ಬಿ.ಸಿ. ರೋಡ್‌ KSRTC ಬಸ್‌ ನಿಲ್ದಾಣ ಉದ್ದೇಶ ಈಡೇರಿಲ್ಲ


Team Udayavani, May 24, 2018, 6:35 AM IST

b-c-road-busstand-600.jpg

ಬಂಟ್ವಾಳ : ಏರ್‌ ಪೋರ್ಟ್‌ ಮಾದರಿ ಎಂದೇ ಬಣ್ಣಿಸಲ್ಪಟ್ಟ ಬಿ.ಸಿ. ರೋಡ್‌ KSRTC ಬಸ್‌ ನಿಲ್ದಾಣವು ಯಾವ ಸದುದ್ದೇಶದಿಂದ ಅನುಷ್ಠಾನಕ್ಕೆ ಬಂತೋ ಆ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿದೆ. ಮಂಗಳೂರಿಂದ ಬೆಂಗಳೂರಿಗೆ ನೇರ ಹೋಗುವ ಐರಾವತ, ರಾಜಹಂಸ, ವೋಲ್ವೋ ಬಸ್‌ಗಳು ಬಿ.ಸಿ. ರೋಡ್‌ ಬಸ್‌ ನಿಲ್ದಾಣದ ಒಳಗೆ ಪ್ರವೇಶಿಸುವಲ್ಲಿ ಇರುವಂತಹ ಗೊಂದಲ ನಿವಾರಣೆ ಆಗಬೇಕಾಗಿದೆ. ಬಸ್‌ ನಿಲ್ದಾಣ ಉದ್ಘಾಟನೆಗೆ ಮೊದಲು ಎಲ್ಲ ಬಸ್‌ಗಳು ಸಂಪರ್ಕಿಸುವ ಸೌಲಭ್ಯ ಒದಗಿಸುವ ಬಗ್ಗೆ ಭರವಸೆ ವ್ಯಕ್ತವಾಗಿತ್ತು. ಆದರೆ ಬಸ್‌ ನಿಲ್ದಾಣ ಲೋಕಾರ್ಪಣೆಯಾಗಿ ಎಂಟು ತಿಂಗಳು ಮುಗಿಯುತ್ತಾ ಬಂದರೂ ಘೋಷಿತ ಭರವಸೆಗಳು ಅನುಷ್ಠಾನಕ್ಕೆ ಬಂದಿಲ್ಲ.

ಸಾಧನೆ
ಕಾಸರಗೋಡಿಗೆ ಬಿ.ಸಿ. ರೋಡ್‌ನಿಂದ ಬಸ್‌ ಸರ್ವಿಸ್‌ ಹಾಗೂ ಬಿ.ಸಿ. ರೋಡ್‌ ನಿಂದ ರಾತ್ರಿ ಬೆಂಗಳೂರಿಗೆ ಸ್ಲೀಪರ್‌ ಸರ್ವಿಸ್‌ ಬಸ್‌ ಗಳು ಆರಂಭಗೊಂಡದ್ದನ್ನು ಸಾಧನೆ ಎನ್ನಬೇಕು. ಈ ಹಿಂದೆ ಅಂತಹ ಸೌಲಭ್ಯವೂ ಇರಲಿಲ್ಲ. ಮಂಗಳೂರಿಗೆ ತೆರಳುವ ಕಟ್‌ ರೂಟ್‌ ಬಸ್‌ಗಳು ನಿಲ್ದಾಣ ಪ್ರವೇಶಿಸುವುದೊಂದೇ ಜನರಿಗಾದ ಪ್ರಯೋಜನ. ಮಂಗಳೂರು, ಪುತ್ತೂರು, ಧರ್ಮಸ್ಥಳ, ಬೆಳ್ತಂಗಡಿ, ವಿಟ್ಲ ಸಹಿತ ಅನೇಕ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಜನರಿಗೆ ಬಿ.ಸಿ. ರೋಡಿನ ಅಂಗಡಿಯ ಜಗಲಿ, ಫ್ಲೈ ಓವರ್‌ ತಳ, ಸರ್ವಿಸ್‌ ರಸ್ತೆಯ ಮೊದಲ ಮತ್ತು ಕೊನೆಯ ತುದಿಗಳು ಬಸ್‌ ಹತ್ತುವ, ಇಳಿಯುವ ತಾಣವಾಗಿವೆ. ಇದಕ್ಕೆ ಮುಖ್ಯ ಕಾರಣ ಸರ್ವಿಸ್‌ ಬಸ್‌ ಗಳು ಎಂಬ ಆರೋಪವಿದೆ.

ಸಮಸ್ಯೆ ಪರಿಹಾರ
ರಾ.ಹೆ.ಯಲ್ಲಿ ಬಿ.ಸಿ. ರೋಡ್‌ ಬಸ್‌ ನಿಲ್ದಾಣಕ್ಕೆ ರಾಜಹಂಸ, ಐರಾವತ ಬಸ್‌ ಗಳು ಬರುವುದಕ್ಕೆ ಸಮರ್ಪಕ ಎಂಟ್ರಿ ಇಲ್ಲ.  ದೊಡ್ಡ ಬಸ್‌ಗಳು ನಿಲ್ದಾಣಕ್ಕೆ ತಿರುಗುವ ಸ್ಥಳದಲ್ಲಿ ಡಿವೈಡರ್‌ ಬದಿ ಬಸ್‌ ಗಳಿಗೆ ಉಜ್ಜುವಷ್ಟು ಹತ್ತಿರಕ್ಕೆ ಬರುತ್ತವೆ. ಫ್ಲೈ ಓವರ್‌ನಲ್ಲಿ ರಭಸದಿಂದ ಬರುವ ಇತರ ವಾಹನಗಳಿಗೆ ತಿರುವಿನ ಸಂದರ್ಭ ತಡೆಯಾಗಿ ಸಮಸ್ಯೆ ಎದುರಾಗುತ್ತದೆ. ಸರ್ವಿಸ್‌ ರಸ್ತೆ ಮತ್ತು ಫ್ಲೈ ಓವರ್‌ ಸೇರುವಲ್ಲಿ  ಹೆದ್ದಾರಿಗೆ ಇನ್ನೂ ಸಮರ್ಪಕ ಡಾಮರು ಅಥವಾ ಕಾಂಕ್ರೀಟ್‌ ಕಾಮಗಾರಿ ಆಗಿಲ್ಲ.  ಮಂಗಳೂರಿಂದ ಬರುವ ಬಸ್‌ ಗಳು ಬಿ.ಸಿ. ರೋಡ್‌ ಹಳೆ ನಿಲ್ದಾಣಕ್ಕೆ ನೇರ ಬರುವುದರಿಂದ ಜನರಿಗೂ ಬಿ.ಸಿ. ರೋಡ್‌ ನೂತನ ಬಸ್‌ ನಿಲ್ದಾಣದ ಸಂಪರ್ಕವೇ ಇಲ್ಲದಂತಾಗಿದ್ದು, ಅದಕ್ಕೆ ಪರಿಹಾರ ಬೇಕಿದೆ. ಅಧಿಕಾರಿಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಹೆದ್ದಾರಿ ಸುರಕ್ಷೆ ಆಡಳಿತ ಇನ್ನೂ KSRTC ಬಸ್‌ ನಿಲ್ದಾಣದ ಎದುರು ಇರುವ ಡಿವೈಡರ್‌ ತೆರವುಗೊಳಿಸಿಲ್ಲ. ವೋಲ್ವೋ ಬಸ್‌ ಸಹಿತ ಬಿ.ಸಿ. ರೋಡಿಗೆ ಮಂಗಳೂರಿನಿಂದ ಬರುವ ಎಲ್ಲ ಬಸ್‌ಗಳು ನಿಲ್ದಾಣ ಪ್ರವೇಶಿಸುವಲ್ಲಿ ಇರುವಂತ ಅಡೆತಡೆಗಳ ನಿವಾರಣೆ ಆಗಬೇಕಿದೆ.

ಪ್ರಯತ್ನ ಆಗಲಿ
ಬೆಳಗ್ಗೆ  ಐರಾವತ ಬಸ್‌ ಗಳು ಫ್ಲೈಓವರ್‌ ಆರಂಭದಲ್ಲಿ ಅಥವಾ KSRTC ಬಸ್‌ ನಿಲ್ದಾಣದ ಎದುರು ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ಒಳಗೆ ಬರುವ ಪ್ರಯತ್ನವನ್ನೇ ಮಾಡುವುದಿಲ್ಲ. ನಿಲ್ದಾಣಕ್ಕೆ ಬರುವ ಕೆಲಸ ಮೊದಲು ಆಗಬೇಕು. ರಾತ್ರಿ ಹೊತ್ತಿಗೆ  KSRTC ಬಸ್‌ ನಿಲ್ದಾಣದೊಳಗೆ ಪ್ರಯಾಣಿಕರು ಬರುವುದೇ ಇಲ್ಲ. ಪ್ರಮುಖವಾಗಿ ಬೆಂಗಳೂರು, ಮೈಸೂರಿಗೆ ತೆರಳುವ  ಬಸ್‌ ಗಳು ನಿಲ್ದಾಣಕ್ಕೆ ಬರುವುದಿಲ್ಲ. ಇಳಿಯುವ ಪ್ರಯಾಣಿಕರು ಇಲ್ಲ ಎಂಬ ಕಾರಣಕ್ಕಾಗಿ ನಿಲ್ದಾಣ ಪ್ರವೇಶಿಸುವುದಿಲ್ಲ. ಕನಿಷ್ಠ ಪ್ರಯಾಣಿಕರಿಗೆ ಪರಿಚಯಿಸುವ ಉದ್ದೇಶದಿಂದ ಐರಾವತ ಬಸ್‌ ಗಳನ್ನು ನಿಲ್ದಾಣಕ್ಕೆ  ಕೊಂಡೊಯ್ಯಬಹುದು ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಅವಕಾಶ ಮಾಡಿಕೊಡಲಿ
ಮಂಗಳೂರಿಂದ ಬೆಂಗಳೂರಿಗೆ ಹೋಗುವ ರಾಜಹಂಸ, ವೋಲ್ವೊ ಬಸ್‌ ಗಳು ಬಿ.ಸಿ. ರೋಡ್‌ ಬಸ್‌ ನಿಲ್ದಾಣದ ಎದುರು ಫ್ಲೈ ಓವರ್‌ ಮುಕ್ತಾಯದಲ್ಲಿ ನೋ ಎಂಟ್ರಿ ಇರುವ ಕಾರಣಕ್ಕೆ ಬಸ್‌ ನಿಲ್ದಾಣಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹೆದ್ದಾರಿ ಪ್ರಾಧಿಕಾರ ರಾ.ಹೆ.ಯಲ್ಲಿ ತಿರುವಿಗೆ ನಿಯಮಾನುಸಾರ ಸಂಚಾರ ಅವಕಾಶ ಮಾಡಿಕೊಟ್ಟರೆ ಬಸ್‌ಗಳು ಬರಲು ಅಡ್ಡಿ ಇಲ್ಲ. ಬಿ.ಸಿ. ರೋಡ್‌ ಖಾಸಗಿ ಬಸ್‌ ನಿಲ್ದಾಣದ ಸನಿಹ ಫ್ಲೈ ಓವರ್‌ ಅಡಿಯಲ್ಲಿ ಬಸ್‌ ಗಳು ತಿರುಗಿ ನಿಲ್ದಾಣಕ್ಕೆ ಬರುವುದಾದಲ್ಲಿ ಬಸ್‌ ನ ಅಡಿಭಾಗಕ್ಕೆ ರಸ್ತೆಯ ಅಂಚು ತಾಗುವುದರಿಂದ ಇಲ್ಲಿಂದಲೂ ಬರಲು ಸಾಧ್ಯವಾಗುವುದಿಲ್ಲ. ಸಂಬಂಧಪಟ್ಟ ಇಲಾಖೆ ಸೂಕ್ತ ಅವಕಾಶ ಮಾಡಿಕೊಟ್ಟಲ್ಲಿ ಬಸ್‌ ಗಳು ನಿಲ್ದಾಣಕ್ಕೆ ಬರುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. 
– ವೆಂಕಟರಮಣ ಭಟ್‌, ಸಂಚಾರ ನಿಯಂತ್ರಕರು, ಬಿ.ಸಿ. ರೋಡ್‌ KSRTC ಬಸ್‌ ನಿಲ್ದಾಣ

— ರಾಜಾ ಬಂಟ್ವಾಳ 

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.