ಕಡಬ: ಮಿನಿ ಲಾರಿ ಉರುಳಿ 2 ಸಾವು
Team Udayavani, Aug 10, 2018, 10:11 AM IST
ಕಡಬ: ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಐತ್ತೂರು ಗ್ರಾಮದ ಕಲ್ಲಾಜೆ ಸೇತುವೆ ಬಳಿ ಕಾಂಕ್ರೀಟ್ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು 14 ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಾರ್ಪಿಕಲ್ ಬದಿಯಡ್ಕ ನಿವಾಸಿ ಚಿನ್ನಮ್ಮ (55) ಹಾಗೂ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನೂಜಿಲ ನಿವಾಸಿ ಹರೀಶ್ ಆಚಾರಿ (35) ಮೃತಪಟ್ಟವರು.
ಗಾಯಾಳುಗಳಾದ ವಿಶ್ವನಾಥ (35), ಕಿರಣ್ (22), ಜಾನಕಿ (37), ಗೀತಾ (38), ನಿತೇಶ್ (19), ಹೇಮಾವತಿ (35), ರಾಜು (30), ನವೀನ್ (33), ಮುತ್ತಪ್ಪ (31), ಭವಿತ್ (22), ಪೊಡಿಯ (42), ರೂಪೇಶ್ (35), ವಸಂತ (30) ಜಿಮ್ಮಿ ಯಾನೆ ಶ್ಯಾಮ್ (35) ಅವರಿಗೆ ಕಡಬದ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಾಳುಗಳು ಕೊಕ್ಕಡ ಹಾಗೂ ಕೌಕ್ರಾಡಿ ಪರಿಸರದವರು. ಪುತ್ತೂರು ಎಎಸ್ಪಿ ಶ್ರೀನಿವಾಸ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ ನಾೖಕ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಂಕ್ರೀಟ್ ಕೆಲಸಕ್ಕೆ ಹೊರಟಿದ್ದರು
ಬಿಳಿನೆಲೆ ಗ್ರಾಮದ ಕೈಕಂಬ ಚೇರುವಿನಲ್ಲಿ ನಿರ್ಮಾಣವಾಗುತ್ತಿರುವ ಮನೆಯೊಂದರ ಕಾಂಕ್ರೀಟ್ ಸ್ಲಾéಬ್ನ ಕೆಲಸಕ್ಕಾಗಿ ಗುತ್ತಿಗೆದಾರರ ಜತೆಗೆ ತಂಡವಾಗಿ ಮಿನಿ ಲಾರಿಯಲ್ಲಿ ಕೊಕ್ಕಡದಿಂದ ಗುಂಡ್ಯ ಮಾರ್ಗವಾಗಿ ಈ ಕಾರ್ಮಿಕರು ಹೊರಟಿದ್ದರು. ಉದನೆ ಬಳಿ ರಾ. ಹೆದ್ದಾರಿಗೆ ನೆರೆನೀರು ನುಗ್ಗಿ ರಸ್ತೆ ಸಂಪರ್ಕ ಕಡಿದಿದ್ದ ಪರಿಣಾಮವಾಗಿ ಮಾರ್ಗ ಬದಲಿಸಿ ಇಚ್ಲಂಪಾಡಿ-ಮರ್ದಾಳ ಮಾರ್ಗವಾಗಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಐತ್ತೂರು ಗ್ರಾಮದ ಕಲ್ಲಾಜೆ ಸೇತುವೆಯನ್ನು ದಾಟಿ ಮುಂದೆ ಸಾಗುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಓಲಾಡುತ್ತಾ ಕೊಂಚ ದೂರ ಸಾಗಿ ರಸ್ತೆಯ ಪಕ್ಕಕ್ಕೆ ಉರುಳಿಬಿತ್ತು. ಲಾರಿ ಉರುಳಿಬೀಳುವ ವೇಳೆ ಲಾರಿಯೊಳಗಿದ್ದ ಕಾಂಕ್ರೀಟ್ ಮಿಲ್ಲರ್ನಡಿ ಸಿಲುಕಿದ ಚಿನ್ನಮ್ಮ ಹಾಗೂ ಹರೀಶ್ ಆಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ