ಅಡಿಕೆ ಮರ ಏರಿ ಔಷಧ ಸಿಂಪಡಿಸುವ ದಿಟ್ಟೆ!


Team Udayavani, Aug 4, 2018, 11:09 AM IST

4-agust-3.jpg

ಸುಳ್ಯ : ಅಡಿಕೆ ಮರ ಏರಿ ಔಷಧ ಸಿಂಪಡಿಸುವುದು, ಅಡಿಕೆ ಕೊಯ್ಯುವುದು ಅಂದಾಗ ತತ್‌ಕ್ಷಣ ನೆನಪಾಗುವುದು ಪುರುಷ ಕಾರ್ಮಿಕರು. ಆದರೆ ಇಲ್ಲೊಬ್ಬಳು ಮಹಿಳೆ ಪುರುಷರಿಗಿಂತ ತಾನು ಕಡಿಮೆ ಇಲ್ಲ ಅನ್ನುವುದನ್ನು ಸಾಬೀತುಪಡಿಸಿದ್ದಾರೆ. ಅಡಿಕೆ ಮರ ಏರುವ, ಮದ್ದು ಸಿಂಪಡಿಸುವ ಮೂಲಕ ಅದನ್ನು ಸಾಧಿಸಿ ತೋರಿಸಿದ್ದಾರೆ. ಅಡ್ಕಾರು ಕೋನಡ್ಕಪದವಿನ ಚಂದ್ರಲೇಖಾ ತನ್ನ ಮನೆಯ ತೋಟಕ್ಕೆ ತಾನೇ ಔಷಧ ಸಿಂಪಡಿಸುತ್ತಿರುವ ವಿಶಿಷ್ಟ ಸಾಧಕಿ.

ಇದು ಸುಲಭದ ಕೆಲಸ ಅಲ್ಲ. ಎಲ್ಲ ಪುರುಷರಿಗೂ ಸಾಧ್ಯವಿಲ್ಲ. ಗ್ರಾಮದಲ್ಲಿ ಮೂರು ನಾಲ್ಕು ಮಂದಿ ನಿಪುಣರಷ್ಟೇ ಇರುತ್ತಾರೆ. ಅಂತಹದ್ದರಲ್ಲಿ ಮಹಿಳೆ ತಾನೇನೂ ಕಮ್ಮಿ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಕಂಟ್ರೋಲರ್‌ ಹಿಡಿದು, ದಿನಪೂರ್ತಿ ಮರದ ಮೇಲೆ ನಿಂತು ಔಷಧ ಸಿಂಪಡಿಸುವ ಕಷ್ಟದ ಕಾಯಕಕ್ಕೆ ಮೂರು ವರ್ಷ ಸಂದಿದೆ.

ಅಡಿಕೆ ಮರ ಏರಿದರು..!
ಇವರ ಕಾಯಕ ಆರಂಭವಾದದ್ದೇ ಕಾರ್ಮಿಕರ ಕೊರತೆಯ ಕಾರಣಕ್ಕೆ. ಮೂರು ವರ್ಷದ ಹಿಂದೆ ಮದ್ದು ಬಿಡಲು ಕಾರ್ಮಿ
ಕರು ಸಿಗದೆ ಕೊಳೆ ರೋಗ ಬಂದು ಇವರ ತೋಟದ ಎಳೆ ಅಡಿಕೆ ಧರೆಶಾಹಿಯಾಯಿತು. ಇಡೀ ಕುಟುಂಬ ಚಿಂತೆಯಲ್ಲಿದ್ದಾಗ, ಚಂದ್ರಲೇಖ ಮೆಷಿನ್‌ ಬಳಸಿ ಅಡಕೆ ಮರ ಏರಲು ಆರಂಭಿಸಿದರು. ಅಕ್ಕ ರತ್ನಾವತಿ ಮತ್ತು ಬಾವ ಆನಂದ ಗೌಡ ಇವರಿಗೆ ಪ್ರೋತ್ಸಾಹ ನೀಡಿದರು.

ಎರಡು ದಿನಗಳಲ್ಲಿ ಪೂರ್ಣ
ಚಂದ್ರಲೇಖಾ ಅವರ ತೋಟದಲ್ಲಿ 600 ಅಡಕೆ ಮರಗಳಿವೆ. ಅದಕ್ಕೆ ಔಷಧಿ ಸಿಂಪಡಿಸಲು ಎರಡು ದಿನ ಸಾಕಾಗುತ್ತದೆ. ಪ್ರಥಮ ಅವಧಿಗೆ ಎರಡು ಬ್ಯಾರಲ್‌ ಮತ್ತು ಎರಡನೇ ಅವಧಿ ಮೂರು ಬ್ಯಾರಲ್‌ ಔಷಧ ಬೇಕಾಗುತ್ತದೆ. ಎರಡು ದಿನಗಳಲ್ಲಿ ಪೂರ್ತಿ ತೋಟಕ್ಕೆ ಸಿಂಪಡಿಸಲು ಸಾಧ್ಯವಾಗುತ್ತದೆ.

ಆತ್ಮ ವಿಶ್ವಾಸ 
ಸುಳ್ಯ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಚಂದ್ರಲೇಖಾ ರಜಾ ದಿನಗಳಲ್ಲಿ ಔಷಧ ಸಿಂಪಡಿಸುವ ಕೆಲಸ ಮಾಡುತ್ತಾರೆ. ಇತರೆಡೆಗೆ ಇದುವರೆಗೆ ಔಷಧ ಸಿಂಪಡಿಸಲು ಹೋಗಿಲ್ಲ. ಅನಿವಾರ್ಯ ಸಂದರ್ಭ ಎದುರಾದರೆ ಅದಕ್ಕೂ ತಾನು ಸಿದ್ಧ ಅನ್ನುವ ಆತ್ಮವಿಶ್ವಾಸ ಪ್ರದರ್ಶಿಸುತ್ತಾರೆ.

ವಿಶೇಷ ವರದಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.