ಬಂಟ್ವಾಳದಲ್ಲಿ ಕಾರು ಪಲ್ಟಿ:ವಿಟ್ಲದ ಅರ್ಚಕ ದಾರುಣ ಸಾವು,ಕುಟುಂಬ ಪಾರು
Team Udayavani, Feb 3, 2017, 2:50 PM IST
ಬಂಟ್ವಾಳ : ಇಲ್ಲಿನ ಎಸ್.ವಿ.ಎಸ್.ಕಾಲೇಜು ಬಳಿಯ ತಿರುವಿನಲ್ಲಿ ಪಾರ್ಚೂನರ್ ಕಾರು ಉರುಳಿ ಬಿದ್ದ ಪರಿಣಾಮ ವಿಟ್ಲದ ಅನಂತೇಶ್ವರ ದೇವಾಲಯದ ಅರ್ಚಕ, ಜ್ಯೋತಿಷಿ ಕಾರ್ತಿಕ್ ಭಟ್ (35) ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗುರುವಾರ ತಡ ರಾತ್ರಿ ದುರ್ಘಟನೆ ಸಂಭವಿಸಿದ್ದು, ಕಾರನ್ನು ಕಾರ್ತಿಕ್ ಭಟ್ ಚಲಾಯಿಸುತ್ತಿದ್ದು, ಜೊತೆಯಲ್ಲಿ ತಂದೆ ವಿಜಯ್ ನಟ್ ,ತಾಯಿ ದೀಪಾ ಭಟ್, ಮಕ್ಕಳಾದ ಅಥರ್ವ ಮತ್ತು ಆದ್ಯಾ ಅವರಿದ್ದು ನಾಲ್ವರೂ ಸಣ್ಣಪುಟ್ಟ ಗಾಯಗಳಿಗೊಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಟೀಲು ದೇವಳದಲ್ಲಿ ಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಾರು ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಉರುಳಿದ್ದು ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಂಜಾಲಕಟ್ಟೆ ಅವಘಡ: ಯುವಕ ಸಾವು
ಪುಂಜಾಲಕಟ್ಟೆಯ ಮದ್ದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಿಕಪ್ ವಾಹನ ಪಲ್ಸರ್ ಬೈಕ್ಗೆ ಗುದ್ದಿದ ಪರಿಣಾಮ ಅವಘಡ ಸಂಭವಿಸಿದೆ. ಬೆಳಾಲು ನಿವಾಸಿ ಗಣೇಶ್ ಮೃತ ಯುವಕ ಎಂದು ತಿಳಿದು ಬಂದಿದೆ.