ಸಂಭ್ರಮದ ಗಣರಾಜ್ಯೋತ್ಸವ
Team Udayavani, Jan 27, 2018, 9:22 AM IST
ಮಹಾನಗರ: ದ.ಕ. ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಮಂಗಳೂರು ನೆಹರೂ ಮೈದಾನಿನಲ್ಲಿ ಶುಕ್ರವಾರ ಜರಗಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ರಾಷ್ಟ್ರಧ್ವಜಾರೋಹಣಗೈದು ಗೌರವರಕ್ಷೆ ಸ್ವೀಕರಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊದಿನ್ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿ. ಪಂ. ಸಿಇಒ ಡಾ| ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರಿದ್ದರು.
ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಚಿವ ಯು.ಟಿ. ಖಾದರ್, ಮೇಯರ್ ಕವಿತಾ ಸನಿಲ್ ಪ್ರದಾನ ಮಾಡಿದರು.
ಟಿ.ಎನ್. ರೇವತಿ, (ಲೆಕ್ಕಾಧಿಕಾರಿ, ದ.ಕ. ಜಿ.ಪಂ., ಮಂಗಳೂರು), ಗೋಕುಲ್ ದಾಸ್ ನಾಯಕ್(ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು), ಡಾ| ಗುರುಮೂರ್ತಿ ಎ. (ಸಹಾಯಕ ನಿರ್ದೇಶಕರು, ಉಪನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮಂಗಳೂರು) ಎನ್. ಶಿವಪ್ರಕಾಶ್ (ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ ) ಬಿ. ಶೇಶಪ್ಪ ಬಂಬಿಲ (ದ್ವಿತೀಯ ದರ್ಜೆ ಸಹಾಯಕರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರ), ಲಕ್ಷ್ಮಣ ಪೂಜಾರಿ (ಕಿರಿಯ ಅಭಿಯಂತರರು, ಮಹಾನಗರಪಾಲಿಕೆ ಅವರು ಪ್ರಶಸ್ತಿ ಸ್ವೀಕರಿಸಿದರು.
ಜೀವರಕ್ಷಕ ಪ್ರಶಸ್ತಿ
ಮುಖ್ಯಮಂತ್ರಿ ಹರೀಶ್ ಸಾಂತ್ವಾನ ಯೋಜನೆಯಲ್ಲಿ ಅಪಘಾತದ ಸಂದರ್ಭ ಜೀವರಕ್ಷಣೆ ಮಾಡಿದವರಿಗೆ ನೀಡುವ ಪ್ರಶಸ್ತಿಯನ್ನು ಬೆಳ್ತಂಗಡಿ ಲಾಯಿಲದ ಅಬ್ದುಲ್ ಹಮೀದ್ ಹಾಗೂ ನಂದಾವರದ ಪ್ರಕಾಶ್ ಮರಾಠೆ ಅವರಿಗೆ ಪ್ರದಾನ ಮಾಡಲಾಯಿತು.
ನವಕರ್ನಾಟಕ ವಿಷನ್ ಸ್ಪರ್ಧೆ
ನವಕರ್ನಾಟಕ ವಿಷನ್ 2018 ಅಂಗವಾಗಿ ಸರಕಾರದದ ವತಿಯಿಂದ ಆಯೋಜಿಸಿದ್ದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೊಂತಿ ಮೇರಿ ಡಿ’ಸೋಜಾ (ಮೂಡಬಿದಿರೆ ಮಹಾವೀರ ಕಾಲೇಜು)ಹಾಗೂ ಕನ್ನಡ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ನವೀನ್ ಕುಮಾರ್ (ಮಂಗಳೂರು ರಥಬೀದಿ ಸರಕಾರಿ ಪ್ರಥಮದರ್ಜೆ ಕಾಲೇಜು) ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪೂಜಾಶ್ರೀ (ಸುಳ್ಯ ಸೈಂಟ್ ಜೋಸೆಫ್ ಅ.ಮಾ. ಶಾಲೆ) ಹಾಗೂ ಅಮಿತ್ ಎಂ. (ಕೆನರಾ ಹಿ.ಪ್ರಾ. ಶಾಲೆ ) ಅವರಿಗೆ ಪ್ರದಾನ ಮಾಡಲಾಯಿತು.
ಆಕರ್ಷಕ ಕಾರ್ಯಕ್ರಮ
ನಗರದ ಕೇರಳ ಸಮಾಜಂ ಆ.ಮಾ. ಶಾಲೆ ಮಂಗಳೂರು, ಸೈಂಟ್ ಮೇರಿಸ್ ಆಂಗ್ಲ.ಕನ್ನಡ ಪ್ರೌಢ ಶಾಲೆ ಫಳ್ನೀರ್, ಇನ್ಫೆಮ್ ಟ್ ಜೀಸಸ್ ಜಾಯ್ಲ್ಯಾಂಡ್ ಶಾಲೆ ಬೋಳಾರ, ಕಾಸ್ಸಿಯಾ ಪ್ರೌಡಶಾಲೆ ಜೆಪ್ಪು, ಸೈಂಟ್ ರೀಟಾ ಪ್ರೌಢಶಾಲೆ ಜೆಪ್ಪು, ಸೈಂಟ್ ಜೆರೋಸಾ ಪ್ರೌಢ ಶಾಲೆ ಹಾಗೂ ಸೈಂಟ್ ಜೆರೋಸಾ ಆ.ಮಾ. ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಡೊಂಗರಕೇರಿ ಕೆನರಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ, ದೇಶ ಭಕ್ತಿಗೀತೆ ಹಾಡಿದರು.
ಆಕರ್ಷಕ ಪಥಸಂಚಲನ
ಒಟ್ಟು 21 ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕೆಎಸ್ ಆರ್ಪಿ, ಸಿಎಆರ್, ಸಿವಿಲ್ ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆ, ಅರಣ್ಯ ರಕ್ಷಣ ಪಡೆ, ಎನ್ಸಿಸಿ ಆರ್ಮಿ, ನೇವಲ್, ಏರ್ ವಿಂಗ್ ಹಿರಿಯ ಮತ್ತು ಕಿರಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಭಾರತ ಸೇವದಲ, ರೆಂಜರ್ ಮತ್ತು ರೋವರ್ , ರಸ್ತೆ ಸುರಕ್ಷತಾ ದಳ, ಬಲ್ಮಠ, ಕಾವೂರು ಪ್ರಥಮ ದರ್ಜೆ ಕಾಲೇಜು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಸಿಎಆರ್ ಆರ್ಪಿಐ ವಿಟ್ಠಲ ಶಿಂಧೆ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ನೀಡುವ ಪ್ರಶಸ್ತಿಯಲ್ಲಿ ಎನ್ಸಿಸಿ ನೇವಲ್ ವಿಂಗ್ ಪ್ರಥಮ ಹಾಗೂ ರಸ್ತೆ ಸುರಕ್ಷತಾ ದಳ ದ್ವಿತೀಯ ಪುರಸ್ಕಾರ ಪಡೆದುಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ