ಮಿತ್ತೂರು ಉಳ್ಳಾಕುಲು ನಾಯರ್ ದೈವಗಳ ಕಾಲಾವಧಿ ಜಾತ್ರೆ
Team Udayavani, May 15, 2018, 1:06 PM IST
ಸುಳ್ಯ : ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕುಲು ನಾಯರ್ ದೈವಗಳ ಕಾಲಾವಧಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಕುಲುಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ, ಬಲ್ಲಾಳರ ಕಾಣಿಕೆ, ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಕುಲಿನ ದರ್ಶನ, ಪ್ರಸಾದ ವಿತರಣೆ, ಸಂಕ್ರಾಂತಿ ಪೂಜೆ ನಡೆಯಿತು.
ಮಿತ್ತೂರು ನಾಯರ್ ಭಂಡಾರ ಬಂದು ಬಂದ್ಯತ್ತ ವಾಲಸಿರಿ, ಮಿತ್ತೂರು ನಾಯರಿಗೆ ಕಿರೀಟವಾಗಿ ಅಡ್ತಲೆ ಕಿರುಚಾವಡಿಗೆ ಬಂದು, ಪ್ರಸಾದ ವಿತರಣೆ, ಸಂಕ್ರಾಂತಿ ಪೂಜೆ ನಡೆಯಿತು. ವಾಲಸಿರಿ ಉಳ್ಳಾಗಳಿಗೆ ಸಿರಿಮುಡಿ ನಾಯರಿಗೆ ಕಿರೀಟವಾಗಿ ಪಡಂಪಾಳಿ ಮಾಳಿಗೆಗೆ ಭಂಡಾರ ಬಂದು ಉಳ್ಳಾಗಳ ದರ್ಶನ, ಪ್ರಸಾದ ವಿತರಣೆ ಹಾಗೂ ಮರುದಿನ ನಾಯರ್ ನೇಮ, ಮೇಲ್ಮಂಚಕ್ಕೆ ಕಾಯಿ ಒಡೆಯುವುದು, ದೂಳುಕಾಯಿ ಅಂಬುಕಾಯಿ ಸ್ನಾನಕ್ಕೆ ಚಾಕಟೆ ಅಡಿಯಲ್ಲಿ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಹರಕೆ, ಮೊದಲಾದ ಕಾರ್ಯಕ್ರಮ ನಡೆಯಿತು. ಮೇ 12ರಂದು ನೇಮ ನಡೆಯಿತು. ಮೇ 13ರಂದು ಮಾರಿಕಳಕ್ಕೆ, ಮುಳಿ ನಡೆಯಿತು.
ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ಕೆದಂಬಾಡಿ ವೆಂಕಟ್ರಮಣ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಣಿಬೆಟ್ಟು ಪುರುಷೋತ್ತಮ ಗೌಡ, ಕಾರ್ಯದರ್ಶಿ ಪಿ.ಎಸ್.ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ