ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ: ಶಿವರಾತ್ರಿ
Team Udayavani, Feb 26, 2017, 12:54 PM IST
ಬಂಟ್ವಾಳ : ಪ್ರಪಂಚದ ಆದಿಯಿಂದಲೇ ಸನಾತನ ಧರ್ಮವು ಪ್ರಸ್ತಾಪದಲ್ಲಿ ಇತ್ತು. ಕಾಲಕ್ರಮೇಣ ಮಸುಕಾಗಿದ್ದ ಅದರ ನಿಜ ಸತ್ವವನ್ನು ಈಶ್ವರೀಯ ವಿದ್ಯಾಲಯ ಸಮರ್ಪಕವಾಗಿ ಪ್ರಪಂಚದ ಮುಂದೆ ಪ್ರಸ್ತುತಪಡಿಸಿದೆ. ಶಿವರಾತ್ರಿಯ ಸಂದರ್ಭದಲ್ಲಿ ಮನಸ್ಸಿನ ಕಲ್ಮಶವನ್ನು ತೆಗೆದುಹಾಕಿ ಈಶ್ವರೀಯ ತತ್ವವನ್ನು ಅಳವಡಿಸಿಕೊಂಡು ಜೀವನ ಪೂರ್ತಿ ಸದ್ಗುಣವಂತರಾಗುವ ಸಂಕಲ್ಪ ಮಾಡಬೇಕು ಎಂದು ಬಂಟ್ವಾಳ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಹೇಳಿದರು.
ಅವರು ಫೆ. 24ರಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಆಶ್ರಯದ ಶಿವಜ್ಯೋತಿ ಭವನ ಬಿ.ಸಿ. ರೋಡ್ನಲ್ಲಿ ನಡೆದ ಶಿವರಾತ್ರಿ ಜಾಗರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಎಸ್ವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾಗಿರಿ ಮುಖ್ಯಶಿಕ್ಷಕ ಸೋಮನಾಥ ಭಟ್ ಮಾತನಾಡಿ, ಮಾನವನಲ್ಲಿ ಆರು ಬಗೆಯ ದೌರ್ಬಲ್ಯಗಳು ಇವೆ. ಅದನ್ನು ಅರಿಷಡ್ವೈರಿ ಎಂದು ಋಷಿಮುನಿಗಳು ವಿಶ್ಲೇಷಿಸಿದ್ದಾರೆ. ನಾವು ದೌರ್ಬಲ್ಯಗಳನ್ನು ಮೀರಿ ನಿಲ್ಲಬೇಕು ಎಂದು ಹೇಳಿದರು.
ಒಳ್ಳೆಯತನಕ್ಕೆ ಒಳ್ಳೆಯ ಫಲಿತಾಂಶ
ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಮುಖ್ಯಶಿಕ್ಷಕ ಪರಮೇಶ್ವರ ಹೆಗ್ಡೆ ಮಾತನಾಡಿ, ನಾವು ಒಳ್ಳೆಯತನ ಪ್ರದರ್ಶಿಸಿದಾಗ ಇನ್ನೊಬ್ಬ ಅದನ್ನು ಸ್ವೀಕರಿಸಬಹುದು. ಸ್ವೀಕರಿಸದೇ ಇರಬಹುದು. ನಮ್ಮ ಒಳ್ಳೆಯ ತನಕ್ಕೆ ಒಮ್ಮೆ ಬೆಲೆ ಸಿಕ್ಕದೇ ಹೋದರೂ ಫಲಿತಾಂಶದಲ್ಲಿ ಒಳ್ಳೆಯದೇ ಆಗುತ್ತದೆ. ದುಷ್ಟರು ಶಿಷ್ಟರಾಗುವುದು ಶಿಷ್ಟರ ಶಿಷ್ಟಾಚಾರದಿಂದ ಎಂಬುದು ಅನೇಕ ದಾರ್ಶನಿಕರ ಉದಾಹರಣೆಯಿಂದ ಕಾಣ ಬಹುದು ಎಂದರು.
ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ. ಸಾವಿತ್ರಿ ಮಾತನಾಡಿ, ಇವನಾರು ಎಂದು ಕೇಳುವ ಬದಲು, ಅಕ್ಕಮಹಾದೇವಿ ಅವರ ವಚನದಂತೆ “ಇವ ನಮ್ಮವ’ ಎಂಬ ಭಾತೃತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಂಯೋಜಕ ಬ್ರಹ್ಮಕುಮಾರ್ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿವರಾತ್ರಿ ಮಾನವನಲ್ಲಿರುವ ವಿಕಾರಗಳನ್ನು ಮುಕ್ತಗೊಳಿಸಿ ಒಳಿತನ್ನು ನೀಡಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ