ಹಬ್ಬದ ಸೀಸನ್‌ ಬಳಿಕ ಬೆಲೆ ಇಳಿಕೆಯ ಹಾದಿಯಲ್ಲಿ  ಕದಳಿ ಬಾಳೆ ಹಣ್ಣು


Team Udayavani, Oct 30, 2017, 4:23 PM IST

30-Mng-14.jpg

ನಗರ: ಹಬ್ಬಗಳ ಸೀಸನ್‌ ಮುಗಿಯುತ್ತಿದ್ದಂತೆ ಬಾಳೆ ಹಣ್ಣುಗಳ ಬೆಲೆಯೂ ಇಳಿಕೆಯಾಗುತ್ತಿದೆ. ಹಣ್ಣಿನ ಅಂಗಡಿಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಬಳಿಕ ತೀವ್ರ ಗತಿಯಲ್ಲಿ ಏರಿಕೆ ಕಂಡು ಕೆ.ಜಿ.ಗೆ 120 ರೂ. ತನಕ ತಲುಪಿದ್ದ ಕದಳಿ ಬಾಳೆ ಹಣ್ಣಿನ ಬೆಲೆ ಈಗ 60 ರೂ. ತನಕ ಇಳಿಕೆ ಕಂಡಿದೆ.

ಪೂಜೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಅಗತ್ಯವಾಗಿ ಬೇಕಾಗುವ ಕದಳಿ ಬಾಳೆ ಹಾಗೂ ತಿಂಡಿಗಳ ತಯಾರಿಕೆಯಲ್ಲಿ ಬಳಕೆಯಾಗುವ ನೇಂದ್ರ ಬಾಳೆಗೆ ಈಗ ಸ್ವಲ್ಪ ಮಟ್ಟಿನ ಬೇಡಿಕೆ ಕಡಿಮೆಯಾಗಿದೆ. ದೀಪಾವಳಿ ಸಂದರ್ಭ ಕೆ.ಜಿ.ಯೊಂದರ 100ರಿಂದ -120 ರೂ. ಬೆಲೆಯಿದ್ದ ಕದಳಿ ಬಾಳೆ ಹಣ್ಣಿಗೆ ಈಗ 60 ರೂ. ಮಾರುಕಟ್ಟೆ ದರವಿದೆ. ಹಬ್ಬಗಳ ಅವಧಿಯಲ್ಲಿ 100 ರೂ. ತನಕ ಮಾರಾಟವಾಗಿದ್ದ ನೇಂದ್ರ ಬಾಳೆಗೆ ಈಗ ಕೆ.ಜಿ.ಯೊಂದರ 60 -70 ರೂ. ಗೆ ಇಳಿಕೆಯಾಗಿದೆ.

40 ರೂ. ನಿರೀಕ್ಷೆ
ಹಬ್ಬಗಳ ಸೀಸನ್‌ ಮುಗಿಯುತ್ತಾ ಬರುತ್ತಿದ್ದಂತೆ ಬೇಡಿಕೆಯಲ್ಲಿ ಇಳಿಕೆ ಕಾಣುತ್ತಿರುವ ಬಾಳೆಹಣ್ಣಿನ ದರ ತುಳಸಿ ಪೂಜೆಯ ಬಳಿಕ ಕೆ.ಜಿ.ಗೆ ಸರಾಸರಿ 40 ರೂ. ಆಗಬಹುದು ಎನ್ನುವುದು ಹಣ್ಣಿನ ವ್ಯಾಪಾರಿಗಳ ಅಭಿಪ್ರಾಯ. ಹಬ್ಬಗಳ ಸೀಸನ್‌ ಬಿಟ್ಟು ಮದುವೆ ಹಾಗೂ ಇತರ ಸಮಾರಂಭಗಳಿಗೆ ಗಣನೀಯ ಮಟ್ಟದ ಬೇಡಿಕೆ ಇರುವುದಿಲ್ಲ.

ಕದಳಿ, ನೇಂದ್ರ, ಮೈಸೂರು, ಗಾಳಿ, ಬೂದಿಬಾಳೆ ಹಣ್ಣುಗಳಿಗೆ ಹಣ್ಣುಗಳ ಅಂಗಡಿಗಳಲ್ಲಿ ಗ್ರಾಹಕರಿಂದ ಸರಾಸರಿ ಬೇಡಿಕೆ ಇರುತ್ತದೆ. ಮೈಸೂರು, ಜಾಯಿಂಟ್  ಬೂದಿ, ಗಾಳಿ ಬಾಳೆ ಹಣ್ಣಿಗೆ ಕೆ.ಜಿಗೆ 30ರಿಂದ 40 ರೂ. ಬೆಲೆ ಮಾರುಕಟ್ಟೆಯಲ್ಲಿದೆ. ದರ್ಬೆಯಲ್ಲಿರುವ ಹೋಲ್‌ಸೇಲ್‌ ಅಂಗಡಿಯೊಂದಕ್ಕೆ ದೊಡ್ಡ ಮಟ್ಟದಲ್ಲಿ ಬಾಳೆಹಣ್ಣುಗಳು ಬರುತ್ತಿದ್ದು, ಅಲ್ಲಿಂದ ನಗರದ ವಿವಿಧ ಅಂಗಡಿಗಳಿಗೆ ಹಂಚಿಕೆಯಾಗುತ್ತದೆ.

ಉಳಿದಂತೆ ದೊಡ್ಡ ಗಾತ್ರದ ಮೂಸುಂಬಿ ಕೆ.ಜಿ.ಗೆ. 60 ರೂ., ಬೇಸಗೆ ಕಾಲದಲ್ಲಿ ಪಾನೀಯದ ಉದ್ದೇಶದಿಂದ ಅತಿ ಹೆಚ್ಚು ಬಳಕೆಯಾಗುವ ನಿಂಬೆ ಹಣ್ಣೊಂದರ 4 ರೂ. ಬೆಲೆಯಿದೆ.

ತರಕಾರಿಗೆ ಆಸಕ್ತಿ
ಹಬ್ಬಗಳು ಮುಗಿಯುತ್ತಿದ್ದಂತೆ ಒಮ್ಮೆಗೆ ತರಕಾರಿಗಳ ಬೆಲೆ ಇಳಿಕೆ ಕಂಡರೂ ಶುಭ ಸಮಾರಂಭಗಳ ಸೀಸನ್‌ ಆರಂಭವಾಗುವುದರಿಂದ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಮತ್ತೆ ಬೆಲೆ ಏರಿಕೆಯಾಗುತ್ತದೆ. ಬಿಸಿ ವಾತಾವರಣದ ಮಧ್ಯೆ ದೇಹದ ಉಷ್ಣತೆ ಹೆಚ್ಚಿಸುವ ಮಾಂಸಾಹಾರ ಸೇವನೆಗಿಂತ ತರಕಾರಿ ಪದಾರ್ಥಗಳತ್ತ ಜನರು ಹೆಚ್ಚು ಆಸಕ್ತಿ ವಹಿಸುತ್ತಾರೆ.

ಬೆಳೆಯುವವರು ಕಡಿಮೆ
ಹಬ್ಬದ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಕದಳಿ ಬಾಳೆ ಹಣ್ಣಿನ ಬೆಲೆ ತುಳಸಿ ಪೂಜೆಯ ಬಳಿಕ 40 ರೂ. ಆಸುಪಾಸಿಗೆ ಬರಬಹುದು. ಇತ್ತೀಚೆಗೆ ಕದಳಿ ಬಾಳೆ ಬೆಳೆಯುವವರು ಕಡಿಮೆಯಾಗಿರುವುದರಿಂದ ಲೋಕಲ್‌ ಬೆಳೆಗಾರರಿಂದ ಸಿಗುತ್ತಿಲ್ಲ. ಬೇರೆ ಕಡೆಗಳಿಂದ ಆವಕವಾಗುವ ಕದಳಿ ಹಣ್ಣುಗಳು ಉತ್ತಮ ಗುಣಮಟ್ಟವನ್ನೂ ಹೊಂದಿಲ್ಲ.
ಕೇಶವ
ಹಣ್ಣು, ತರಕಾರಿ ವ್ಯಾಪಾರಿ, ಪುತ್ತೂರು

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.