ರಾಂ ರಹೀಂ ಕೇಸನ್ನು ಮೊದಲು ತನಿಖೆ ಮಾಡಿದ ಸಿಬಿಐ ಅಧಿಕಾರಿ ಉಪ್ಪಳದವರು!


Team Udayavani, Aug 29, 2017, 1:56 PM IST

Ram-Raheem-29-8.jpg

ಕಾಸರಗೋಡು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಶಿಕ್ಷಗೊಳಗಾಗಿರುವ ಡೇರಾ ಸಚ್ಚಾ ಸೌಧ ಮುಖಂಡ ಬಾಬಾ ರಾಂ ರಹೀಂ ಸಿಂಗ್‌ ಕೇಸನ್ನು ಮೊದಲು ತನಿಖೆ ಮಾಡಿದ್ದು ಕಾಸರಗೋಡು ಜಿಲ್ಲೆಯ ಉಪ್ಪಳ ಮೂಲದ ಸಿಬಿಐ ಅಧಿಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರಸ್ತುತ ನಿವೃತ್ತರಾಗಿರುವ ಎಂ. ನಾರಾಯಣನ್‌ ಅವರೇ ಈ ಅಧಿಕಾರಿ. 

2007ರಲ್ಲಿ ಪಂಜಾಬ್‌ – ಹರಿಯಾಣ ಹೈಕೋರ್ಟಿನ ಆದೇಶದ ಮೇರೆಗೆ ಕೇಸನ್ನು ಸಿಬಿಐಗೊಪ್ಪಿಸುವ ತನಕ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ರಾಜಕೀಯ ಒತ್ತಡದಿಂದಾಗಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಿಬಿಐಗೆ ಹಸ್ತಾಂತರವಾದ ಅನಂತರವೂ ಒತ್ತಡ ಮುಂದುವರಿದಿತ್ತು. ನ್ಯಾಯಾಲಯದ ಆದೇಶವಿದ್ದುದರಿಂದ ನಾರಾಯಣನ್‌ ಎದೆಗುಂದದೆ ತನಿಖೆ ಮುಂದುವರಿಸಿದರು.

ನಾರಾಯಣನ್‌ ಅವರಿಗೆ ಇಬ್ಬರು ಮೇಲಧಿಕಾರಿಗಳು ರಾಂ ರಹೀಮನ ಕೇಸಿನ ಕಡತ ಒಪ್ಪಿಸಿ ಆದಷ್ಟು ಬೇಗ ಕೇಸನ್ನು ‘ಮುಗಿಸಿಬಿಡಿ’ ಎಂದು ಹೇಳಿದ್ದರು. ಕೇಸಿನ ತನಿಖೆ ಪ್ರಾರಂಭಿಸಿದ ಬಳಿಕ ರಾಂ ರಹೀಂನನ್ನು ವಿಚಾರಣೆಗೆ ಗುರಿಪಡಿಸುವ ಸಲುವಾಗಿ ನಾರಾಯಣನ್‌ ತಂಡ ಸಿರ್ಸಾದಲ್ಲಿರುವ ಆಶ್ರಮಕ್ಕೆ ಹೋದಾಗ ಬಾಬಾ ಅವರಿಗೆ ಬರೀ ಅರ್ಧ ತಾಸಿನ ಕಾಲಾವಕಾಶ ನೀಡಿದ.


ಇದಕ್ಕೆ ಸಮ್ಮತಿಸಿ ಒಳ ಹೋದ ಸಿಬಿಐ ತಂಡಕ್ಕೆ ಆಶ್ಚರ್ಯ ಕಾದಿತ್ತು. ಬಾಬಾ ರಾಂ ರಹೀಂನ ಗುಹೆಯಾವ ಪಂಚತಾರಾ ಹೊಟೇಲಿನ ಕೊಠಡಿಗೂ ಕಡಿಮೆಯಿರಲಿಲ್ಲ. ಎಲ್ಲ ಆಧುನಿಕ ಐಷಾರಾಮಗಳು ಅಲ್ಲಿದ್ದವು. ಅರ್ಧ ತಾಸು ಎಂದು ಹೇಳಿದ್ದ ರಾಂ ರಹೀಂನನ್ನು ನಾರಾಯಣನ್‌ ಇದೇ ಗುಹೆಯೊಳಗೆ ಬರೋಬ್ಬರಿ ಮೂರು ತಾಸಿಗೂ ಹೆಚ್ಚು ಹೊತ್ತು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ರಾಂ ರಹೀಂನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿದೆ ಎನ್ನುವುದು ಅವರಿಗೆ ಮನವರಿಕೆಯಾಗಿತ್ತಂತೆ. ತನಿಖೆಯುದ್ದಕ್ಕೂ ನಾರಾಯಣನ್‌ ಮೇಲೆ ವಿವಿಧೆಡೆಗಳಿಂದ ವಿಪರೀತ ಒತ್ತಡ ಇತ್ತು. ಆದರೆ ಯಾವುದಕ್ಕೂ ಸೊಪ್ಪು ಹಾಕದೆ ತನಿಖೆ ಮುಂದುವರಿಸಿದ ಪರಿಣಾಮವಾಗಿ ತಡವಾಗಿಯಾದರೂ ರಾಂ ರಹೀಂ ಕಂಬಿ ಎಣಿಸುವಂತಾಗಿದೆ. ಅತ್ಯಾಚಾರದ ದೂರು ದಾಖಲಿಸಿದ ಮಹಿಳೆಯನ್ನು ಪತ್ತೆಹಚ್ಚಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು ಈ ಪ್ರಕರಣದ ತನಿಖೆಯ ಪ್ರಮುಖ ಘಟ್ಟ ಎಂದು ನಾರಾಯಣನ್‌ ನೆನಪಿಸಿಕೊಂಡಿದ್ದಾರೆ.

ಉ. ಭಾರತದ ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬವಾಗಿ ನಡೆಯುವುದರಿಂದ 15 ವರ್ಷಗಳ ಬಳಿಕ ತೀರ್ಪು ಹೊರಬಂದಿರುವುದು ಆಶ್ಚರ್ಯವಾಗಿಲ್ಲ. ಕೊನೆಗೂ ನಾವು ನಡೆಸಿದ ತನಿಖೆಗೆ ತಕ್ಕ ಪ್ರತಿಫ‌ಲ ಸಿಕ್ಕಿದ ಸಮಾಧಾನವಿದೆ ಎಂದು ನಾರಾಯಣನ್‌ ಪ್ರತಿಕ್ರಿಯಿಸಿದ್ದಾರೆ. ಕೇಸು ಮುಗಿಸಿ ಬಿಡಲು ಹೇಳಿದ ಮೇಲಧಿಕಾರಿಗಳನ್ನು ದೂರಿ ಫ‌ಲವಿಲ್ಲ. ಅವರ ಮೇಲೆ ಕೂಡ ಭಾರೀ ರಾಜಕೀಯ ಒತ್ತಡವಿತ್ತು. ಒತ್ತಡದಲ್ಲೇ ಕೆಲಸ ಮಾಡುವುದು ನಮಗೆ ಅನುಭವವಾಗಿರುತ್ತದೆ. ಮೊಬೈಲ್‌ ಇಲ್ಲದ ಕಾಲದಲ್ಲಿ ಭಯೋತ್ಪಾದನೆ ಕೇಸು ತನಿಖೆ ಮಾಡುವ ಸಂದರ್ಭದಲ್ಲಿ 2-3 ತಿಂಗಳು ಮನೆಗೆ ಹೋಗದಿದ್ದರೆ ಹೆಂಡತಿಗೆ ನಾನು ಬದುಕಿರುವ ಬಗ್ಗೆ ಅನುಮಾನ ಬರುತ್ತಿತ್ತು. ನನಗಾಗಿ ಅವಳು ಪ್ರಾರ್ಥನೆ ಮಾಡುತ್ತಿದ್ದಳು ಎಂದು ನಾರಾಯಣನ್‌ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಉಪ್ಪಳ ಸಮೀಪ ಮುಳಿಂಜದವರಾದ ನಾರಾಯಣನ್‌ 1970ರಲ್ಲಿ ವಿದ್ಯಾನಗರ ಸರಕಾರಿ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದ ಬಳಿಕ ಸಿಬಿಐಗೆ ಸೇರಿದರು. ನಿವೃತ್ತಿಯ ಬಳಿಕ ಅವರು ದಿಲ್ಲಿಯಲ್ಲಿ ಖಾಯಂ ವಾಸವಾಗಿದ್ದಾರೆ. ಆದರೆ ರಾಂ ರಹೀಂನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸುವಾಗ ಅವರು ಹುಟ್ಟೂರಲ್ಲಿದ್ದರು. 2009ರಲ್ಲಿ ಸಿಬಿಐ ಜಂಟಿ ನಿರ್ದೇಶಕರಾಗಿ ಪದೋನ್ನತಿ ಪಡೆದು ನಿವೃತ್ತರಾಗಿರುವ ನಾರಾಯಣನ್‌ ಸೇವೆಯುದ್ದಕ್ಕೂ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯಾ ಪ್ರಕರಣ, ಬಾಬರಿ ಕಟ್ಟಡ ನೆಲಸಮ, ಕಂದಹಾರ್‌ ವಿಮಾನ ಅಪಹರಣ, ಪಂಜಾಬ್‌ ಹಾಗೂ ಜಮ್ಮು- ಕಾಶ್ಮೀರದ ಭಯೋತ್ಪಾದನೆ ಪ್ರಕರಣಗಳು ಸೇರಿದಂತೆ ಹಲವು ಹೈಪ್ರೊಫೈಲ್‌ ಪ್ರಕರಣಗಳ ತನಿಖೆ ನಡೆಸಿದ ಹಿರಿಮೆ ಅವರಿಗಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.