ಬೆಳ್ತಂಗಡಿ: ರಾಜ್ಯ ಹೆದ್ದಾರಿಗೆ ಹರಿಯುತ್ತಿದೆ ಕಚ್ಚಾರಸ್ತೆ ಮಣ್ಣು
Team Udayavani, May 21, 2018, 11:21 AM IST
ಬೆಳ್ತಂಗಡಿ : ತಾಲೂಕಿನ ವಿವಿಧೆಡೆ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗಳ ಮಣ್ಣು ಹರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗಳಿಂದ ನೀರು ಹರಿದು ಹೆದ್ದಾರಿಯನ್ನು ಸೇರುತ್ತಿದೆ. ಈ ವೇಳೆ ರಸ್ತೆಗೆ ಹಾಕಿರುವ ಮಣ್ಣೂ ಡಾಂಬರು ರಸ್ತೆಯನ್ನು ಸೇರುತ್ತಿದ್ದು, ವಾಹನ ಸವಾರರು ವಾಹನ ಜಾರಿ ಬೀಳುವ ಹೆದರಿಕೆಯಲ್ಲೇ ವಾಹನ ಚಾಲನೆ ಮಾಡಬೇಕಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಗಮನಿಸದೆ ಚಲಿಸಿ ಸ್ಕಿಡ್ ಆಗಿ ಬೀಳುವ ಸಂಭವಗಳೂ ಹೆಚ್ಚಾಗಿವೆ.
ತಾಲೂಕಿನ ಕೆಲವು ಭಾಗಗಳ ತಿರುವುಗಳಲ್ಲಿ ಇಂತಹ ಪರಿಸ್ಥಿತಿಯಿದ್ದು, ಈಗಾಗಲೇ ಹಲವು ಮಂದಿ ಜಾರಿ ಬಿದ್ದಿರುವ ಪ್ರಕರಣಗಳೂ ನಡೆದಿವೆ. ಮಳೆಗಾಲ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್