ಚಾರ್ಮಾಡಿ: ಆಯ ತಪ್ಪಿದರೆ ಕಾದಿದೆ ಅಪಾಯ

ಘಾಟಿ ರಸ್ತೆಗಳಲ್ಲಿ ಕಳೆದ ಮಳೆಗಾಲದ ಸ್ಥಿತಿ ಬಾರದಿರಲಿ

Team Udayavani, Jun 11, 2019, 10:33 AM IST

charmadi

ಬೆಳ್ತಂಗಡಿ: ಕಗ್ಗತ್ತಲ ರಾತ್ರಿ ಸುರಿದ ಭೀಕರ ಮಳೆ. ರಸ್ತೆಯ ಅಂಚಿಗೆ ಜರಿದು ಬಿದ್ದ ಬೆಟ್ಟ. ಕಿರಿದಾದ ರಸ್ತೆಯಲ್ಲಿ ಸಾಲುಗಟ್ಟಿ ನಿಂತ‌ ವಾಹನ. ನಿರ್ಜನ ಪ್ರದೇಶದಲ್ಲಿ ಸಾವಿರಾರು ಮಂದಿ ಆಹಾರ -ನೀರು ಇಲ್ಲದೆ ಸತತ 18 ಗಂಟೆ ಕಾಲ ಕಳೆದ ಮಂದಿ. ಇದು ಕಳೆದ ವರ್ಷದ ಜೂ. 12ರ ಇರುಳು ಚಾರ್ಮಾಡಿ ಘಾಟಿ ರಸ್ತೆಯ ಚಿತ್ರಣ.

ಇಂತಹ ಕಠಿನ ಪರಿಸ್ಥಿತಿ ಈ ಮಳೆಗಾಲದಲ್ಲೂ ಎದುರಾಗಬಹುದೇ ಅಥವಾ ಸುಧಾರಣೆಯಾಗಿದೆಯೇ ಎಂದು ಪರಿಶೀಲಿಸಿದರೆ ಉತ್ತರ ನಿರಾಶಾ ದಾಯಕವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಸ್ತೆಗಳ ಅಂಚು ವಿಸ್ತರಣೆಯಾಗಿರುವುದು ಬಿಟ್ಟರೆ 6, 7ನೇ ತಿರುವುಗಳಲ್ಲಿ ಜರಿದ ಬೆಟ್ಟ ಸಾಲು ಇಂದಿಗೂ ಭಯ ಹುಟ್ಟಿಸುತ್ತದೆ. ದುರಂತ ಸಂಭವಿಸಿ ಒಂದು ವರ್ಷವಾದರೂ ಮಣ್ಣು ತೆರವು ಆಗಿಲ್ಲ.

ಸಾಯಿಲ್‌ ನೈಲಿಂಗ್‌ ಆಗಬೇಕಿತ್ತು
ಇಳಿಜಾರು ರಸ್ತೆಗೆ ಬದಿಯ ಬರೆ ಜರಿಯುವುದನ್ನು ಪ್ರತಿಬಂಧಿಸಲು ಸಾಯಿಲ್‌ ನೈಲಿಂಗ್‌ ರಚನೆಯಂತಹ ಅತ್ಯದ್ಭುತ ತಂತ್ರಜ್ಞಾನವಿದೆ. ಗೋಡೆ ಕೊರೆದು ಕಬ್ಬಣ ಅಥವಾ ಉಕ್ಕಿನ ರಾಡ್‌ ಅಳವಡಿಸಿ ಕಾಂಕ್ರೀಟ್‌ ಲೇಪಿತ ಪದರ ನಿರ್ಮಿಸಿದರೆ ಗುಡ್ಡ ಜರಿತ ತಪ್ಪಿಸಬಹುದು. ಆ ಮಾದರಿಯನ್ನು
ಅಳವಡಿಸಿದಲ್ಲಿ ಮಣ್ಣಿನ ಸವಕಳಿ ತಡೆಗಟ್ಟಬಹುದು ಎಂಬುದು ತಜ್ಞರ ಅಭಿಪ್ರಾಯ.

ದಾರಿದೀಪ/ ನೆಟ್‌ವರ್ಕ್‌ ಇಲ್ಲ
ದುರ್ಗಮ ರಸ್ತೆ ಸಂಚಾರದ ನಡುವೆ ವಾಹನ ಕೆಟ್ಟು ನಿಂತರೆ, ಅಪಾಯ-ಅವಘಡಗಳಾದರೆ ದೇವರಿಗೆ ಪ್ರೀತಿ. ಸೂಕ್ತ ದಾರಿ ದೀಪದ ಕೊರತೆಯಿಂದ ಕತ್ತಲ ಕೂಪದಲ್ಲೇ ಕಳೆಯುವ ಪರಿಸ್ಥಿತಿ ಇದೆ. ಸೋಲಾರ್‌ ದೀಪ ಅಳವಡಿಸುವ ಭರವಸೆ ನನೆಗುದಿಗೆ ಬಿದ್ದಿದೆ. ಅಪಾಯ ಸಂಭವಿಸಿದರೆ ಮಾತ್ರ ಎಚ್ಚೆತ್ತು ಕೊಳ್ಳುವ ಪರಿಸ್ಥಿತಿ ಸರಕಾರದ್ದು ಎಂಬಂತಾಗಿದೆ. ತುರ್ತು ಸಂದರ್ಭ ದೂರವಾಣಿ ಕರೆಗೆ ಮೊಬೈಲ್‌ ನೆಟ್‌ವರ್ಕ್‌ ಇಲ್ಲ. ಚಾರ್ಮಾಡಿ ಚೆಕ್‌ಪೋಸ್ಟ್‌ ಕಳೆದು ಅಣ್ಣಪ್ಪ ಬೆಟ್ಟ ತಲುಪುವ ಮಧ್ಯ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇಂದು ನಿನ್ನೆಯದಲ್ಲ.

75 ಲಕ್ಷ ರೂ.ಗಳಲ್ಲಿ ಚರಂಡಿ ದುರಸ್ತಿ
ರಾಜ್ಯ ಹೆದ್ದಾರಿ ಇಲಾಖೆ 11 ತಿರುವುಗಳ ಇಕ್ಕೆಲಗಳಲ್ಲಿ ಸುಮಾರು 75 ಲಕ್ಷ ರೂ. ಅನುದಾನದಲ್ಲಿ ರಸ್ತೆ ಎರಡೂ ಬದಿ ಚರಂಡಿ ದುರಸ್ತಿ ಮತ್ತು ಮೋರಿಗಳ ಹೂಳೆತ್ತುವ ಕೆಲಸ ಮಾಡಿದೆ. ಒಂದು ಮಳೆಗೆ ಕೆಲವೆಡೆ ರಸ್ತೆಯಲ್ಲೇ ನೀರು ಹರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲ ಪೂರ್ವ ಸಿದ್ಧತೆ ಕುರಿತು ಹಲವು ಸುತ್ತಿನ ಅಧಿಕಾರಿಗಳ ಸಭೆ ಕರೆಯಲಾಗಿದೆ. ಜೆಸಿಬಿ ಮಾಲಕರೊಂದಿಗೆ ಸೋಮವಾರ ಸಭೆ ಕರೆದು ಸಮಾಜಮುಖೀ ಕೆಲಸಕ್ಕೆ ಕೈಜೋಡಿಸುವಂತೆ ವಿನಂತಿಸಿದ್ದೇನೆ. ಶೀಘ್ರದಲ್ಲೇ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗುವುದು.
ಹರೀಶ್‌ ಪೂಂಜ, ಶಾಸಕ

75 ಲಕ್ಷ ರೂ. ಅನುದಾನದಲ್ಲಿ ಚಾರ್ಮಾಡಿ ಘಾಟಿ ರಸ್ತೆ ಅಂಚಿನ ಚರಂಡಿ ಹೂಳೆತ್ತುವ ಕೆಲಸ ಮಾಡಲಾಗಿದೆ. 11 ತಿರುವು ರಸ್ತೆಗಳ ಬದಿ ವಿಸ್ತರಿಸಲಾಗಿದೆ. ಸೂಚನಾ ಫಲಕ, ದಾರಿ ದೀಪ ಸೇರಿದಂತೆ ರಸ್ತೆ ಅಭಿವೃದ್ಧಿ ಕುರಿತು ಡಿಪಿಆರ್‌ ಸಿದ್ಧಪಡಿಸಿ ವರದಿ ನೀಡಲಾಗಿದೆ.
– ರಮೇಶ್‌, ಸ. ಕಾರ್ಯಪಾಲಕ ಎಂಜಿನಿಯರ್‌ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂ ರು

ಚರಂಡಿ ದುರಸ್ತಿಯಾಗಿ ಉತ್ತಮ ಕೆಲಸವಾಗಿದೆ. ಆದರೆ ಕಳೆದ ಬಾರಿ ಮರಳಿನ ಚೀಲಗಳನ್ನು ಪೇರಿಸಿ 7, 5, 4ನೇ ತಿರುವುಗಳನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಈ ಬಾರಿಯ ಮಳೆಗೆ ನೀರಿನ ಒತ್ತಡ ಹೆಚ್ಚಾಗಿ ಕಳೆದ ಬಾರಿಗಿಂತ ದುರ್ಗಮವಾಗುವ ಎಲ್ಲ ಸಾಧ್ಯತೆಗಳಿವೆ.
ಹಸನಬ್ಬ, ಚಾರ್ಮಾಡಿ ನಿವಾಸಿ

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.