ವಿದ್ಯಾರ್ಥಿನಿ ಕೊಲೆ ಆರೋಪಿ ಬಂಧನ
Team Udayavani, Jun 9, 2019, 9:21 AM IST
ಮಂಗಳೂರು: ಅತ್ತಾವರದ ಬಾಡಿಗೆ ಮನೆಯಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೆನಕೊಟಗಿ ತಾಂಡಾ ನಿವಾಸಿ ಸಂದೀಪ್ ರಾಥೋಡ್ (23) ಬಂಧಿತನಾಗಿದ್ದು, ಈತ ನನ್ನು ಪಾಂಡೇಶ್ವರ ಪೊಲೀಸರು ಮತ್ತು ವಿಜಯಪುರದ ಸಿಂಧಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ಬೆಳಗ್ಗೆ ಸಿಂಧಗಿಯಲ್ಲಿ ಬಂಧಿಸಿದರು. ಆತನನ್ನು ಮಂಗಳೂರಿಗೆ ಕರೆತರಲಾಗುತ್ತಿದೆ.
ಅಂಜನಾಳ ಮೊಬೈಲ್ನಲ್ಲಿ ಆತನ ಮೊಬೈಲ್ ನಂಬರ್ ಇದ್ದ ಕಾರಣ ಆರೋಪಿಯನ್ನು ಎರಡೇ ದಿನಗಳೊಳಗೆ ಬಂಧಿಸಲು ಸಾಧ್ಯವಾಯಿತು.
ಮದುವೆಗೆ ನಿರಾಕರಿಸಿದ್ದು ಕಾರಣ
ಸಂದೀಪ್ ಮತ್ತು ಅಂಜನಾ ಪರಿಚಿತರಾಗಿದ್ದು, ಸಂಬಂಧವನ್ನೂ ಇಟ್ಟುಕೊಂಡಿದ್ದರು. ಆದರೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು. ಈ ವಿಚಾರದಲ್ಲಿ ಶುಕ್ರವಾರ ಬೆಳಗ್ಗೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಅಂಜನಾ ಉಜಿರೆಯಲ್ಲಿ ಎಂ.ಎಸ್ಸಿ. ಮುಗಿ ಸಿದ್ದು, ಈಕೆಗೆ ಫೇಸ್ಬುಕ್ ಮೂಲಕ ಸಂದೀಪ್ನ ಪರಿಚಯ ಆಗಿತ್ತು ಎನ್ನಲಾಗಿದೆ. ಆಕೆ ಬ್ಯಾಂಕಿಂಗ್ ಪರೀಕ್ಷೆಗೆ ಹಾಗೂ ಆತ ಪೊಲೀಸ್ ಹುದ್ದೆ ಪರೀಕ್ಷೆಯ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದು, ಅತ್ತಾವರ ಕೆಎಂಸಿ ಆಸ್ಪತ್ರೆ ಹಿಂಭಾಗದ ಮನೆಯೊಂದರ ಕೊಠಡಿಯನ್ನು ದಂಪತಿ ಎಂದು ಹೇಳಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದರು.
ಆರೋಪಿಯಿಂದ ಒಂದು ಕರಿಮಣಿ ಸರ ಸಿಕ್ಕಿದೆ. ತಾನು ಆಕೆಯನ್ನು ವಿವಾಹವಾಗಿರುವುದಾಗಿ ಆತ ತಿಳಿಸಿದ್ದು, ಹೆಚ್ಚಿನ ವಿಚಾರಣೆಯಿಂದಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿ. ಜಿ. ಅಲ್ಲ; ಬಾಡಿಗೆ ಕೊಠಡಿ
ಸಂದೀಪ್ ಮತ್ತು ಅಂಜನಾ ವಾಸ್ತವ್ಯವಿದ್ದ ಕೊಠಡಿ ಪಿ.ಜಿ. (ಪೇಯಿಂಗ್ ಗೆಸ್ಟ್) ಅಲ್ಲ; ಅದು ಬಾಡಿಗೆ ಕೊಠಡಿಯಾಗಿದೆ. ಈ ಮನೆಯಲ್ಲಿ 6 ಬಾಡಿಗೆ ಕೊಠಡಿಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ