ಕುಮಾರಧಾರಾ ನದಿಗೆ ಇಳಿಯುವಾಗ ಇರಲಿ ಮುಂಜಾಗ್ರತೆ

ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಗುಂಡಿ ಪಕ್ಕದಲ್ಲೇ ಇದೆ ಅಪಾಯಕಾರಿ ಕಯ

Team Udayavani, Apr 18, 2019, 6:00 AM IST

12

ನರಿಮೊಗರು: ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಅವಭೃಥ ಸ್ನಾನಕ್ಕಾಗಿ ಪೇಟೆ ಸವಾರಿಯ ಮೂಲಕ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ಸಂಭ್ರಮದಿಂದ ತೆರಳುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಎ. 18ರ ಸಂಜೆ ಪುತ್ತೂರು ದೇವಸ್ಥಾನದಿಂದ ಹೊರಟು
ದರ್ಬೆ-ಕೂರ್ನಡ್ಕ-ಮರೀಲು-ಮುಕ್ವೆ- ಪುರುಷರಕಟ್ಟೆ-ನರಿಮೊಗರು-ಕರೆಮನೆ- ಕೊಡಿನೀರು ಮೂಲಕ ಕುಕ್ಕತ್ತಡಿ ಅರಿಪೆಕಟ್ಟ ದಾರಿಯಾಗಿ ಸಾಗಿ ಎ. 19ಕ್ಕೆ ಮುಂಜಾನೆ ವೀರಮಂಗಲಕ್ಕೆ ತಲುಪಿ ಅಲ್ಲಿ ಅವಭೃಥ ಸ್ನಾನ ನೆರವೇರುತ್ತದೆ.

ಹಿಂದೆ ದೇವರ ಅವಭೃಥ ಸ್ನಾನ, ನದಿ ನೀರಿನ ಅಭಿಷೇಕ ಹೀಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯದೆ ಭಕ್ತರು ನದಿಗೆ ಇಳಿಯುವಂತಿರಲಿಲ್ಲ. ಸ್ನಾನ ಮಾಡುವುದು ಕೂಡ ಸರಿಯಲ್ಲ. ಇದು ಹಿಂದೆ ಕಡ್ಡಾಯವಾಗಿ ಪಾಲನೆಯಾದರೂ, ಇತ್ತೀಚಿನ ದಿನಗಳಲ್ಲಿ ಅವಭೃಥ ಸವಾರಿಯ ಜತೆ ಬಂದ ಭಕ್ತರಲ್ಲಿ ಕೆಲವು ಮಂದಿ ದೇವರ ಅವಭೃಥ ಸ್ನಾನಕ್ಕೆ ಮೊದಲೇ ನದಿಯಲ್ಲಿ ಸ್ನಾನ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಹೀಗೆ ಸ್ನಾನ ಮಾಡಿದ ಇಬ್ಬರು ವಿದ್ಯಾರ್ಥಿಗಳು ನೀರಿನ ಕಯದಲ್ಲಿ ಸಿಲುಕಿ ಮೃತಪಟ್ಟಿದ್ದರು. ಇದಕ್ಕಾಗಿ ಸ್ನಾನಕ್ಕೆ ತೆರಳುವವರು ಸೂಚನೆಗಳನ್ನು ಪಾಲಿಸಿಕೊಂಡು ಎಚ್ಚರವಾಗಿರಬೇಕು.

ದೇವರ ಅವಭೃಥ ಸ್ನಾನದ ಬಳಿಕವೇ ನದಿ ನೀರು ತೀರ್ಥವಾಗುತ್ತದೆ. ಆ ಬಳಿಕ ಮಾಡಿದ ಸ್ನಾನ ಪವಿತ್ರ ತೀರ್ಥ ಸ್ನಾನವಾಗುತ್ತದೆ. ಈ ಪವಿತ್ರ ಸ್ನಾನ ಫಲಪ್ರದಾಯಕ. ಪಾಪನಾಶಕ ಎಂಬುದು ಹಿಂದಿನಿಂದ ಹರಿದು ಬಂದ ಸಂಪ್ರದಾಯವಾಗಿದೆ. ದೇವರಿಗಿಂತ ಮೊದಲು ಇಳಿಯಬಾರದು. ಮಹಾಲಿಂಗೇಶ್ವರ ದೇವರ ಜಳಕಕ್ಕೆ ವಿಶೇಷ ಪ್ರಾಧಾನ್ಯ ಇದೆ. ಅವಭೃಥಕ್ಕೆಂದೇ ಪುತ್ತೂರಿನಿಂದ ವೀರಮಂಗಲಕ್ಕೆ ಬರುವ ದೇವರು ನದಿ ತಟದ ಕಟ್ಟೆಯಲ್ಲಿ ಪೂಜೆ ಪಡೆದು ಅಲ್ಲಿಂದ ಜಳಕ ಸೇವೆಗೆ ಬರುತ್ತಾರೆ. ಅನಂತರ ಪೂಜಾ ವಿಧಿ ಮುಗಿಸಿ ಪುತ್ತೂರಿಗೆ ನಿರ್ಗಮನವಾಗುತ್ತದೆ.

ಅಪಾಯ ಸಾಧ್ಯತೆ
ದೇವರ ಸ್ನಾನವಾದ ಬಳಿಕ ಅದೇ ನೀರಿನಲ್ಲಿ ಪುಣ್ಯಸ್ನಾನ ಮಾಡಲು ಸಾವಿ ರಾರು ಸಂಖ್ಯೆಯ ಜನ ಕಾಯುತ್ತಿರುತ್ತಾರೆ. ಇಲ್ಲಿನ ನಂಬಿಕೆ ಪ್ರಕಾರ ಎ. 18ರ ರಾತ್ರಿಯಾದ ಅನಂತರ ಮರುದಿನ ಬೆಳಗ್ಗೆ ದೇವರ ಜಳಕ ಆಗುವ ಮೊದಲು ಜಳಕದ ಗುಂಡಿಗಿಂತ ಮೇಲ್ಭಾಗದಲ್ಲಿ ಯಾರೂ ಸ್ನಾನ ಮಾಡಬಾರದು. ನೀರಿಗಿಳಿಯಬಾರದು. ಹಾಗೇನಾದರೂ ಆದರೆ ಅಪಾಯ
ಕಟ್ಟಿಟ್ಟ ಬುತ್ತಿ.

ಅಪಾಯಕಾರಿ ನೀರಿನ ಸುಳಿಗಳು
ಎಪ್ರಿಲ್‌ ಹೊತ್ತಲ್ಲಿ ಇಲ್ಲಿನ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಕೆಲವು ಕಡೆಯ ಹೊಂಡಗಳಲ್ಲಿ ಮಾತ್ರ ನೀರಿರುತ್ತದೆ. ದೇವರ ಜಳಕದ ಗುಂಡಿಯಲ್ಲೂ ತಾತ್ಕಾಲಿಕವಾಗಿ ನೀರು ಸಂಗ್ರಹಿಸಲಾಗುತ್ತದೆ. ಆದರೆ ಇದಕ್ಕಿಂತ ಮೇಲ್ಭಾಗಕ್ಕೆ ಬಂದರೆ ಅಪಾಯಕಾರಿ ಮೂರ್ನಾಲ್ಕು ಕಯ (ಸುಳಿ ಇರುವ ನೀರಿನ ಹೊಂಡ) ಇದ್ದು, ಇದರಲ್ಲಿ ಹೇರಳ ನೀರಿದೆ. ಕಯಕ್ಕೆ ಇಳಿದರೆ ನುರಿತ ಈಜುಪಟುಗಳಿಗೂ ನಿಯಂತ್ರಣ ತಪ್ಪುತ್ತದೆ ಎನ್ನುತ್ತಾರೆ ಅಲ್ಲಿಯವರು. ಈ ಕಾರಣಕ್ಕಾಗಿಯೇ ಇಲ್ಲಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುತ್ತದೆ.

 ಎಚ್ಚರಿಕೆ ಅಗತ್ಯ
ಇಲ್ಲಿ ಕಟ್ಟೆ ಸಮಿತಿಯವರು ಒಂದು ವಾರದಿಂದ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳಿಗೆ ಶ್ರಮಿಸುತ್ತಿದ್ದಾರೆ. ಧ್ವನಿವರ್ಧಕಗಳಲ್ಲಿ ಸೂಚನೆ ನೀಡುತ್ತಾರೆ. ಆದರೂ ಕೆಲವೊಮ್ಮೆ ದುರ್ಘ‌ಟನೆಗಳು ನಡೆದಿವೆ. ದೇವರ ಅವಭೃಥವಾದ ಬಳಿಕ ಸ್ನಾನ ಮಾಡಿ ತೆರಳಬಹುದು. ಎಚ್ಚರಿಕೆ ಅಗತ್ಯ. ಜಳಕದ ಸ್ಥಳ ಹೊರತಾಗಿ ನದಿಯ ಇತರ ಕಡೆಗಳಲ್ಲಿ ಸುಳಿ ಗಳಿರುವುದರಿಂದ ಇಳಿಬಾರದು.
ರವೀಂದ್ರ ಗೌಡ ಕೈಲಾಜೆ, ಸ್ಥಳೀಯರು ವೀರಮಂಗಲ

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ; ಪ್ರಕರಣ ದಾಖಲು

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.