ಮಂಗಳೂರು: ಬೆಂಕಿಗಾಹುತಿಯಾದ ಕಾರು: ಮಹಿಳೆ, ನಾಯಿ ಪಾರು
Team Udayavani, Mar 30, 2022, 12:42 AM IST
ಮಂಗಳೂರು: ನಿಲ್ಲಿಸಿದ್ದ ಕಾರಿಗೆ ಬೆಂಕಿ ಹತ್ತಿದ ಘಟನೆ ಶಕ್ತಿನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಶಕ್ತಿನಗರದ ಪಾರ್ಕ್ಗೆ ಕಾರಿನಲ್ಲಿ ನಾಯಿಯೊಂದಿಗೆ ಬಂದಿದ್ದ ಮಹಿಳೆ ಕಾರಿನೊಳಗೆ ಮೊಬೈಲ್ ಚಾರ್ಜ್ ಗಿಟ್ಟು ನಾಯಿ ಜತೆಗೆ ಪಾರ್ಕ್ಗೆ ಹೋಗಿ ವಾಪಸ್ ಬಂದಾಗ ಚಾರ್ಜ್ ಇಟ್ಟ ಸ್ಥಳದಲ್ಲಿ ಹೊಗೆ ಕಂಡಿತು.
ಕೂಡಲೇ ಅವರು ಕಾರಿನಿಂದ ಇಳಿದರು. ಆ ಕೂಡಲೇ ಬೆಂಕಿ ಕಾರನ್ನು ವ್ಯಾಪಿಸಿದೆ.
ಇದನ್ನೂ ಓದಿ:ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ ಗೆಲುವು
ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಆದರೆ ಕಾರು ಸುಟ್ಟು ಹೋಗಿದೆ. ಸ್ಥಳೀಯ ಕಾರ್ಪೊರೆಟರ್ ವನಿತಾ ಪ್ರಸಾದ್, ಶಕೀಲಾ ಕಾವಾ ಸ್ಥಳಕ್ಕೆ ಆಗಮಿಸಿದ್ದರು.