ಬಜೆಟ್‌ ಕಡೆಗೆ ನಿರೀಕ್ಷೆ ; ಆಡಳಿತಕ್ಕೆ ಸತ್ವಪರೀಕ್ಷೆ


Team Udayavani, Mar 14, 2017, 11:15 AM IST

kagodu.jpg

ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ 4 ಹೊಸ ತಾಲೂಕುಗಳ ರಚನೆಯ ಅನುಷ್ಠಾನ ಭರವಸೆಗೆ ಬರೋಬ್ಬರಿ 4 ವರ್ಷಗಳು. ಪ್ರತಿ ಬಾರಿ ಬಜೆಟ್‌ ಸಮೀಪಿಸುತ್ತಿರುವಾಗಲೂ ತಾ|ಗಳ ರಚನೆ ಸಾಕಾರದ ಆಶೆಗಳು ಗರಿಗೆದರುತ್ತವೆ. ಆದರೆ ಹಂತ ಹಂತವಾಗಿ ಮಾಡುವ ಭರವಸೆಯೊಂದಿಗೆ ಮತ್ತೆ ಮುಂದಿನ ವರ್ಷದತ್ತ ಆಶಾವಾದ ಹೊರಳುತ್ತದೆ. 

ಹೊಸದಾಗಿ ಕಡಬ, ಮೂಡಬಿದಿರೆ, ಬೈಂದೂರು, ಬ್ರಹ್ಮಾವರ ತಾಲೂಕುಗಳ ಘೋಷಣೆ ಮಾಡಿ 4 ವರ್ಷಗಳು ಕಳೆದಿವೆ. ಪ್ರಸ್ತುತದ ಆಡಳಿತಾರೂಢ ಸರಕಾರ ಹಂತ ಹಂತವಾಗಿ ತಾಲೂಕು ರಚನೆ ಮಾಡುವುದಾಗಿ 4 ವರ್ಷಗಳಿಂದಲೂ ಭರವಸೆ ನೀಡುತ್ತಾ ಬಂದಿದೆ. ಈಗ ಮುಂದಿನ ಆರ್ಥಿಕ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭಗೊಂಡಿವೆ. ಪ್ರಸ್ತುತ ಕಂದಾಯ ಸಚಿವರಾಗಿರುವ ಕಾಗೋಡು ತಿಮ್ಮಪ್ಪ ಹೊಸ ತಾಲೂಕುಗಳ ಅನುಷ್ಠಾನದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಬಂದಿದ್ದಾರೆ. ಇದಕ್ಕೆ ಪೂರಕ ಕ್ರಮಗಳು ಬಜೆಟ್‌ನಲ್ಲಿ ಕಂಡುಬರಬಹುದು ಹಾಗೂ ಘೋಷಣೆಯಾಗಿರುವ ಹೊಸ ತಾಲೂಕುಗಳ ರಚನೆಗೆ ಅನುದಾನ ದೊರೆತು ಹಲವು ವರ್ಷಗಳ ಕನಸಿಗೆ ಸಾಕಾರ ಭಾಗ್ಯ ಲಭಿಸೀತು ಎಂಬ ನಿರೀಕ್ಷೆ ಈ ಭಾಗದ ಜನರದ್ದಾಗಿದೆ. 

ಹಿಂದಿನ ಬಿಜೆಪಿ ಸರಕಾರ ತನ್ನ ಆಡಳಿತಾವಧಿಯ ಕೊನೆ ಘಟ್ಟದಲ್ಲಿ ಹೊಸದಾಗಿ 53 ತಾಲೂಕುಗಳ ರಚನೆಯನ್ನು ಘೋಷಿಸಿತ್ತು. ಮುಂದೆ ನಡೆದ ಚುನಾವಣೆಯಲ್ಲಿ ಸೋಲು ಕಂಡ ಪರಿಣಾಮ ಇದರ ಅನುಷ್ಠಾನ ಹೊಣೆ ಮುಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರದ ಅಂಗಳಕ್ಕೆ ಬಂತು.  ಕಾಂಗ್ರೆಸ್‌ ಸರಕಾರ ತನ್ನ ಅಧಿಕಾರಾವಧಿಯ 4ನೇ ವರ್ಷದ ಬಜೆಟ್‌ ಮಂಡನೆ ಕೆಲವೇ ದಿನಗಳಲ್ಲಿ ಆಗಲಿದೆ. ಮುಂದಿನ ವರ್ಷ ಚುನಾವಣಾ ವರ್ಷ. ಈ ಬಜೆಟ್‌ನಲ್ಲಿ ಹೊಸ ತಾಲೂಕುಗಳ ರಚನೆಯಾದರೆ ಕಾಂಗ್ರೆಸ್‌ ಆಡಳಿತದಲ್ಲಿ ಸಾಕಾರ ಭಾಗ್ಯ ಪಡೆದಂತಾಗುತ್ತದೆ. 

55 ವರ್ಷಗಳ ಬೇಡಿಕೆ
ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಹೊಸ ತಾಲೂಕುಗಳ ರಚನೆ ಬೇಡಿಕೆ 55 ವರ್ಷಗಳಷ್ಟು ಹಿಂದಿನದ್ದು. ಇದರ ಸಾಧ್ಯಾಸಾಧ್ಯತೆ ಪರಿಶೀಲಿಸಲು ರಚಿಸಿದ ಸಮಿತಿ ವರದಿ ನೀಡಿ 31 ವರ್ಷಗಳು ಕಳೆದಿವೆ.

1961ರಲ್ಲಿ ಕಡಬ ತಾಲೂಕು ರಚನೆಗೆ ಆಗ್ರಹ ಆರಂಭಗೊಂಡಿತ್ತು. ಕಡಬ ತಾಲೂಕು ಹೋರಾಟ ಸಮಿತಿ ರಚಿಸಿಕೊಂಡು ನಿರಂತರ ಹೋರಾಟಗಳು ನಡೆದಿವೆ. 1964ರಲ್ಲಿ ಮೂಡಬಿದಿರೆ ತಾಲೂಕು ರಚನೆ ಬೇಡಿಕೆ ಹುಟ್ಟಿಕೊಂಡಿತ್ತು. ಹೊಸ ತಾಲೂಕುಗಳ ರಚನೆಗೆ ಕರ್ನಾಟಕ ಸರಕಾರ 1985ರಲ್ಲಿ ನೇಮಿಸಿದ್ದ ಬಿ.ಎಂ. ಹುಂಡೇಕರ್‌ ಸಮಿತಿ ಕಡಬ, ಮೂಡಬಿದಿರೆ ತಾಲೂಕುಗಳ ರಚನೆಗೆ ವರದಿಯಲ್ಲಿ ಶಿಫಾರಸು ಮಾಡಿತ್ತು. ಆ ಬಳಿಕ ರಚಿಸಿದ್ದ ಗದ್ದಿಗೌಡರ್‌ ಸಮಿತಿ ಹಾಗೂ ವಾಸುದೇವ ರಾವ್‌ ಸಮಿತಿ ವರದಿಯಲ್ಲೂ ಇದರ ಆವಶ್ಯಕತೆ ಪ್ರತಿಪಾದನೆ ಮಾಡಲಾಗಿತ್ತು. 

2013-14ರಲ್ಲಿ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ ದ.ಕ. ಜಿಲ್ಲೆಯ ಕಡಬ, ಮೂಡಬಿದಿರೆ ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರ, ಬೈಂದೂರು ಸೇರಿ 43 ಹೊಸ ತಾಲೂಕುಗಳ ರಚನೆ ಘೋಷಣೆ ಮಾಡಿದಾಗ ಬಹುದಿನಗಳ ಕನಸು ಸಾಕಾರಗೊಂಡಿತು ಎಂದು ಸಂಭ್ರಮಪಡಲಾಯಿತು. ಆದರೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಈಗಿನ ಸರಕಾರ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದಿದ್ದ ಪರಿಣಾಮ ಜನತೆ ಮತ್ತೆ ನಿರಾಸೆ ಅನುಭವಿಸುವಂತಾಯಿತು. 

ತಾಲೂಕುಗಳ ರಚನೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾವನೆಯಾ ಗುತ್ತಿರುವಾಗ ಲಭಿಸಿದ್ದು, ಹಂತಹಂತ ಗಳ ಅನುಷ್ಠಾನದ ಭರವಸೆ ಮಾತ್ರ. ವಿಳಂಬಕ್ಕೆ ಆರ್ಥಿಕ ಅನುದಾನದ ಆವಶ್ಯಕತೆ ತೋರಿಸಲಾಗುತ್ತಿದೆ. 

ಅರ್ಧ ಕೆಲಸ ಆಗಿದೆ
ಘೋಷಣೆಯಾಗಿರುವ ಹೊಸ ತಾಲೂಕುಗಳು ಈಗಾಗಲೇ ತಾಲೂಕು ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಒಂದಷ್ಟು ಕೆಲಸ ಆಗಿದೆ. 2005ರಲ್ಲಿ ಕಡಬ ಹೋಬಳಿ ರಚಿಸಿ ವಿಶೇಷ ತಹಶೀಲ್ದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂಡಬಿದಿರೆಯೂ ಪ್ರಸ್ತುತ ಹೋಬಳಿ ಸ್ವರೂಪದಲ್ಲಿದ್ದು, ವಿಶೇಷ ತಹಶೀಲ್ದಾರರು ಇದ್ದಾರೆ. ಹಾಗಾಗಿ ತಾಲೂಕುಗಳ ರಚನೆಗೆ ಆರ್ಥಿಕ ಹೊರೆ ಪ್ರಮಾಣ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಘೋಷಣೆಯಾಗಿರುವ ಹೊಸ 53 ತಾಲೂಕುಗಳ ರಚನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕೋರಿ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶೀಲಿಸುವ ಭರವಸೆ ನೀಡಿದ್ದಾರೆ. 
– ಕಾಗೋಡು ತಿಮ್ಮಪ್ಪ , ಕಂದಾಯ ಸಚಿವರು

– ಕೇಶವ ಕುಂದರ್

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.