ದುರಸ್ತಿಯಾಗಬೇಕಿದೆ ಭಗವತಿ ನಗರ ಮುಖ್ಯ ರಸ್ತೆ
Team Udayavani, Jun 3, 2018, 3:31 PM IST
ಮಂಗಳೂರಿನ ಮಣ್ಣಗುಡ್ಡೆ ವೇರ್ ಹೌಸ್ನಿಂದ ಕೊಡಿಯಾಲ್ಬೈಲ್ನ ಶಾಲ್ ಆಸ್ಪತ್ರೆಯ ಮುಂಭಾಗದಲ್ಲಿ ಹಾದುಹೋಗುವ ಅಳಕೆ ಕಂಬ್ಳಕ್ಕೆ ಸೇರುವ ರಸ್ತೆ (ಭಗವತಿ ನಗರ ಮುಖ್ಯ ರಸ್ತೆ- ಜಿ.ಜಿ.ರಸ್ತೆ) ಸಂಪೂರ್ಣ ಹದಗೆಟ್ಟು ಹಲವು ವರ್ಷಗಳೇ ಸಂದಿದೆ. ಕೊಳಚೆ ನೀರು ರಸ್ತೆಯುದ್ದಕ್ಕೂ ಉಕ್ಕಿ ಹರಿದು ದಶಕಗಳ ಕಾಲ ಇಲ್ಲಿನ ನಿವಾಸಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದ ಇಲ್ಲಿನ ಒಳಚರಂಡಿ ವ್ಯವಸ್ಥೆ
ಇತ್ತೀಚೆಗೆ ತಾತ್ಕಾಲಿಕವಾಗಿ ದುರಸ್ತಿಯಾಗಿದ್ದರೂ, ರಸ್ತೆ ಮಾತ್ರ ಅರ್ಧಂಬರ್ಧ ಕಾಂಕ್ರೀಟೀಕರಣಗೊಂಡು ವಾಹನ ಸಂಚಾರಕ್ಕೆ ತೀವ್ರ ತೊಡಕನ್ನುಂಟು ಮಾಡುತ್ತಿದೆ.
ಶಾಲೆ, ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆಯನ್ನು ಒಳ ಚರಂಡಿ ಸಂಪರ್ಕಕ್ಕಾಗಿ ಕಡಿದು ಹಾಕಲಾದ ಜಾಗದಲ್ಲಿ ಭಾರೀ ಎತ್ತರದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಗೆ ಅಡ್ಡಲಾಗಿರುವ ಈ ಕಾಂಕ್ರೀಟ್ ಗುಡ್ಡೆ ಕಿರು ವಾಹನ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಂಬ್ಳದ ಮುಖ್ಯ ರಸ್ತೆಯಿಂದ ಈ ರಸ್ತೆಯ ಸ್ವಲ್ಪ ಭಾಗಕ್ಕೆ ಮಾತ್ರ ಕಾಂಕ್ರೀಟ್ ಕಾಮಗಾರಿ ಮುಗಿಸಿ ಬಾಕಿ ಇರುವ ರಸ್ತೆಗೆ ಕಾಂಕ್ರೀಟ್ ಹಾಕದೆ ಬಿಟ್ಟಿರು ವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ನೀಡಿದ್ದರೂ ಯಾರೂ ಕ್ರಮಕೈಗೊಂಡಿಲ್ಲ. ತಗ್ಗು ಪ್ರದೇಶದಲ್ಲಿರುವ ಈ ರಸ್ತೆಯ ಪರಿಸ್ಥಿತಿ ಮಳೆಗಾಲದಲ್ಲಂತೂ ಹೇಳತೀರದು. ಹೀಗಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಈ ರಸ್ತೆಯ ಬಗ್ಗೆ ಗಮನಹರಿಸಿ, ತುರ್ತು ಪರಿಹಾರಕ್ಕೆ ಯೋಜನೆ ರೂಪಿಸಬೇಕಿದೆ.
ಸತೀಶ್ ಶೆಟ್ಟಿ, ಕೊಡಿಯಾಲ್ಬೈಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್