ಬಂಟ್ವಾಳ: ಎಸೆಸೆಲ್ಸಿ ಟಾಪರ್ ವಿದ್ಯಾರ್ಥಿನಿಗೆ ಶಾಸಕರಿಂದ ಸಮ್ಮಾನ
Team Udayavani, May 2, 2019, 6:03 AM IST
ಬಂಟ್ವಾಳ: ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡಿ ರುವ ಬಂಟ್ವಾಳ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ವಿದ್ಯಾರ್ಥಿನಿ ಅನುಪಮಾ ಕಾಮತ್ ಅವರನ್ನು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಎ. 30ರಂದು ವಿದ್ಯಾರ್ಥಿನಿಯ ಗೃಹದಲ್ಲಿ ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ಅಭಿನಂದಿಸಿದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಸದಸ್ಯೆ ಸುಗುಣಾ ಕಿಣಿ, ದುರ್ಗಾದಾಸ್ ಶೆಣೈ, ರಮೇಶ್ ಕುಲಾಲ್, ಮಧುಕರ ಮಲ್ಯ, ರಮೇಶ್ ಕಿಣಿ, ವಿದ್ಯಾರ್ಥಿನಿ ತಂದೆ ಡಾ| ದಿನೇಶ್ ಕಾಮತ್, ತಾಯಿ ಡಾ| ಅನುರಾಧಾ ಕಾಮತ್ ಜತೆಗಿದ್ದರು.