ಮುದ್ರಿತ ಪ್ರತಿಯಲ್ಲಿ ಉದ್ಯಮ ಪರವಾನಿಗೆ
Team Udayavani, Dec 22, 2018, 10:39 AM IST
ಬಜಪೆ: ಗ್ರಾಮ ಪಂಚಾಯತ್ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರವನ್ನು ಕೈಬರಹ ಮೂಲಕ ನೀಡಲಾಗುತ್ತದೆ. ಆದರೆ ಬಜಪೆ ಗ್ರಾ.ಪಂ. ಕಾಗದ ರಹಿತ ಡಿಜಿಟಲ್ ಸೇವೆಗೆ ಮುಂದಾಗಿದೆ. ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ಹೊಸ ತಂತ್ರಾಂಶ ಅಳವಡಿಸಿಕೊಂಡಿದೆ.
ಜನರಿಗೆ ಶೀಘ್ರ ಮತ್ತು ಪರಿಪೂರ್ಣ ಸೇವೆಗಳನ್ನು ಸುಲಭ ರೀತಿಯಲ್ಲಿ ನೀಡಲು ಬಜಪೆ ಗ್ರಾ.ಪಂ. ಆದ್ಯತೆ ನೀಡಿದೆ. ಆಡಳಿತಕ್ಕೆ ಆಧುನಿಕ ಸ್ಪರ್ಶ ನೀಡುವುದು, ಸುಲಭ ಸೇವೆಯ ಜತೆಗೆ ಪಾರದರ್ಶಕತೆ ಇದರ ಉದ್ದೇಶ.
ಗ್ರಾ.ಪಂ.ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರ ಕೈಬರಹ ದಲ್ಲಿ ನೀಡುವುದರಿಂದ ಅವು ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ. ಅದನ್ನು ಬದಲಾವಣೆ ಮಾಡವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದಕ್ಕೆ ರಿಜಿಸ್ಟರ್ ಪುಸ್ತಕವನ್ನು ಕೂಡ ನಿರ್ವಹಿಸುವ ಅಗತ್ಯ ಗ್ರಾ.ಪಂ.ಗಿದೆ.
ಆದರೆ ಬಜಪೆ ಗ್ರಾ.ಪಂ. ಈ ಸಮಸ್ಯೆಯನ್ನು ಪರಿಹರಿಸಲು ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ನಿರ್ಧರಿಸಿದೆ. ಅರ್ಜಿದಾರರು ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ ಮುದ್ರಿತ ಪರವಾನಿಗೆ ಪತ್ರ ಪಡೆಯಬಹುದು.
ಈ ತಂತ್ರಾಂಶ ಅಳವಡಿಕೆಯಿಂದ ಅರ್ಜಿದಾರನ ಬಳಿಯಿದ್ದ ದಾಖಲೆ ಕಳೆದುಹೋದರೂ ಶುಲ್ಕ ಕಟ್ಟಿದರೆ ಇನ್ನೊಂದು ಪ್ರತಿ ಪಡೆಯಬಹುದು. ಪಂಚಾಯತ್ ಸಿಬಂದಿಗೂ ಕೈ ಬರಹದ ಶ್ರಮ ಕಡಿಮೆಯಾಗಲಿದೆ.
ಅರ್ಜಿದಾರರ ಸಮಯ ಉಳಿತಾಯವಾಗಲಿದೆ. ಪರವಾನಿಗೆದಾರನ ಭಾವಚಿತ್ರ ಸಹಿತ ಪತ್ರ ಸಿಗಲಿದೆ. ನೀಡಿದ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು. ಇದಕ್ಕೆ ಮೇಲ್ವಿಚಾರಕ ಅಭಿಯಂತರರ ವಿವರ ನಮೂದಿಸಬೇಕಾಗಿದೆ. ಪ್ರಮಾಣ ಪತ್ರದ ಹಿಂದುಗಡೆ 11 ಶರ್ತ ಹಾಗೂ 4 ವಿಶೇಷ ಶರ್ತಗಳಿಗೆ ಬದ್ಧನಾಗಿರುವ ಬಗ್ಗೆ ಪರವಾನಿಗೆದಾರ ಸಹಿ ಹಾಕಬೇಕಾಗುತ್ತದೆ. ಒಂದು ತಿಂಗಳಲ್ಲಿ, ವರ್ಷದಲ್ಲಿ ಎಷ್ಟು ಪರವಾನಿಗೆಗಳನ್ನು ನೀಡಲಾಗಿದೆ ಎಂದು ಕ್ಷಣಾರ್ಧದಲ್ಲಿ ಹೇಳಬಹುದು. ನೀಡಿದ ಎಲ್ಲ ಪರವಾನಿಗೆಗಳ ಕಾಗದ ರಹಿತ ದಾಖಲೆಗಳು ಪಂಚಾಯತ್ ತಂತ್ರಾಂಶದಲ್ಲಿ ದಾಖಲಾಗಿರುತ್ತವೆ.
ಸರಕಾರಿ ಸೇವೆ ಶೀಘ್ರ ತಲುಪುವ ಉದ್ದೇಶ
ಪಂಚಾಯತ್ ವ್ಯವಸ್ಥೆಯು ಜನರಿಗೆ ಬಹಳ ಹತ್ತಿರದಲ್ಲಿರುವ ಸರಕಾರಿ ವ್ಯವಸ್ಥೆ. ಸರಕಾರಿ ಯೋಜನೆ ಮತ್ತು ಸವಲತ್ತುಗಳು ಪಾರದರ್ಶಕವಾಗಿ ಶೀಘ್ರವಾಗಿ ಜನರಿಗೆ ತಲುಪಿದರೆ, ಪಂಚಾಯತ್ನ ಮೇಲಿನ ಗೌರವ ಮತ್ತು ನಂಬಿಕೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ, ಜನಸ್ನೇಹಿಯನ್ನಾಗಿಸುವುದು ಪಂಚಾಯತ್ ಆಡಳಿತ ಮಂಡಳಿಯ ಉದ್ದೇಶ.
ಸಾಯೀಶ್ ಚೌಟ ಪಿಡಿಒ, ಬಜಪೆ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ