ಕರಾವಳಿ ಪುಣ್ಯ ಕ್ಷೇತ್ರಗಳ ತವರು; ಅದೃಷ್ಟದ ಊರು: ಶಿವರಾಜ್‌ ಕುಮಾರ್‌


Team Udayavani, Dec 12, 2022, 7:15 AM IST

thumb-2

ಮಂಗಳೂರು: ಕರಾವಳಿ ಕಥೆಯಾಧಾರಿತ ಕಾಂತಾರ ಸಿನೆಮಾ ದೇಶ-ವಿದೇಶದಲ್ಲಿಯೂ ಸದ್ದು ಮಾಡುತ್ತಿರುವುದು ಒಂದೆಡೆಯಾದರೆ ಹಲವು ದೈವ ದೇವರ ನೆಲೆಯಾಗಿರುವ ಕರಾವಳಿ ಭೂಮಿ ಪುಣ್ಯ ಕ್ಷೇತ್ರಗಳ ತವರು. ನಿಜಕ್ಕೂ ಕರಾವಳಿ ಎಂಬುದು ಅದೃಷ್ಟದ ತಾಣ; ಹಲವು ವಿಶೇಷತೆಗಳನ್ನು ಒಳ ಗೊಂಡ ವಿವಿಧ ನಂಟು ಬೆಳೆಸಿದ ಊರು. ತಂದೆ ಡಾ| ರಾಜ್‌ಕುಮಾರ್‌ ಅವರಿಗೂ ಕರಾವಳಿ ನೆಲ ಅತ್ಯಂತ ಆಪ್ತವಾಗಿತ್ತು… ಹೀಗೆಂದು ನೆನಪಿಸಿಕೊಂಡವರು ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ “ಉದಯವಾಣಿ’ ಜತೆ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.

ಬಿಡುಗಡೆಗೆ ಸಿದ್ಧವಾಗಿರುವ “ವೇದ’ ಸಿನೆಮಾ ಹೇಗೆ ಭಿನ್ನವಾಗಿದೆ?
ಗೀತಾ ಪ್ರೊಡಕ್ಷನ್‌ನ ಮೊದಲ ಸಿನೆಮಾ. ನನ್ನ 125ನೇ ಸಿನೆಮಾ. ಕಥೆ ಮೊದಲು ಕೇಳಿದಾಗಲೇ ತುಂಬ ಖುಷಿಯಾಯಿತು. ಆಪ್ತವಾಗುವ ಸಂದೇಶ ಇದರಲ್ಲಿದೆ. ಹಳೆಯ ಗೆಟಪ್‌ ಹಾಗೂ ಹೊಸ ಗೆಟಪ್‌ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹರ್ಷ ಅವರ ಜತೆ ಸಿನೆಮಾ ಮಾಡುವುದೇ ಖುಷಿ. ಎಲ್ಲ ಸಿನೆಮಾಗಳು ಪರೀಕ್ಷೆ ರೀತಿ ಇರುವುದರಿಂದ ಭಯ ಸಾಮಾನ್ಯ.

ಭಜರಂಗಿ, ವಜ್ರಕಾಯ ಯಶಸ್ಸಿನ ಬಳಿಕ ಹರ್ಷ ಅವರ ಜತೆ ವೇದ ಸಿನೆಮಾ ಮಾಡಿದ್ದೀರಿ. ಹೇಗನಿಸುತ್ತದೆ?
ನಿಜಕ್ಕೂ ಇಂಥದ್ದೊಂದು ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ, ಹರ್ಷ ಅವರ ಸಿನೆಮಾ ಮೇಕಿಂಗ್‌ ಹೊಸ ರೂಪದಲ್ಲಿ ಇರುತ್ತದೆ. ಭಜರಂಗಿ 1 ಹಾಗೂ 2, ವಜ್ರಕಾಯ ಈ ಮೂರರಲ್ಲಿಯೂ ಶೇಡ್ಸ್‌ ಬೇರೆ ರೀತಿಯಲ್ಲಿ ನೀಡಿದ್ದರು. ಅವರು ಮಾಡುವ ಸಿನೆಮಾ ಹೊಸ ಗೆಟಪ್‌ ಹಾಗೂ ಸಂದೇಶ ಹೊಂದಿರು ತ್ತದೆ.

ಕಾಂತಾರ ರೀತಿಯಲ್ಲಿ ಕನ್ನಡದ ಹಲವು ಸಿನೆಮಾಗಳು ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದರ ಬಗ್ಗೆ ಏನೆನ್ನುತ್ತೀರಿ?
ನಿಜಕ್ಕೂ ಕನ್ನಡ ಸಿನೆಮಾ ರಂಗಕ್ಕೆ ಇದೊಂದು ಹೊಸ ದಾರಿ. ಹೊಸ ನಿರ್ದೇಶಕರಿಗೆ ಸ್ಫೂರ್ತಿ. ಹೊಸತನ ನೀಡಿ ದರೆ ಯಾವ ಸಿನೆಮಾವೂ ಸದ್ದು ಮಾಡಬಲ್ಲುದು ಎಂಬು ದನ್ನು ಇತ್ತೀಚಿನ ಕನ್ನಡ ಚಿತ್ರಗಳು ತೋರಿಸಿಕೊಟ್ಟಿವೆ.

ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗವನ್ನು ಹತ್ತಿರದಿಂದ ತಾವು ಕಂಡಿದ್ದೀರಿ. ಇಲ್ಲಿನ ವಿಶೇಷವಾದರೂ ಏನು?
ಕರಾವಳಿ ಭಾಗದಲ್ಲಿ ಅವೆಷ್ಟೋ ಸಿನೆಮಾಗಳ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಅದೃ ಷ್ಟದ ಜಾಗ. ಪುಣ್ಯ ಕ್ಷೇತ್ರದ ಊರು. ಅಪ್ಪಾಜಿಗೂ ಕರಾ ವಳಿ ಶ್ರೇಷ್ಠವಾದ ಜಾಗ. ರಥಸಪ್ತಮಿ, ಮಿಡಿದ ಶ್ರುತಿ, ಆಸೆಗೊಬ್ಬ ಮೀಸೆಗೊಬ್ಬ ಸಮಯದಿಂದಲೇ ನಾನು ಇಲ್ಲಿಗೆ ಬರುತ್ತಿದ್ದೇನೆ. ಒಳ್ಳೆಯ ಮನಸ್ಸಿನ ಜನರು ಇಲ್ಲಿನ ವಿಶೇಷ. ಊಟ ತಿಂಡಿ ಕೂಡ ಡಿಫರೆಂಟ್‌ ಆಗಿರುತ್ತದೆ.

ತುಳು ಸಿನೆಮಾ ಇಂಡಸ್ಟ್ರಿ ಬಗ್ಗೆ ತಮ್ಮ ಅಭಿಪ್ರಾಯ…
ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆನಾವೂ ಆಲೋಚನೆ ಮಾಡಿದ್ದೇವೆ. ಕನ್ನಡದ ಜತೆಗೆ ಇರುವ ತುಳು ಭಾಷೆಗೂ ಗೌರವ ನೀಡಬೇಕಾಗಿ ರುವುದು ನಮ್ಮ ಧರ್ಮ. ಹೀಗಾಗಿ ಮುಂದೆ ಆ ಅವಕಾಶ ಸಿಕ್ಕರೆ ಮಾಡುತ್ತೇನೆ.

ಭಕ್ತಿ-ಪ್ರಕೃತಿಯ “ಕಾಂತಾರ’
ಕಾಂತಾರ ಚಿತ್ರದ ಯಶಸ್ಸು ಬಹುದೊಡ್ಡ ಬೆಳವಣಿಗೆ. ಯಾಕೆಂದರೆ ಒಂದು ಸಿನೆಮಾ ಬಗ್ಗೆ ದೇಶ-ವಿದೇಶದಲ್ಲಿಯೂ ಮಾತನಾಡು ತ್ತಾರೆ ಅಂದರೆ ಅದು ದೊಡ್ಡ ಬದಲಾವಣೆಯ ಅಲೆ. ಹೀಗಾಗಿ ಯಾವುದೇ ಸಿನೆಮಾ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದು ದೇವರ ಅನುಗ್ರಹ ಅಷ್ಟೆ. ಹಲವು ವಿಶೇಷತೆಯ ಸೌಂದರ್ಯ ಕಾಂತಾರದಲ್ಲಿ ಇದೆ. ಭಕ್ತಿ, ಪ್ರಕೃತಿಯನ್ನು ಒಂದುಗೂಡಿಸಿದ ಕಾರಣ ಕಾಂತಾರ ವಿಶೇಷವಾಗಿ ಎದ್ದುಕಾಣುತ್ತಿದೆ ಎನ್ನುತ್ತಾರೆ ಶಿವರಾಜ್‌ ಕುಮಾರ್‌.

- ದಿನೇಶ್‌ ಇರಾ

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ

Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.