ತಮಿಳಿಗೆ ಹಾರಿದ ಛಾಯಾ
Team Udayavani, Jun 7, 2018, 3:21 PM IST
‘ನಮ್ಮ ಕುಡ್ಲ’ ಮೂಲಕ ತುಳು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಡೆದುಕೊಂಡ ಅಶ್ವಿನಿ ಕೋಟ್ಯಾನ್ (ಛಾಯಾ ಹರ್ಷ) ಈಗ ತಮಿಳಿನಲ್ಲಿ ಆಫರ್ ಪಡೆದಿದ್ದಾರೆ. ‘ಪ್ರಿಯಾದ ಕದಲ್’ ಎಂಬ ಹೊಸ ಸಿನೆಮಾದಲ್ಲಿ ಅವರು ಅಭಿನಯಿಸಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ಶೀಘ್ರದಲ್ಲಿ ನಡೆಯಲಿದೆ. ವಿಶೇಷವೆಂದರೆ ಪೊಲೀಸ್ ಆಫೀಸರ್ ರೋಲ್ನಲ್ಲಿ ಛಾಯಾ ಕಾಣಿಸಿಕೊಂಡಿದ್ದಾರೆ.
ತನಿಖಾ ಕಥೆಯ ಈ ಸಿನೆಮಾದ ಎರಡನೇ ಹಂತದ ಶೂಟಿಂಗ್ ಶೀಘ್ರದಲ್ಲಿ ನಡೆಯಲಿದೆ. ಅಂದಹಾಗೆ, ಛಾಯಾ ಎರಡನೇ ತುಳು ಸಿನೆಮಾ ನಿರ್ದೇಶನಕ್ಕೂ ರೆಡಿಯಾಗಿದ್ದಾರೆ. ‘ರಾಮಕೃಷ್ಣ ಗೋವಿಂದ’ ಎಂಬ ಟೈಟಲ್ನ ಕಾಮಿಡಿ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ. ಪ್ರಕಾಶ್ ಧರ್ಮನಗರ, ಅನೂಪ್ ಸಾಗರ್ ಸೇರಿದಂತೆ ಇನ್ನೂ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ತನ್ನ ಮೊದಲ ಚಿತ್ರ ‘ನಮ್ಮ ಕುಡ್ಲ’ ಮಾಸ್ ಫಿಲಂ ಆಗಿದ್ದರೆ, ಇದು ಶೇ.100 ಕಾಮಿಡಿ ಚಿತ್ರ. ಕಥೆ, ಚಿತ್ರಕಥೆ ಪ್ರಕಾಶ್ ಶೆಟ್ಟಿ ಧರ್ಮನಗರ ಅವರದ್ದು.
ಚಕ್ರವರ್ತಿ ನಿರ್ಮಾಪಕರಾಗಿರುವ ಈ ಸಿನೆಮಾಕ್ಕೆ ನವೀನ್ ಸುನಾಗ್ ಕೆಮರಾ ವರ್ಕ್ ಮಾಡಲಿದ್ದಾರೆ. ತುಳುವಿನ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇನ್ನೂ ಹಲವು ಕಲಾವಿದರ ಆಯ್ಕೆ ಈಗಷ್ಟೇ ನಡೆಯುತ್ತಿದೆ. ಹೆಚ್ಚಾ ಕಡಿಮೆ ಸೆಪ್ಟೆಂಬರ್ ವೇಳೆಗೆ ಈ ಚಿತ್ರ ಶೂಟಿಂಗ್ ಕಾಣುವ ನಿರೀಕ್ಷೆ ಇದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ