ಶಿಶಿಲ: ಬಿಎಸ್ಸೆನ್ನೆಲ್ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಆಕ್ರೋಶ
Team Udayavani, Nov 27, 2019, 6:05 PM IST
ನೆಲ್ಯಾಡಿ: ಒಂದು ವರ್ಷದಿಂದ ಆಗಾಗ ಕೈಕೊಡುತ್ತಿದ್ದ ಬಿಎಸ್ಸೆನ್ನೆಲ್ ನೆಟ್ವರ್ಕ್ ಸಮಸ್ಯೆ ಮೂರ್ನಾಲ್ಕು ತಿಂಗಳಿಂದ ಪೂರ್ತಿ ಕೈಕೊಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಿಶಿಲ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಒಂದು ವರ್ಷಗಳಿಂದ ನಿರಂತರ ಕೈಕೊಡುತ್ತಿದ್ದ ಬಿಎಸ್ಸೆನ್ನೆಲ್ ನೆಟ್ವರ್ಕ್ 3 ತಿಂಗಳಿಂದ ಸಂಪೂರ್ಣ ಹದಗೆಟ್ಟು ಬ್ಯಾಂಕ್ ಹಾಗೂ ಪಡಿತರ ವ್ಯವಸ್ಥೆಗಾಗಿ ಗ್ರಾಮಸ್ಥರು ಪರದಾಡುತ್ತಿರುವ ಸನ್ನಿವೇಶ ನಿರ್ಮಾಣವಾಗಿತ್ತು.
ಆರೋಗ್ಯ ಸಮಸ್ಯೆಯಂತಹ ತುರ್ತು ಸಂದರ್ಭದಲ್ಲಿ, ಪಂಚಾಯತ್ ಸೇವೆಗಳು ಹಾಗೂ ಅಟೋ ಚಾಲಕರಿಗೆ ಬಾಡಿಗೆ ಕೂಡ ಇಲ್ಲದಂತಹ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವಂತಾಗಿದ್ದು, ಬುಧವಾರ ಬಿಎಸ್ಸೆನ್ನೆಲ್ ಕಚೇರಿಗೆ ಬೀಗ ಜಡಿದು ಧಿಕ್ಕಾರ ಹಾಕಿ ಪ್ರತಿಭಟನೆ ನಡೆಸಿದರು.
ಕರುಣಾಕರ ಶಿಶಿಲ, ಗಣೇಶ ಕೆಮ್ಮಣ್ಣು, ಮಾಧವ ಶಿಶಿಲ, ಕಮಲಾಕ್ಷ ಶಿಶಿಲ, ನರಸಿಂಹ ಗೌಡ ಚೆನ್ನಪ್ಪ ಎಂ.ಕೆ., ಗಣೇಶ್ ಬರ್ಗುಳ, ಸುಧಿನ್ ಡಿ., ಕಮಲಾಕ್ಷ ಸತ್ತಿಕಲ್, ದೇರಣ್ಣ ಅಡ್ಡಹಳ್ಳ, ಕೊರಗಪ್ಪ ಪಡು³, ದೇವಣ್ಣ ಗೌಡ, ನಾರಾಯಣ ಗೌಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ