ಮೊದಲರ್ಧ ಶೂಟಿಂಗ್ ನಡೆಸಿದ ಬಲಿಪೆ
Team Udayavani, May 31, 2018, 4:06 PM IST
ವಿಭಿನ್ನ ಕಥೆ ಹಾಗೂ ಆಯಾಮದ ಮೂಲಕ ಕೋಸ್ಟಲ್ ವುಡ್ನಲ್ಲಿ ಸಿನೆಮಾಗಳು ತಯಾರಾಗುತ್ತಲೇ ಇವೆ. ಇದರಂತೆ, ‘ಬಲಿಪೆ’ ಎಂಬ ಟೈಟಲ್ನಲ್ಲಿ ಹೊಸ ಸಿನೆಮಾವೊಂದು ಸೆಟ್ಟೇರಲು ಸಿದ್ಧವಾಗಿದೆ. ಈಗಾಗಲೇ ಶೂಟಿಂಗ್ ಕೂಡ ಆರಂಭಿಸಿರುವ ಬಲಿಪೆಯಲ್ಲಿ ಯಾರಿದ್ದಾರೆ? ಯಾವ ರೀತಿಯ ಕಥೆ? ಸಹಿ ತ ಹಲವು ವಿಚಾರಗಳು ಇನ್ನಷ್ಟೇ ತಿಳಿಯಬೇಕಿದೆ. ಅಂದ ಹಾಗೆ ಹೇಮಂತ್ ಸುವರ್ಣ ನಿರ್ಮಾಣದ ಈ ಸಿನೆಮಾದ ರಚನೆ ಹಾಗೂ ನಿರ್ದೆಶನವನ್ನು ಪ್ರಸಾದ್ ಆಳ್ವ ಮಾಡಿದ್ದಾರೆ.
ಅಭಿಷೇಕ್ ಅರ್ಕುಳ ಸಹ ನಿರ್ದೆಶನದ ಈ ಸಿನೆಮಾಕ್ಕೆ ರಕ್ಷಿತ್ ಚಿನ್ನು ಛಾಯಾಗ್ರಹಣ ಮಾಡಿದ್ದಾರೆ. ಎಂಡೋಸಲ್ಫಾನ್ ಪೀಡಿತ ಪ್ರದೇಶವನ್ನು ಈ ಸಿನೆಮಾದಲ್ಲಿ ಪ್ರತಿಬಿಂಬಿಸುವ ಪ್ರಯತ್ನ ನಡೆಸಲಾಗಿದೆ. ಚಿರತೆಯನ್ನು ತುಳುವಿನಲ್ಲಿ ‘ಬಲಿಪೆ’ ಎಂದು ಕರೆಯುವ ಕಾರಣದಿಂದ ಬಲಿಷ್ಠ ಎಂಬ ರೀತಿಯಲ್ಲಿ ಸಿನೆಮಾ ಸಿದ್ಧಪಡಿಸಲಾಗಿದೆ. ಮೊದಲರ್ಧ ಶೂಟಿಂಗ್ ಮುಗಿಸಿದ ಈ ಸಿನೆಮಾ ಶೀಘ್ರದಲ್ಲಿ ಎರಡನೇ ಹಂತದ ಶೂಟಿಂಗ್ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ