ಆಧುನಿಕ ವಿಧಾನದಿಂದ ಮೊಟ್ಟೆಯೊಡೆದು ಬರುವ ಕೋಳಿಮರಿ 


Team Udayavani, Oct 30, 2018, 12:09 PM IST

30-october-5.gif

ಮೂಡಬಿದಿರೆ: ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗಳಿಕೆ ಎಂಬ ಯಶಸ್ವಿ ಉದ್ಯಮದ ಸೂತ್ರದಂತೆ ಪುತ್ತಿಗೆಯ ನೆಲ್ಲಿ ಗುಡ್ಡೆಯ ಜನಾರ್ದನಗೌಡ ಎಂಬವರು ಸಾವಿರ ರೂ. ಬಂಡವಾಳ ಹೂಡಿ ಆಧುನಿಕ ಮಾದರಿಯಲ್ಲಿ ಕೋಳಿ ಮೊಟ್ಟೆಯಿಂದ ಮರಿ ಮಾಡುವ ಉದ್ಯಮ ಪ್ರಾರಂಭಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಈ ಉದ್ಯಮ ಪ್ರಾರಂಭಿಸಿರುವ ಜನಾರ್ದನ ಗೌಡ ಅವರು, ಅಂತರ್ಜಾಲ ತಿಳಿದವರಿಂದ ಈ ಕುರಿತು ಮಾಹಿತಿ ಪಡೆದು ಪ್ರಾರಂಭಿಸಿ ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಕೋಳಿ ಮೊಟ್ಟೆಗೆ ನಿಯಂತ್ರಿತ ಉಷ್ಣತೆ ಒದಗಿಸಿ ಮರಿ ಮಾಡುವ ತಂತ್ರಜ್ಞಾನವನ್ನು ಅವರು ಅಳವಡಿಸಿಕೊಂಡಿರುವ ಜನಾರ್ದನ ಗೌಡ ಅವರು, ಇದಕ್ಕಾಗಿ ಸುಮಾರು 2 ಅಡಿ ಉದ್ದ, ಅಗಲ ಮತ್ತು ಎತ್ತರದ ಥರ್ಮೋಕೋಲ್‌ ಪೆಟ್ಟಿಗೆಯನ್ನು ನಿರ್ಮಿಸಿದ್ದಾರೆ. ಮೇಲ್ಭಾಗದಲ್ಲಿ ವಿದ್ಯುತ್‌ ಬಲ್ಬ್, ಒಳಗಡೆ ಸೆನ್ಸಾರ್‌ ಹಾಗೂ ಹೊರಗಡೆ ಉಷ್ಣತೆಯ ಮಾಪಕವನ್ನು ಅಳವಡಿಸಿದ್ದಾರೆ. ಪೆಟ್ಟಿಗೆಯೊಳಗೆ ಕಾಲು ಲೀ. ನೀರನ್ನು ಇರಿಸಲಾಗಿದ್ದು, ಅದಕ್ಕೆ ಉಷ್ಣತೆಯ ಪ್ರಮಾಣ 37.5 ಡಿ.ಸೆ. ಇರುವಂತೆ ರೂಪಿಸಲಾಗಿದೆ. ಉಷ್ಣತೆ ಹೆಚ್ಚಾದರೆ ವಿದ್ಯುತ್‌ ಸಂಪರ್ಕ ಸ್ವಯಂ ಕಡಿತಗೊಂಡು, 37.5 ಡಿ.ಸೆ. ಗೆ ಇಳಿಯುವಂತೆ ಮಾಡಲಾಗಿದೆ. ಪೆಟ್ಟಿಗೆಯಲ್ಲಿ 50 ಮೊಟ್ಟೆಗಳನ್ನಿರಿಸಲು ಸ್ಥಳಾವಕಾಶವಿದೆ.

21 ದಿನದಲ್ಲಿ ಹುಟ್ಟುವ ಕೋಳಿ ಮರಿಗಳು
ಸುಮಾರು 21 ದಿನ ಕಳೆದ ಬಳಿಕ ಮೊಟ್ಟೆಗಳು ಮರಿಗಳಾಗುತ್ತವೆ. ಈ ಮರಿಗಳನ್ನು ಮುಂದೆ ಸಾಧಾರಣ 20 ಡಿ.ಸೆ. ಉಷ್ಣತೆಯ ತಗಡಿನ ಪೆಟ್ಟಿಗೆಯೊಳಗೆ ಇರಿಸಿ, ಬಳಿ ಕ 10- 20 ದಿನಗಳ ಅನಂತರ ಇವು ಮಾರಾಟಕ್ಕೆ ಸಿದ್ಧವಾಗುತ್ತವೆ. ಸಾಮಾನ್ಯವಾಗಿ ಎಲ್ಲ ಮೊಟ್ಟೆಗಳೂ ಮರಿಗಳಾಗುವುದಿಲ್ಲ. ಕೆಲವು ಕಾವು ಕೊಡುವ ಹಂತದಲ್ಲಿ ವ್ಯತ್ಯಾಸಗಳಾಗಿ ‘ಕಲ್ಲಾಗಿ’ ಬಿಡುತ್ತವೆ. ಇಲ್ಲವೇ ಹಾಳಾಗುತ್ತವೆ. ಈ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಬಹುತೇಕ ಎಲ್ಲ ಮೊಟ್ಟೆಗಳಿಂದಲೂ ಮರಿಗಳೂ ಹೊರಬರುತ್ತವೆ. ನಾಟಿಕೋಳಿ ಅಲ್ಲದೆ ಸ್ವರ್ಣರಾಜ, ಗಿರಿರಾಜ ಕೋಳಿ ಮರಿಗಳನ್ನೂ ಇದೇ ಪ್ರಕ್ರಿಯೆಯಲ್ಲಿ ಉತ್ಪಾದಿಸಬಹುದು ಎನ್ನುತ್ತಾರೆ ಜನಾರ್ದನ ಗೌಡ.

ಸಾವಯವ ಕೃಷಿಕ
ಜನಾರ್ದನ ಗೌಡ ಅವರು ಕೋಳಿ ಸಾಕಾಣಿಕೆಯ ಜತೆಗೆ ಕೃಷಿಯಲ್ಲೂ ತೊಡಗಿ ಕೊಂಡಿದ್ದಾರೆ. ತಮ್ಮ ಸ್ವಂತ ಭೂಮಿ ಇಲ್ಲವಾದರೂ, ಬೇರೆಯವರಿಂದ 11 ಎಕ್ರೆ ಭೂಮಿಯನ್ನು ಲೀಸ್‌ ಪಡೆದು ಭತ್ತ, ತೆಂಗು, ತರಕಾರಿಗಳಾದ ಬೆಂಡೆ, ಅಲಸಂಡೆ ಸಹಿತ ಬಸಳೆ ಗಿಡಗಳನ್ನು ಬೆಳೆದು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಉಪ ಸಂಪಾದನೆ ಸಾಧ್ಯ
ದೊಡ್ಡ ಉದ್ಯಮಿಗಳು ಸಂಪೂರ್ಣ ಸ್ವಯಂಚಾಲಿತ ಯಂತ್ರಗಳ ಮೂಲಕ ಕೋಳಿ ಮೊಟ್ಟೆಗಳಿಂದ ಮರಿಗಳನ್ನು ಹುಟ್ಟುಹಾಕುವ ಪ್ರಕ್ರಿಯೆ ನಡೆಸುತ್ತಾರೆ. ಇದೇ ಪ್ರಕ್ರಿಯೆಯನ್ನು ಕನಿಷ್ಠ ವೆಚ್ಚದಲ್ಲಿ ಕೋಳಿ ಸಾಕಾಣಿಕೆ ಮಾಡುವವರು ಬಳಸಿಕೊಂಡರೆ ಅವರಿಗೆ ಉತ್ತಮ ಉಪ ಸಂಪಾದನೆ ಸಾಧ್ಯ.
– ಜನಾರ್ದನ ಗೌಡ, ಕೋಳಿ ಸಾಕಾಣಿಕೆದಾರರು

ಪ್ರತಿ ಮರಿಗೆ 80 ರೂ. 
ಹೀಗೆ ತಯಾರಿಸಿದ ಪ್ರತಿ ಕೋಳಿ ಮರಿಗೆ 80 ರೂ. ನಷ್ಟು ಬೆಲೆ ಇದೆ. ಹಾಗಾಗಿ ಸಾಂಪ್ರದಾಯಿಕವಾಗಿ ಕೋಳಿ ಸಾಕುವವರು ಹೀಗೆ ಯಾಂತ್ರೀಕೃತವಾಗಿ ಮರಿ ಮಾಡುವುದಕ್ಕೆ ಒಂದಿಷ್ಟು ಆಸಕ್ತಿ, ಪರಿಶ್ರಮ ಮಾಡಿದರೆ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ಎನ್ನುತ್ತಾರೆ ಜನಾರ್ದನ ಗೌಡರು. ಈ ಕುರಿತು ಮಾಹಿತಿ ಪಡೆಯಲಿಚ್ಛಿಸುವವರು ಅವರ ಮೊ.ಸಂ. 9901790809 ಅಥವಾ ನೇರವಾಗಿ ಸಂಪರ್ಕಿಸಬಹುದು. 

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.