ಅದ್ಯಪಾಡಿ ಡ್ಯಾಂ: ಯುವಕ ಮುಳುಗಿ ಸಾವು
Team Udayavani, May 20, 2020, 10:14 AM IST
ಮಂಗಳೂರು: ಫಲ್ಗುಣಿ ನದಿಯ ಅದ್ಯಪಾಡಿ ಡ್ಯಾಮ್ ಬಳಿ ಮಂಗಳವಾರ ನೀರಿನಲ್ಲಿ ಮುಳುಗಿ ಗುರುಪುರ ಪಡ್ಡಾಯಿ ಪದವು ನಿವಾಸಿ ಮಾಲಿಕ್ (18) ಸಾವನ್ನಪ್ಪಿದ್ದಾರೆ.
ಡ್ಯಾಂ ನೀರಿನಲ್ಲಿ ಚಿಪ್ಪು ಮೀನು (ಮರುವಾಯಿ) ಹಿಡಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು ತಿಳಿಸಿದ್ದಾರೆ. ಮಾಲಿಕ್ ಮತ್ತು ಇತರ ಇಬ್ಬರು ಅದ್ಯಪಾಡಿ ಡ್ಯಾಮ್ಗೆ ಚಿಪ್ಪು ಮೀನು ಹಿಡಿಯಲು ಮಂಗಳವಾರ ಮಧ್ಯಾಹ್ನ ಬಳಿಕ ಹೋಗಿದ್ದರು. ಮೀನು ಹಿಡಿಯುತ್ತಿದ್ದಾಗ ಮಾಲಿಕ್ ಆಳವಾದ ಹೊಂಡಕ್ಕೆ ಬಿದ್ದಿದ್ದು, ಈಜು ತಿಳಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ದಳದವರು ಆಗಮಿಸಿ ಊರವರ ಸಹಕಾರದಿಂದ ಮೃತದೇಹವನ್ನು ಮೇಲೆತ್ತಿದರು.
ಗುರುಪುರ ಸಮೀಪದ ಪಡ್ಡಾಯಿ ಪದವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಯೂಸುಫ್ – ಜೊಹರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮಾಲಿಕ್ ಏಕೈಕ ಪುತ್ರನಾಗಿದ್ದ. ಕಳೆದ 10 ದಿನಗಳಲ್ಲಿ ಫಲ್ಗುಣಿ ನದಿಯ ನೀರಿಗೆ ಚಿಪ್ಪು ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 2ನೇ ಪ್ರಕರಣ ಇದಾಗಿದೆ. ಮೇ 9ರಂದು ಮಳವೂರು ಡ್ಯಾಮ್ ಬಳಿ ಕಾವೂರಿನ ಫೋಟೊಗ್ರಾಫರ್ ಕೌಶಿಕ್ ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ