ಅಡಿಕೆಗೆ ಕಲಬೆರಕೆಯ ಕರಾಮತ್ತು: ಸಂಕಷ್ಟದಲ್ಲಿ ಅಡಿಕೆ ಬೆಳೆ

ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳಿಗೆ ಕರಾವಳಿ ಬೆಳೆಗಾರರ ಆಗ್ರಹ

Team Udayavani, Apr 29, 2019, 12:49 PM IST

areca

ವಿಟ್ಲ: ಕೊಳೆ ರೋಗ, ಹಳದಿ ರೋಗದಿಂದ ತತ್ತರಿಸಿರುವ ಅಡಿಕೆ ಬೆಳೆಗೆ ಈಗ ಕಳಪೆ ಗುಣಮಟ್ಟದ ಕಲಬೆರಕೆ ಅಡಿಕೆಯ ಅಪಾಯ ಎದುರಾಗಿದೆ. ವಿದೇಶದಿಂದ ಕಡಿಮೆಬೆಲೆಗೆ ಕಳಪೆ ಗುಣಮಟ್ಟದ ಅಡಿಕೆಯನ್ನು ಆಮದು ಮಾಡಿ ಕೊಂಡು ಸ್ಥಳೀಯ ಅತ್ಯುತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಕಲಬೆರಕೆ ಮಾಡಿ ಇಡೀ ಅಡಿಕೆಯ ಮೌಲ್ಯವನ್ನೇ ಕಡಿಮೆಗೊಳಿಸುವ ವ್ಯವಸ್ಥಿತ ತಂತ್ರ ಬೆಳಕಿಗೆ ಬಂದಿದೆ. ಈ ದಂಧೆ ಹೊಸದಲ್ಲವಾದರೂ ಸಣ್ಣ ಮಟ್ಟದಲ್ಲಿತ್ತು. ಆದರೀಗ ಕರಾವಳಿ ಅಡಿಕೆ ಮಾರುಕಟ್ಟೆಯನ್ನು ತಲ್ಲಣಗೊಳಿಸುವಷ್ಟು ಬೆಳೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ದ.ಕ. ಜಿಲ್ಲೆಯ ಬೆಳೆಗಾರರದ್ದು, ಜಿಲ್ಲೆಯ ಸುಮಾರು 39 ಸಾವಿರ ಹೆಕ್ಟೇರ್‌ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ವಾಸ್ತವ
ವಾಗಿ ವಿಟ್ಲ – ಬಾಯಾರು – ಬದಿಯಡ್ಕ ಪ್ರದೇಶದ ಅಡಿಕೆಗೆ ಬೇಡಿಕೆ ಹೆಚ್ಚು. ಈ ಪ್ರದೇಶದ ಅಡಿಕೆಯನ್ನು ಪ್ರತ್ಯೇಕಿಸಿ ಮಾರುಕಟ್ಟೆಯಲ್ಲಿ ವಿಶೇಷ ಮೌಲ್ಯ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿಯೇ ಸಂಪೂರ್ಣ ಬದಲಾಗುತ್ತಿದೆ.

ಮಾರುಕಟ್ಟೆ ಬೀಳಿಸುವ ತಂತ್ರ
ವಿದೇಶಿ ಒಪ್ಪಂದಗಳನ್ನು ದುರುಪಯೋಗ ಪಡಿಸಿಕೊಳ್ಳುವ ದಂಧೆಕೋರರು ನೇಪಾಲ, ಶ್ರೀಲಂಕಾ, ಬಾಂಗ್ಲಾದೇಶ ಮೂಲಕ ಬರ್ಮಾ – ಇಂಡೋನೇಶಿಯಾಗಳಲ್ಲಿ ಬೆಳೆಯುವ ಕೆಳದರ್ಜೆಯ ಅಡಿಕೆಯನ್ನು ಕರಾವಳಿಗೆ ತರಿಸಿಕೊಳ್ಳುತ್ತಿದ್ದಾರೆ. ಕೆಜಿಗೆ 145 ರೂ.ಗಳಿಗೆ ಸಿಗುವ ಈ ಕಳಪೆ ದರ್ಜೆಯ ಅಡಿಕೆಯನ್ನು ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆ ಜತೆ ಮಿಶ್ರಣ ಮಾಡಲಾಗುತ್ತಿದೆ. ವ್ಯಾಪಾರಿಗಳು ಗಾರ್ಬಲ್‌ನಲ್ಲಿ ಎರಡನ್ನೂ ಮಿಶ್ರಗೊಳಿಸಿ,
ಮತ್ತೆ ಮಾರುಕಟ್ಟೆಗಿಳಿಸುತ್ತಾರೆ. ಈ ಕುತಂತ್ರದಿಂದ ಕರಾವಳಿಯ ಉತ್ತಮ ಅಡಿಕೆ ಗುಜರಾತ್‌ ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಗಳಿಸಿದ ಪ್ರಸಿದ್ಧಿಗೆ ಕುತ್ತು ಬರತೊಡಗಿದೆ. ಜತೆಗೆ ಬೆಲೆಯೂ ಕೆಜಿಗೆ 340 ರೂ.ಗಳಿಂದ 230 ರೂ.ಗಿಳಿದಿದೆ ಎನ್ನಲಾಗುತ್ತಿದೆ. ಈ ಅಪಾಯದತ್ತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರಕಾರಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂಬುದು ಬೆಳೆಗಾರರ ಆಗ್ರಹ.

ವಿದೇಶಿ ಅಡಿಕೆ ರುಚಿಯಿಲ್ಲ
ಈ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಮಾಡಬಹುದು. ಬರ್ಮಾ ಅಡಿಕೆ ಗಟ್ಟಿ. ವಾಸನೆ ಮತ್ತು ರುಚಿಯಲ್ಲಿ ವ್ಯತ್ಯಾಸವಿದ್ದು, ಮೇಲ್ನೋಟಕ್ಕೇ ಪತ್ತೆಹಚ್ಚಬಹುದು.

ಉದಯವಾಣಿ ಆಗ್ರಹ
ವಿದೇಶದಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸಿ ಮಾರುವ ತಂತ್ರ ನಿಜಕ್ಕೂ ಅಪಾಯಕಾರಿ. ನಮ್ಮ ಅತ್ಯುತ್ತಮ ಗುಣಮಟ್ಟದ ಅಡಿಕೆಯ ಮೌಲ್ಯವನ್ನೂ ಕುಸಿಯುವಂತೆ ಮಾಡುವ ಹುನ್ನಾರ. ಹಲವು ವರ್ಷಗಳ ಪ್ರಸಿದ್ಧಿಗೆ ಕಪ್ಪು ಮಸಿ ಬಳಿಯುವ ಕುತಂತ್ರ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕ್ರಮೇಣ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವುದು ಸ್ಪಷ್ಟ. ಸ್ಥಳೀಯ ಅಡಿಕೆ ಬೆಲೆ ಕುಸಿಯುವುದಲ್ಲದೆ ವ್ಯಾಪಾರಸ್ಥರು ಅಸಲಿ ಅಡಿಕೆಯನ್ನು ನಂಬದ ಸ್ಥಿತಿ ಉದ್ಭವಿಸಬಹುದು. ಹೀಗಾಗುವ ಮೊದಲು ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ವಿಶೇಷಾಸಕ್ತಿ ವಹಿಸಿ ರಾಜ್ಯ ಸಚಿವರು, ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತಂದು ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿ ಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಾದುದು ತುರ್ತು ಅಗತ್ಯ.

ಸಾರ್ಕ್‌ ಕೂಟದ ಸದಸ್ಯರಾಗಿ ಭಾರತವೂ ಸೇರಿದಂತೆ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್‌, ಭೂತಾನ್‌, ನೇಪಾಲ, ಆಪಾ^ನಿಸ್ಥಾನ, ಪಾಕಿಸ್ಥಾನ ರಾಷ್ಟ್ರಗಳಿವೆ. ಸಾರ್ಕ್‌ ದೇಶಗಳ ನಡುವಿನ ವಾಣಿಜ್ಯ ಒಪ್ಪಂದದಂತೆ ಆಯಾ ದೇಶಗಳಲ್ಲಿ ಬೆಳೆದ ಬೆಳೆಗಳನ್ನು ನಮ್ಮಲ್ಲಿ ಮಾರಲು ಅವಕಾಶವಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಸಾರ್ಕ್‌ ಕೂಟದಲ್ಲಿರದ ಕೆಲವು ದೇಶಗಳು ಸಾರ್ಕ್‌ ಸದಸ್ಯ ರಾಷ್ಟ್ರಗಳಿಗೆ ತಮ್ಮ ಉತ್ಪನ್ನಗಳನ್ನು ಪೂರೈಸಿ ಅಲ್ಲಿಂದ ಭಾರತಕ್ಕೆ ಕಳಿಸಲಾಗುತ್ತಿದೆ. ಇಲ್ಲಿನ ಕೆಲವು ವ್ಯಾಪಾರಿಗಳ ಮೂಲಕ ಈ ದಂಧೆ ನಡೆಯುತ್ತಿದೆ. ಇತ್ತೀಚೆಗಷ್ಟೇ ವಿಯೆಟ್ನಾಂನ ಕಾಳುಮೆಣಸನ್ನು ನಮ್ಮಲ್ಲಿ ಮಾರಲು ಇದೇ ತಂತ್ರವನ್ನು ಬಳಸಲಾಗುತ್ತಿತ್ತು. ಈ ಸಂಬಂಧ ಕೇಂದ್ರ ಸರಕಾರಕ್ಕೂ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು.

ನಿಯಂತ್ರಿಸದಿದ್ದರೆ ಉಳಿಗಾಲವಿಲ್ಲ!
ವಿದೇಶದಿಂದ ಆಮದಾಗುತ್ತಿದ್ದ ಅಡಿಕೆ ತುಂಬಿದ ಲಾರಿಯನ್ನು ನಾನು ಗೆಳೆಯರೊಂದಿಗೆ ಪರೀಕ್ಷಿಸಿದ್ದೇನೆ. ಕೆಜಿಗೆ 145 ರೂ.ಗಳ ಅಡಿಕೆಯನ್ನು ಪುತ್ತೂರಿನ ಖಾಸಗಿ ಗಾರ್ಬಲ್‌ಗೆ ಒಯ್ಯಲಾಗುತ್ತಿತ್ತು. ಆರಂಭದಲ್ಲಿ ಲಾರಿ ಚಾಲಕ ನಮ್ಮ ದಿಕ್ಕು ತಪ್ಪಿಸಲೆತ್ನಿಸಿದರೂ ಆಮೇಲೆ ಬಾಯಿಬಿಟ್ಟ. ವಾರಕ್ಕೆ ಮೂರು ಬಾರಿ ಪೂರೈಕೆಯಾಗುತ್ತಿದೆ ಎಂದು ಹೇಳಿದಾಗ ಸತ್ಯ ತಿಳಿಯಿತು. ಅಂದರೆ ಈ ಪರಿಸರದ ಎಲ್ಲ ಗಾರ್ಬಲ್‌ಗ‌ಳಿಗೆ ಈ ಅಡಿಕೆ ಪ್ರವೇಶಿಸಿದರೆ ನಮ್ಮ ಕಥೆ ಮುಗಿದಂತೆಯೇ. ಇದನ್ನು ತಡೆಗಟ್ಟದಿದ್ದರೆ ನಮಗೆ ಉಳಿಗಾಲವಿಲ್ಲ. ಮುರಳೀಧರ ರೈ, ಮಠಂತಬೆಟ್ಟು

ಗಡಿಯಲ್ಲೇ ನಿಯಂತ್ರಿಸಿ
ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಾಣದ್ದಕ್ಕೆ ವಿದೇಶಿ ಅಡಿಕೆಯ ಆಮದು ಕಾರಣ. ಇದನ್ನು ಗಡಿಯಲ್ಲಿ ನಿಯಂತ್ರಿಸಿದಲ್ಲಿ ಮಾತ್ರ ಧಾರಣೆ ಏರಿಕೆ ಸಾಧ್ಯ. ಬಿಳಿ ಅಡಿಕೆ ಮತ್ತು ಕೆಂಪು ಅಡಿಕೆ ಮಿಶ್ರಣದಿಂದ ಪಾನ್‌ಮಸಾಲಾ ತಯಾರಿಸುತ್ತಿರುವುದು, ಕಲಬೆರಕೆ ಅಡಿಕೆ ಗುಜರಾತಿಗೆ ತಲುಪಿರುವುದು, ಹವಾಲಾ ವ್ಯವಹಾರ ಸ್ಥಗಿತಗೊಂಡಿರುವುದು ಕೂಡ ದರ ಕುಸಿತಕ್ಕೆ ಕಾರಣ.
ಎ.ಎಸ್‌. ಭಟ್‌, ನಿವೃತ್ತ ಎಂಡಿ-ಹಾಲಿ ನಿರ್ದೇಶಕ, ಕ್ಯಾಂಪ್ಕೋ

ಗಮನಕ್ಕೆ ಬಂದಿದೆ
ವಿದೇಶದಿಂದ ಆಮದಾದ ಅಡಿಕೆಯನ್ನು ಜಿಲ್ಲೆಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಬೆಲೆ ಕುಸಿತಕ್ಕೆ ತಂತ್ರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕ್ಯಾಂಪ್ಕೋ ಅಧಿಕಾರಿಗಳ ಜತೆ ಚರ್ಚಿಸಿದ್ದು, ಕ್ಯಾಂಪ್ಕೋ ನಿಯೋಗ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳಲು ವಿನಂತಿಸಿದೆ. ಇದು ನಮ್ಮ ವ್ಯಾಪ್ತಿಗೆ ಬರದು. ಮಾರುಕಟ್ಟೆ ವಿಭಾಗ ಗಮನಹರಿಸಿ, ಸ್ಪಷ್ಟ ಮಾಹಿತಿ ನೀಡಬೇಕು.
ಯೋಗೇಶ್‌, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಅಪಾಯಕಾರಿ ಬೆಳವಣಿಗೆ
ವಿಟ್ಲ ಪರಿಸರದ ಖಾಸಗಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ನಮ್ಮ ಗಮನಕ್ಕೆ ಬಂದಿಲ್ಲ. ಆ ರೀತಿ ಕಲಬೆರಕೆ ಮಾಡುವುದರಿಂದ ಜಿಲ್ಲೆಯ ಅಡಿಕೆ ಬೆಳೆಗೆ ಧಕ್ಕೆಯಾಗುತ್ತದೆ. ಮೇಲ್ವಿಚಾರಕರಿಗೆ ಆ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ. ಗಾರ್ಬಲ್‌ಗೆ ವಾರಕ್ಕೆ 3 ಲೋಡ್‌ ವಿದೇಶೀ ಅಡಿಕೆ ಆಮದಾಗಿ, ಕಲಬೆರಕೆ ಮಾಡಿ ಮಾರುಕಟ್ಟೆಗೆ ಪೂರೈಸುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಭಾರತಿ ಪಿ.ಎಸ್‌. ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ, ಬಂಟ್ವಾಳ ಎಪಿಎಂಸಿ

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.