ಬಾಟಲಿ ನೀರು ಮಾರಿ ಸಹಾಯಧನ ಸಂಗ್ರಹ
ರಾಜಕೇಸರಿ ತಂಡದ ವಿನೂತನ ಪ್ರಯತ್ನ
Team Udayavani, May 13, 2019, 6:00 AM IST
ಬೆಳ್ತಂಗಡಿ: ಬೆಳ್ತಂಗಡಿಯ ಮುಂಡಾಜೆ ಬಳಿಯ ಶ್ರುತಿ ಶೆಟ್ಟಿ ಅವರು ಟ್ರಂಬೊಸೈಟೋಪೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಕುಟುಂಬಕ್ಕೆ ನೆರವಾಗಲು ರಾಜಕೇಸರಿ ತಂಡ ವಿನೂತನ ಪ್ರಯತ್ನ ನಡೆಸಿದೆ.
ಬಡ ಕುಟುಂಬಕ್ಕೆ ಕೈಲಾದ ಸಹಾಯ ಮಾಡುವ ದೃಷ್ಟಿಯಿಂದ ರವಿವಾರ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ರಾಜಕೇಸರಿಯ ಸಂಸ್ಥಾಪಕರಾದ ದೀಪಕ್ ಜಿ. ನೇತೃತ್ವದಲ್ಲಿ ಸುಮಾರು 22 ಮಂದಿ ಸದಸ್ಯರು ಜತೆಗೂಡಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಾಟಲಿ ನೀರು ಮಾರಿ ಅದರಿಂದ ಬಂದ ಲಾಭದ ಹಣವನ್ನು ಕುಟುಂಬಕ್ಕೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆಳಗ್ಗೆ ಕಾರ್ಯಕ್ರಮಕ್ಕೆ ಶುಭಕೋರಿ ಕಳುಹಿಸಿದ್ದರು. 50 ಸಾವಿರ ರೂ. ಗುರಿಯೊಂದಿಗೆ ಸುಮಾರು 22 ಮಂದಿ ತಂಡವು 10 ರೂ. ಬೆಲೆಯ 3,000 ಸಾವಿರ ಬಿಸ್ಲೇರಿ ನೀರಿನ ಬಾಟಲ್ ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಲಾಭಾಂಶದ 15 ಸಾವಿರ ರೂ. ಹಣ ಶ್ರುತಿ ಶೆಟ್ಟಿ ಚಿಕಿತ್ಸೆಗೆ ವಿನಿಯೋಗವಾಗಲಿದೆ.
ಪ್ರಯಾಣಿಕರೂ ಇದಕ್ಕೆ ಸಹಕರಿಸಿದ್ದು, ಹೆಚ್ಚಿನವರು ಹೆಚ್ಚಿನ ದರ ನೀಡಿ ಬಾಟಲಿ ಖರೀದಿಸಿ ಯುವಕರ ಕೆಲಸಕ್ಕೆ ಕೈಜೋಡಿಸಿದ್ದಾರೆ.
ಮಾದರಿ ಸಂಘಟನೆ
ಇಷ್ಟು ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿ ಮೆಡಿಕಲ್ ಕ್ಯಾಂಪ್, ಶಿಕ್ಷಣಕ್ಕೆ ಸಹಾಯಧನ, ಬಡವರಿಗೆ ಮನೆಕಟ್ಟಲು ನೆರವಾಗುವುದು ಸಹಿತ ಸಂಘದ ಸದಸ್ಯರು ತಿಂಗಳ ಒಂದು ವಾರದ ಸಂಬಳವನ್ನು ಬಡವರ ಸೇವೆಗಾಗಿ ಮೀಸಲಿರಿಸುವ ಮೂಲಕ ಸಮಾಜಕ್ಕೆ ಮಾದರಿ ಸಂಘಟನೆಯಾಗಿದೆ. ಈಗಾಗಲೇ ದ.ಕ. ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತನ್ನ ಶಾಖೆ ಹೊಂದಿದ್ದು, ಸಾವಿರಾರು ಯುವಕರು ಕೈಜೋಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ