ಮೂಡಬಿದಿರೆಯಲ್ಲಿ ಬಿಜೆಪಿಗೆ ಮೊದಲ ಗೆಲುವು !
Team Udayavani, May 16, 2018, 6:45 AM IST
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಖಾತೆ ತೆರೆಯುವ ಮೂಲಕ ಮೊದಲ ಗೆಲುವು ತಂದು ಕೊಟ್ಟ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ. ಅಷ್ಟೇ ಅಲ್ಲ ಬಿಜೆಪಿ ಪಾಲಿಗೆ ಈ ಕ್ಷೇತ್ರದ ಗೆಲುವು ಡಬಲ್ ಧಮಾಕ ಕೂಡ ಹೌದು.
ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆಲುವು ಸಾಧಿಸಿರಲಿಲ್ಲ. ಈ ಕಾರಣಕ್ಕೆ ಮೂಡಬಿದಿರೆಯಲ್ಲಿ ಎರಡು ವಿಧಗಳಲ್ಲಿ ಬಿಜೆಪಿ ತನ್ನ ಮೊದಲ ಜಯ ದಾಖಲಿಸಿಕೊಂಡಿದೆ. ರಾಜ್ಯದ 222 ಕ್ಷೇತ್ರಗಳ ಪೈಕಿ ಮೂಡಬಿದಿರೆಯ ಫಲಿತಾಂಶ ಮೊದಲು ಘೋಷಣೆಯಾಗಿದ್ದು, ಆದು ಬಿಜೆಪಿ ಪಾಲಿಗೆ ಮೊದಲ ಜಯ ಕೂಡ ಹೌದು. ಎರಡನೆಯದಾಗಿ ಮೂಡಬಿದಿರೆ ಕ್ಷೇತ್ರದ ಇತಿಹಾಸ ದಲ್ಲೇ ಬಿಜೆಪಿ ಮೊದಲ ಜಯ ಪಡೆದುಕೊಂಡು ಉಮಾನಾಥ ಕೋಟ್ಯಾನ್ ಅವರು ಕ್ಷೇತ್ರದ ಪಾಲಿಗೆ ಬಿಜೆಪಿಯ ಪ್ರಥಮ ಶಾಸಕರೆನಿಸಿಕೊಂಡಿದ್ದಾರೆ.
ಪ್ರಶಾಂತ ಪೂಜಾರಿ ಮನೆಗೆ ಕೋಟ್ಯಾನ್ ಭೇಟಿ
ಮೂಡಬಿದಿರೆ: ಬಜರಂಗ ದಳ ಕಾರ್ಯಕರ್ತನಾಗಿದ್ದು ದುಷ್ಕರ್ಮಿಗಳಿಂದ ಎರಡು ವರ್ಷಗಳ ಹಿಂದೆ ಕೊಲೆಗೀಡಾದ ಬಿರಾವು ಪರಿಸರದ ಪ್ರಶಾಂತ ಪೂಜಾರಿ ಅವರ ಮನೆಗೆ ನೂತನ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದರು.
ಪ್ರಶಾಂತ ಪೂಜಾರಿ ಅವರ ತಂದೆ, ಹೂವಿನ ವ್ಯಾಪಾರಿ ಆನಂದ ಪೂಜಾರಿ ಅವರನ್ನು ತಬ್ಬಿಕೊಂಡಾಗ ಆನಂದ ಪೂಜಾರಿ ಹಾಗೂ ಅವರ ಪತ್ನಿ ಕಣ್ಣೀರ್ಗರೆದರು. ಕೋಟ್ಯಾನ್ ಅವರು ಪ್ರಶಾಂತ್ ಪೂಜಾರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಶ್ರದ್ಧಾಂಜಲಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ