ಅಳದಂಗಡಿ: ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಪಲ್ಟಿ
Team Udayavani, Jul 12, 2022, 2:32 PM IST
ವೇಣೂರು: ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಪಲ್ಟಿಯಾದ ಘಟನೆ ಅಳದಂಗಡಿ ಸಮೀಪದ ಸುಲ್ಕೇರಿಮೊಗ್ರು ಎಂಬಲ್ಲಿ ಮಂಗಳವಾರ ನಡೆದಿದೆ.
ಸವಾರ ಪರಂಟ್ಯಾಲ ನಿವಾಸಿ ನಾರಾಯಣ ಪೂಜಾರಿ (49) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಲ್ಕೇರಿಮೊಗ್ರು ದೇವಸ್ಥಾನಕ್ಕೆ ತೆರಳಿ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮುಗೇರು ಎಂಬಲ್ಲಿ ಏಕಾಏಕಿ ಕಡವೆ ರಸ್ತೆಗೆ ಅಡ್ಡಬಂದಿದೆ. ನಿಯಂತ್ರಣ ತಪ್ಪಿದ ನಾರಾಯಣ ಪೂಜಾರಿಯವರ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ಎದೆ, ಕಾಲಿಗೆ ಗಾಯವಾಗಿದೆ. ತಕ್ಷಣ ಸ್ಥಳೀಯರ ಸಹಕಾರದಿಂದ ಗಾಯಾಳನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಕುಷ್ಟಗಿ: ಕಂಡಕ್ಟರ್ ನನ್ನೇ ಬಸ್ ನಿಲ್ದಾಣದಲ್ಲಿ ಮರೆತು ಬಸ್ ಚಲಾಯಿಸಿಕೊಂಡು ಬಂದ ಚಾಲಕ!
ಈ ಬಗ್ಗೆ ವೇಣೂರು ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಮಹೀಮ್ ಎಂ. ಜನ್ನು ಅವರು ಮಾಹಿತಿ ನೀಡಿ, ನಾರಾಯಣ ಪೂಜಾರಿಯವರ ವಾಹನಕ್ಕೆ ಕಡವೆ ಅಡ್ಡಬಂದು ಬಿದ್ದು ಗಾಯಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ನಾರಾಯಣ ಪೂಜಾರಿಯವರಿಗೆ ಏನಾದರೂ ಪರಿಹಾರ ದೊರೆಯುವುದಿದ್ದರೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ