ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ
Team Udayavani, Apr 23, 2019, 7:14 AM IST
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವುದು ಪ್ರಚಲಿತವಾದ ಮಾತು. ಜ್ಞಾನ ಸಂಪಾದನೆಗೆ ಅಂದಿನಿಂದ ಇಂದಿನವರೆಗೂ ಪುಸ್ತಕವೇ ಮೂಲವಾಗಿದೆ. ಇ-ಬುಕ್ ಇರುವ ಈ ಕಾಲದಲ್ಲೂ ಪುಸ್ತಕಗಳ ತನ್ನ ಮೌಲ್ಯಗಳನ್ನು ಕಳೆದುಕೊಂಡಿಲ್ಲ. ಪುಸ್ತಕ, ಲೇಖಕರು ಮತ್ತು ಪ್ರಕಾಶನಗಳ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 1995ರಲ್ಲಿ ಪ್ಯಾರಿಸ್ನಲ್ಲಿ ನಡೆದ ಯುನೆಸ್ಕೋದ ಸಾಮಾನ್ಯ ಸಭೆಯಲ್ಲಿ ಎಪ್ರಿಲ್ 23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವಾದ್ಯಂತ ಯುನೆಸ್ಕೋ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸಲಾಗುತ್ತದೆ.
ಆಚರಣೆಯ ಉದ್ದೇಶ
ಒಬ್ಬ ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ. ಈ ಆಧುನಿಕ ಕಾಲದಲ್ಲಿ ಇಂದಿನ ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಕೊರತೆ ಬಹಳಷ್ಟಿದೆ. ಯುವ ಜನತೆಯಲ್ಲಿ ಪುಸ್ತಕ ಕುರಿತಾದ ಮಹತ್ವ ಹೆಚ್ಚಿಸಲು, ಪುಸ್ತಕ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಪುಸ್ತಕದ ಉಳಿವಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಕೃತಿಸ್ವಾಮ್ಯ ದಿನ
ಪುಸ್ತಕಗಳ ರಕ್ಷಕನಾಗಿ ಕೃತಿಸ್ವಾಮ್ಯ ಕೆಲಸ ಮಾಡುತ್ತದೆ. ಲೇಖಕರಿಗೆ ಪುಸ್ತಕಗಳೇ ಆಸ್ತಿ .
ಈ ಅಸ್ತಿಯನ್ನು ಕದಿಯದಂತೆ ನೋಡುಕೊಳ್ಳುತ್ತದೆ ಕೃತಿಸ್ವಾಮ್ಯ ಕಾಯ್ದೆ. ಭಾರತ ಸಹಿತ ವಿಶ್ವ ದ ಅನೇಕ ರಾಷ್ಟ್ರಗಳಲ್ಲಿ ಕೃತಿ ಸ್ವಾಮ್ಯ ಕಾಯ್ದೆ ಇದೆ.
ಪುಸ್ತಕದ ಜತೆ ಸಂಗೀತ, ನಾಟಕ, ಸಿನೆಮಾ, ಛಾಯಾಚಿತ್ರ, ತಂತ್ರಜ್ಞಾನಕ್ಕೂ ಕೃತಿಸ್ವಾಮ್ಯ ಅನ್ವಯವಾಗುತ್ತದೆ. ಕೃತಿ ಸ್ವಾಮ್ಯದ ಅಪರಾಧಿ ಎಂದು ಸಾಬೀತಾದರೆ ದಂಡ ಮತ್ತ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಪುಸ್ತಕ ಓದುವ ಹವ್ಯಾಸ ಇರುವವರೂ ಎಲ್ಲಿ ಬೇಕಾದರೂ ಸಂತೋಷವಾಗಿರುತ್ತಾರೆ ಎನ್ನುವುದು ಮಹಾತ್ಮಾ ಗಾಂಧಿಜೀ ಅವರ ಮಾತು.
ಹಿಂದಿನ ಮತ್ತು ಭವಿಷ್ಯದ ಪೀಳಿಗೆ ನಡುವೆ ತಲೆಮಾರುಗಳ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಪುಸ್ತಕ ನಿಲ್ಲುತ್ತದೆ.
ಪುಸ್ತಕಗಳ ಮಾರಾಟ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅವುಗಳ ಪ್ರಕಟನೆಗಳು ಸ್ಥಿರವಾಗಿವೆ. ಇದು ಪುಸ್ತಕಗಳ ಜನಪ್ರಿಯತೆಗೆ ಸಾಕ್ಷಿ.
ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ
ಮೈ ಮೇಲೆ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂಬ ಮಾತಿನಂತೆ ಪುಸ್ತಕಗಳ ಓದಿನಿಂದ ಮನುಷ್ಯನಿಗೆ ಜ್ಞಾನ ಸಂಪಾದನೆ ಜತೆಗೆ ಆತನ ಅಸ್ತಿತ್ವದ ಬಗ್ಗೆ ಅರಿವಾಗುತ್ತದೆ. ಪ್ರಸ್ತುತವಾಗಿ ಪುಸ್ತಕ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಪುಸ್ತಕ ಓದು, ಮನುಷ್ಯನ ಹವ್ಯಾಸವಷ್ಟೇ ಅಲ್ಲ, ದೈನಂದಿನ ಕಾಯಕವಾಗಲಿ ಎಂಬ ಸದಾಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ