಾಧಿಕಾರಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್, ಯೋಗೀಶ್ ಕುಮಾರ್, ಹೆಡ್ ಕಾನ್ಸ್ಟೆಬಲ್ ಹರಿಪ್ರಸಾದ್, ರಾಧಾಕೃಷ್ಣ ಕೆ., ಉಮೇಶ್, ರಾಧಾಕೃಷ್ಣ ಡಿ. ಎ., ಸಿಬಂದಿ ವರ್ಗದ ಪ್ರಶಾಂತ್, ವೈಶಾಲಿ, ರಾಕೇಶ್, ರಾಜೇಶ್, ಗಣೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ