ಕೃಷಿ ಸಿರಿಯ ಕೊಂಡಾಡಿದಡಾ| ಡಿ.ವೀರೇಂದ್ರ ಹೆಗ್ಗಡೆ
Team Udayavani, Dec 4, 2017, 9:47 AM IST
ವಿದ್ಯಾಗಿರಿ: ಆಳ್ವಾಸ್ ನುಡಿಸಿರಿಯಲ್ಲಿ ಪಾಲ್ಗೊಳ್ಳಲು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ವಿದ್ಯಾಗಿರಿಗೆ ಆಗಮಿಸಿದರು. ಸಾಹಿತ್ಯ ಸಮ್ಮೇಳನ ವೇದಿಕೆಗೆ ಹೋಗುವುದಕ್ಕೂ ಮೊದಲು ನೇರವಾಗಿ ಕೃಷಿ ಸಿರಿಗೆ ಭೇಟಿ ನೀಡಿದರು.
ಅಲ್ಲಿನ ಫಲ ಪುಷ್ಪ ಹಾಗೂ ವಿವಿಧ ತಳಿಯ ತರಕಾರಿ/ ಹಣ್ಣಿನ ಬೀಜಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಭತ್ತದಿಂದ ಮಾಡಿದ ವಿಶೇಷ ಉತ್ಪನ್ನವೊಂದನ್ನು ಡಾ| ಹೆಗ್ಗಡೆ ಅವರಿಗೆ ಕೃಷಿಕರೊಬ್ಬರು ಪ್ರದಾನಿಸಿದರು. “ನಮ್ಮ ಅನ್ನದಾತರು ನೀವು’ ಎಂದು ಕೃಷಿಕರೊಬ್ಬರು ಡಾ| ಹೆಗ್ಗಡೆ ಅವರನ್ನು ಉಲ್ಲೇಖೀಸಿದರು. ಆ ಬಳಿಕ ತರಕಾರಿ ತೋಟ ವನ್ನು ವೀಕ್ಷಿಸಿದ ಹೆಗ್ಗಡೆ ಅವರು, ಡಾ| ಮೋಹನ್ ಆಳ್ವ ಅವರ ಕಾರ್ಯಕ್ಷಮ ತೆಯನ್ನು ಶ್ಲಾಘಿಸಿ, ನುಡಿಸಿರಿಗೆ ಕೃಷಿಸಿರಿಯ ಮೂಲಕ ಪರಿಪೂರ್ಣತೆ ದೊರೆಯಿತು ಎಂದು ಉದ್ಗರಿಸಿದರು. ಬಳಿಕ ಕೃಷಿಸಿರಿ ನಡೆಯುವಲ್ಲಿ ಸಿದ್ಧ ಪಡಿಸಲಾದ ಭೋಜನ ವ್ಯವಸ್ಥೆಯನ್ನು ವೀಕ್ಷಿಸಿದರು. ನುಡಿ
ಸಿರಿಯ ಮುಖ್ಯವೇದಿಕೆಯ ಹತ್ತಿರದಲ್ಲಿ ಪುಸ್ತಕ ಮೇಳ, ಗಾಳಿಪಟ ವೀಕ್ಷಿಸಿದರು.
ಡಾ| ಎಂ. ಮೋಹನ್ ಆಳ್ವ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ