ತಂಡದಿಂದ ಹಲ್ಲೆ; ಒಬ್ಬರಿಗೆ ಗಾಯ
Team Udayavani, Dec 19, 2017, 1:56 AM IST
ಮಂಗಳೂರು: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತಂಡವೊಂದು 4 ಮಂದಿಗೆ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಇದರಿಂದ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿದ್ದು, ಉಳಿದ ಮೂವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಬಂದರ್ನ ಶಫೀಕ್ (45), ಅನೀಸ್ (22), ಹಫೀಝ್ (22) ಗಾಯಗೊಂಡವರು. ಪಾನ್ ಅಂಗಡಿ ವ್ಯಾಪಾರಿಯೊಬ್ಬರಿಗೂ ಗಾಯವಾಗಿದೆ.
ಸೋಮವಾರ ಬಂದರ್ನ ಹರ್ಷ ಬಾರ್ ಬಳಿ ಶಫೀಕ್ ಅವರಿಗೆ ಮೂವರ ತಂಡ ಹಿಗ್ಗಾಮುಗ್ಗ ಥಳಿಸುತ್ತಿತ್ತು. ಈ ಸಂದರ್ಭ ಅದೇ ದಾರಿಯಾಗಿ ಶಫೀಕ್ ಅವರ ಪರಿಚಯದ ಅನೀಸ್ ಪಾಂಡೇಶ್ವರ ಕಡೆಗೆ ತೆರಳುತ್ತಿದ್ದರು. ತಂಡವು ಹಲ್ಲೆ ನಡೆಸುವುದನ್ನು ಕಂಡು ಬಿಡಿಸಲು ಹೋದಾಗ ಮೂವರು ದುಷ್ಕರ್ಮಿಗಳು ತಮ್ಮ ಕಾರಿನಲ್ಲಿದ್ದ ತಲವಾರು ತೆಗೆದು ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಆವಾಗ ಶಫೀಕ್ರ ತಲೆಗೆ ಗಂಭೀರ ಗಾಯವಾದರೆ, ಅನೀಸ್ರ ಬಲಕೈಗೆ ಗಾಯವಾಗಿದೆ. ಅನೀಸ್ ಜತೆ ಇದ್ದ ವಿದ್ಯಾರ್ಥಿ ಹಫೀಝ್, ಮಧ್ಯೆ ಬಾರ್ ಸಮೀಪದ ಪಾನ್ ಅಂಗಡಿ ವ್ಯಾಪಾರಿಗೂ ಗಾಯವಾಗಿದೆ ಎನ್ನಲಾಗಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಮೂವರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ