ಬಾಹುಬಲಿ ಕ್ಷೇತ್ರ: ಗುರುಪೂರ್ಣಿಮೆ ಆಚರಣೆ
Team Udayavani, Jul 11, 2017, 2:40 AM IST
ವೇಣೂರು: ಪುಷ್ಪಗಿರಿ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಚಾತುರ್ಮಾಸ್ಯ ವರ್ಷಾಯೋಗವು ಚಾತುರ್ಮಾಸ್ಯ ಸಂಕಲ್ಪದೊಂದಿಗೆ ರವಿವಾರ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಆರಂಭಗೊಂಡಿತು.
ಗುರುಪೂರ್ಣಿಮೆ ನಿಮಿತ್ತ ಗುರುಪೂಜೆ ನೆರವೇರಿಸಿ ವಿದ್ಯಾರ್ಥಿಗಳು, ಬಾಲಕ-ಬಾಲಕಿಯರಿಗೆ ಗುರುಮಂತ್ರ ಬೋಧಿಸಿ ಆಶೀರ್ವಚನ ನೀಡಿದ ಶ್ರೀ ಪ್ರಸಂಗಸಾಗರ ಮುನಿಯವರು, ಜೈನ ಧರ್ಮದಲ್ಲಿ ಅಷ್ಟಾಹಿ°ಕ ಪರ್ವದ ಅಂತಿಮ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸುತ್ತಿದ್ದು, ಭಗವಾನ್ ಮಹಾವೀರ ಸ್ವಾಮಿ ಸಮವಸರಣದಲ್ಲಿ ವಿರಾಜಮಾನವಾಗಿ ದಿವ್ಯಧ್ವನಿ ಹೊರಡಿಸಿದ ಪವಿತ್ರ ದಿನ ಗುರುಪೂರ್ಣಿಮೆಯಾಗಿರುತ್ತದೆ. ಯಾರ ಜೀವನದಲ್ಲಿ ಗುರು ಇಲ್ಲವೋ ಅವನು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಗುರುವು ನಮ್ಮ ಪಾಲಿಗೆ ಜ್ಞಾನದ ಬೆಳಕನ್ನು ನೀಡುವವರು. ಪ್ರತಿನಿತ್ಯ ಗುರುಮಂತ್ರವನ್ನು 108 ಬಾರಿ ಜಪಿಸಿದರೆ ಸ್ಮರಣಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಮಕ್ಕಳಿಗೆ ತಂದೆ-ತಾಯಿಯವರೇ ಗುರುಗಳಾಗಬೇಕು. ಗುರು ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ ಜೀವನ ಪರಿವರ್ತನೆ ಮಾಡಬಲ್ಲರು ಎಂದು ಹೇಳಿದರು.
ಬೆಳಗ್ಗೆ ಶ್ರೀ ಪಾರ್ಶ್ವನಾಥ ಬಸದಿಯಲ್ಲಿ ಲಘುಗಣಧರ ಆರಾಧನೆ ಬಳಿಕ ಬಾಹುಬಲಿ ಸಭಾಭವನದಲ್ಲಿ ಗುರುಪೂಜೆ ನೆರವೇರಿತು. ಸಮಾರಂಭದಲ್ಲಿ ಬಾಲಬ್ರಹ್ಮಚಾರಿ ಶ್ರೀ ಸೋಮದೇವ ಬೆ„ಯ್ನಾಜಿ, ಶ್ರೀ ಶ್ರೀಕಾಂತ ಬೆ„ಯ್ನಾಜಿ ಆಶೀರ್ವಚನ ನೀಡಿದರು. ಬಾಲಬ್ರಹ್ಮಚಾರಿ ಶ್ರೀ ಧರ್ಮನಾಥ ಬೆ„ಯ್ನಾಜಿ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಆಚರಣೆ ಸಮಿತಿಯ ಅಧ್ಯಕ್ಷ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲ, ಜಿ.ಪಂ. ಸದಸ್ಯ ವಿ. ಪದ್ಮಶೇಖರ ಜೈನ್, ಉದ್ಯಮಿ ಧನ್ಯ ಕುಮಾರ್ ರೈ ಬಿಳಿಯೂರುಗುತ್ತು, ಪುಷ್ಪರಾಜ ಹೆಗ್ಡೆ, ಜಯಕೀರ್ತಿ ಜೈನ್, ಉದಯಕುಮಾರ್ ಕಟ್ಟೆಮನೆ, ಡಾ| ಶಾಂತಿಪ್ರಸಾದ್, ಉದಯ ಕುಮಾರ್ ಸೇಮಿತ, ಪ್ರಸನ್ನ ಆರ್. ಹೆಗ್ಡೆ, ಪ್ರವೀಣ್ ಪಡಿವಾಳ್, ಶರ್ಮಿತ್ ಕುಮಾರ್, ಸುಧೀರ್ ಕುಮಾರ್, ಪ್ರಮೋದ್ ಕುಮಾರ್, ಡಾ| ಅಶೋಕ್, ಭರತ್ ಆರಿಗ, ಸ್ವಪ್ನ, ಪ್ರಿಯದರ್ಶಿನಿ, ಪೂರ್ಣಿಮಾ ಹಾಗೂ ಮತ್ತಿತರರು ಹಾಜರಿದ್ದು ಸಹಕರಿಸಿದರು.
ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ, ಜೈನ್ ಮಿಲನ್, ಯುವಜನ ಸಂಘ, ಮಹಿಳಾ ಸಂಘದ ಸದಸ್ಯರು ಸಹಕರಿಸಿದರು.
ಡಾ| ಬಿ.ಪಿ. ಇಂದ್ರ ಸ್ವಾಗತಿಸಿ ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ