ಕುಲಶೇಖರ; ಪರ್ಯಾಯ ಹಳಿಯಲ್ಲಿ ರೈಲು ಸಂಚಾರ ಆರಂಭ
Team Udayavani, Sep 1, 2019, 5:32 AM IST
ಮಂಗಳೂರು: ಕುಲಶೇಖರದಲ್ಲಿ ರೈಲು ಹಳಿ ಮೇಲೆ ಮಣ್ಣು ಕುಸಿತವಾದ ಭಾಗದಲ್ಲಿ ಪರ್ಯಾಯವಾಗಿ ನಿರ್ಮಿಸಿರುವ 450 ಮೀ. ಉದ್ದದ ಹಳಿ ಪ್ರಯಾಣಕ್ಕೆ ಅರ್ಹವಾಗಿದೆ ಎಂದು ದಕ್ಷಿಣ ರೈಲ್ವೇ ಇಲಾಖೆಯ ಅಧಿಕಾರಿಗಳು ಶನಿವಾರ ಸಂಜೆ ಖಚಿತಪಡಿಸಿದ್ದು, ರೈಲು ಸೇವೆ ಆರಂಭಗೊಂಡಿದೆ.
ನಿಜಾಮುದ್ದೀನ್ (ಹೊಸದಿಲ್ಲಿ)- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್ ನಂ. 12618 ಪ್ರಯಾಣಿಕರ ರೈಲು ಶನಿವಾರ ಸಂಜೆ ಹೊಸ ಹಳಿ ಯಲ್ಲಿ ಸಂಚರಿಸಿತು. 8 ದಿನಗಳಿಂದ ಉಂಟಾಗಿದ್ದ ಸಂಚಾರ ತೊಡಕು ಇದೀಗ ನಿವಾರಣೆಯಾಗಿದೆ.
ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್ನಿಂದ ಪಣಂಬೂರು ವರೆಗೆ ಈ ಮಾರ್ಗದಲ್ಲಿ ಸರಕು ಬೋಗಿಗಳನ್ನು ಓಡಿಸಲಾಯಿತು. ಶನಿವಾರ ಬೆಳಗ್ಗೆ ಮುಂಬಯಿ- ಮಂಗಳೂರು ಮತ್ಸ್ಯಗಂಧ ಎಕ್ಸ್ಪ್ರೆಸ್ (ನಂ.12620) ಸುರತ್ಕಲ್ ವರೆಗೆ ಬಂದು ವಾಪಸಾಗಿತ್ತು. ಮಂಗಳೂರು ಜಂಕ್ಷನ್ – ಮುಂಬಯಿ ಸಿಎಸ್ಎಂಟಿ ಎಕ್ಸ್ಪ್ರೆಸ್ (ನಂ.12134) ಪ್ರಯಾಣವೂ ಮಂಗಳೂರು ಜಂಕ್ಷನ್, ಸುರತ್ಕಲ್ ನಡುವೆ ರದ್ದುಗೊಂಡಿತ್ತು. ಈ ಮಧ್ಯೆ ಎರಡೂ ಭಾಗಗಳಿಂದ ಪ್ರಯಾಣಿಸುವ ಕುರ್ಲಾ- ತಿರುವನಂತಪುರ ಎಕ್ಸ್ಪ್ರೆಸ್ಗಳ ಸುಮಾರು 2,000ದಷ್ಟು ಪ್ರಯಾಣಿಕರ ಸಂಪರ್ಕಕ್ಕಾಗಿ 30 ಬಸ್ಗಳ ಸೇವೆಯನ್ನು ಕೊಂಕಣ ರೈಲ್ವೇ ವಿಭಾಗ ಮಾಡಿಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ